ಶೈನಿಂಗ್ ಗೈಸ್ ತಂಡಕ್ಕೆ ಪ್ರಶಸ್ತಿ : ಮಂಗಳಪದವು ನ್ಯಾಶನಲ್ ಯುವಕ ಮಂಡಲ ಇದರ ವತಿಯಿಂದ ಹೊನಲು ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾಟ ಹಾಗೂ ಸನ್ಮಾನ ಸಮಾರಂಭವು ಇತ್ತೀಚೆಗೆ ಮಂಗಳಪದವು ಕ್ರೀಡಾಂಗಣದಲ್ಲಿ ನಡೆಯಿತು. ೨೪ ತಂಡಗಳು ಭಾಗವಹಿಸಿದ್ದ ಈ ಕಬಡ್ಡಿ ಪಂದ್ಯಾಟದಲ್ಲಿ ಶೈನಿಂಗ್ ಗೈಸ್ ಮಂಗಳಪದವು ತಂಡ ಪ್ರಥಮ, ಮಾಣಿ ಯುವಕ ಮಂಡಲ ದ್ವಿತೀಯ, ಜೈ ಯುವ ಶಕ್ತಿ ಆಲದಪದವು ತಂಡ ತೃತೀಯ ಹಾಗೂ ನೇಶನಲ್ ಯೂತ್ಕ್ಲಬ್ ಮಂಗಳಪದವು ತಂಡ ಚತುರ್ಥ ಸ್ಥಾನವನ್ನು ಪಡೆದುಕೊಂಡಿತು.
ಶಮೀರ್ ಕಲ್ಲಡ್ಕ, ಹಾರಿಸ್ ಕಲ್ಪನೆ ಹಾಗೂ ಝಿಯಾದ್ ಕ್ರಮವಾಗಿ ಸವ್ಯಸಾಚಿ, ಉತ್ತಮ ದಾಳಿಗಾರ ಹಾಗೂ ಉತ್ತಮ ಹಿಡಿತಗಾರ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು.
0 comments:
Post a Comment