ಬಂಟ್ವಾಳ: ಜೀಪೊಂದನ್ನು ಓವರ್ಟೇಕ್ ಮಾಡುವ ಭರದಲ್ಲಿ ರಿಕ್ಷಾವೊಂದು ರಸ್ತೆಗೆ ಪಲ್ಟಿ ಹೊಡೆದ ಪರಿಣಾಮ ಇಬ್ಬರಿಗೆ ಗಂಭೀರ ರೀತಿಯಲ್ಲಿ ಗಾಯಗೊಂಡು ಹಾಗೂ ಯುವತಿಯೊಬ್ಬಳು ಸಣ್ಣಪುಟ್ಟ ಗಾಯಗಳಿಂದ ಅಪಾಯದಿಂದ ಪಾರಾದ ಘಟನೆ ವಿಟ್ಲ ಕಾಶಿಮಠ ಸಮೀಪ ನಿನ್ನೆ ನಡೆದಿದೆ.
ಕರೋಪ್ಪಾಡಿ ಗ್ರಾಮದ ಮಿತ್ತನಡ್ಕ ದರ್ಖಾಸು ನಿವಾಸಿ ಅಬ್ದುಲ್ಲ ಅವರ ಪುತ್ರ ಉಮ್ಮರ್(೪೫), ಹಾಗೂ ಅವರ ಪತ್ನಿ ನೆಬಿಸಾ ಗಂಭೀರವಾಗಿ ಗಾಯಗೊಂಡಿದ್ದು, ಅವರ ಪುತ್ರಿ ಅಪ್ಸಾ(೧೫) ಅಪಾಯದಿಂದ ಪಾರಾಗಿದ್ದು, ವಿಟ್ಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಮೂವರು ಕನ್ಯಾನದ ವಿಜಯಡ್ಕದಿಂದ ವಿಟ್ಲ ಮಾರ್ಗವಾಗಿ ಪುತ್ತೂರು ಆಸ್ಪತ್ರೆಗೆ ಇಬ್ರಾಹಿಂ ಎಂಬವರ ಆಟೋ ರಿಕ್ಷಾದಲ್ಲಿ ತೆರಳುತ್ತಿದ್ದ ಸಂದರ್ಭ ಚಾಲಕ ಕಾಶಿಮಠ ಅಪಾಯಕಾರಿ ತಿರುವಿನಲ್ಲಿ ಜೀಪೊಂದನ್ನು ಓವರ್ಟೇಕ್ ಮಾಡುವ ಭರದಲ್ಲಿ ಆಟೋ ರಿಕ್ಷಾ ರಸ್ತೆಗೆ ಪಲ್ಟಿ ಹೊಡೆದು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿತ್ತು. ಸ್ಥಳೀಯರು ಅವರನ್ನು ವಿಟ್ಲದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಅಪಘಾತ ತೀವ್ರತೆ ರಿಕ್ಷಾ ಸಂಪೂರ್ಣವಾಗಿ ಅಪ್ಪಾಚಿಯಾಗಿದೆ. ವಿಟ್ಲ ಠಾಣಾಧಿಕಾರಿ ರಕ್ಷಿತ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.
0 comments:
Post a Comment