ಕರ್ನಾಟಕದ ಮಾಧ್ಯಮರಂಗ ಯಾವತ್ತೂ ನಡುರೋಡಲ್ಲಿ ಲಂಗೋಟಿ ಹಾಕಿಕೊಂಡು ಕುಣಿಯುವಷ್ಟು ಮೂರೂಬಿಟ್ಟವಂತೆ ನಡೆದುಕೊಂಡಿರಲಿಲ್ಲ. ಚಾನೆಲ್ ಸರ್ಫ್ ಮಾಡುವಾಗ ಈಗ ತಾನೇ ಸುವರ್ಣನ್ಯೂಸಲ್ಲಿ ಒಂದು ಕ್ರೈಂಪ್ರೋಗ್ರಾಂ ಬರುತ್ತಿತ್ತು. ಅದರಲ್ಲಿ ಕೋತಿ ಆಡಿಸುವರಂತೆ ಕೆಕರುಮಕರಾಗಿ ವೇಷಧರಿಸಿದ್ದ ವ್ಯಕ್ತಿಯೊಬ್ಬ ಕರೆಂಟು ಹೊಡೆಸಿಕೊಂಡವನಂತೆ ಟಂಗುಟಂಗನೆ ಎಗರಾಡಿಕೊಂಡು ಆಂಕರಿಂಗ್ ಮಾಡುತ್ತಿದ್ದ. ಶಿವಮೊಗ್ಗದ ಕಾಲೇಜೊಂದರಲ್ಲಿ ಆಶ್ಲೀಲ ಎಮ್ಮೆಮ್ಮೆಸ್ ಬಹಿರಂಗಗೊಂಡ ವಿದ್ಯಾರ್ಥಿಯೊಬ್ಬಳ ಬಗ್ಗೆ ಆ ಪ್ರೋಗ್ರಾಂ. ಆ ಯುವತಿಯ ಇಡೀ ಎಂಎಂಎಸ್ ಬ್ಲೂಫ್ಲಿಲ್ಮ್ ಅನ್ನೇ ಚೂರೇಚೂರು ಮಬ್ಬಾಗಿಸಿ ಪೂರಾ ಪ್ರಸಾರವಾಯಿತು. ಆಕೆಯ ಮನೆಯ ವಿಳಾಸವನ್ನೂ ಪ್ರಸಾರ ಮಾಡಲಾಯಿತು. ಆ ಯುವತಿ ಮಾಡಿದ ತಪ್ಪಿಗೆ ಆಕೆಯ ಫೋಟೋವನ್ನೂ ಪ್ರಸಾರಿಸಿ ಆಕೆಯ ತಂದೆತಾಯಿಯ ಮಾನವನ್ನೂ ಹರಾಜು ಹಾಕಲಾಯಿತು. ಈ ಪ್ರೋಗ್ರಾಂಗೆ ಸ್ಕ್ರಿಪ್ಟ್ ಬರೆದದ್ದು ಓರ್ವ ಮಹಿಳೆ, ಟಿಆರ್ ಪಿ ಬರುತ್ತೆ ಅಂದ್ರೆ ಬ್ಲೂಫಿಲಮ್ಮನ್ನೂ ಪ್ರಸಾರ ಮಾಡುವ ನೀಚತನಕ್ಕೆ ಇಳಿದ ಸುವರ್ಣನ್ಯೂಸ್ ಸಂಪಾದಕನ ಜಾಗದಲ್ಲಿ ಕುಳಿತ ಮಡೆಯನ ತಲೆಯಲ್ಲಿ ಏನು ತುಂಬಿಕೊಂಡಿದೆ? ಪತ್ರಿಕಾಧರ್ಮದ ಬಗ್ಗೆ ಪುಂಖಾನುಪುಂಖವಾಗಿ ಪುಂಗಿ ಊದುವ ಇತ ಇವತ್ತು ಬ್ಲೂಫಿಲ್ಮ್ ಪ್ರಸಾರ ಮಾಡಿದ್ದನ್ನ ಸಹಿಸಿಕೊಳ್ಳುವುದು ಹೇಗೆ? ಮಿನಿಮಂ ಲೆವೆಲ್ ನಾಚಿಕೆ ಮಾನ ಮರ್ಯಾದೆ ಅನ್ನೋದು ಏನಾದ್ರೂ ಇದೆಯೇ ಈ ಮುಠ್ಠಾಳರಿಗೆ?
ಕವಡೆ ಶಾಸ್ತ್ರದ ಚಿನ್ನಪ್ಪ
0 comments:
Post a Comment