Tuesday 30 December 2014

ಬಯೋತ್ಪಾದಕ ಮಾಧ್ಯಮಗಳು..!

ಇನ್ನೆಷ್ಟು ಮಾನಸಿಕ ಅಸ್ವಸ್ಥರು ಹುಟ್ಟಲಿರುವರೋ....??!!ನಿನ್ನೆಯಷ್ಟೇ ಸಮಾಜ ಘಾತುಕ ಭಯ ಉತ್ಪಾದಕರ ಬಾಂಬ್ ದಾಳಿಗೆ ಬೆಂಗಳೂರು ಬೆಚ್ಚಿಬಿದ್ದಿತ್ತು.ಒಬ್ಬರು ಅಮಾಯಕ ಮಹಿಳೆ ಇವರ ದುಷ್ಕೃತ್ಯಕ್ಕೆ ಬಲಿಯಾಗಿದ್ದರು.ಬಾಂಬ್ ಸ್ಪೋಟವಾದಾಗ ಸ್ಪೋಟದ ಸಮಗ್ರತೆಯನ್ನು ಸಚಿತ್ರವಾಗಿ ವರದಿ ಮಾಡಬೇಕಾದಂತಹ ಮಾಧ್ಯಮಗಳು ಕಾನೂನುಪಾಲಕರಿಗಿಂತ ತ್ವರಿತವಾಗಿ ಅಪರಾಧಿಗಳನ್ನು ಸೆರೆಹಿಡಿಲು ತಾಮುಂದು,ತಾಮುಂದುಅನ್ನುವಂತೆ ಪೈಪೋಟಿ ನಡೆಸಿದವು ಪೋಲೀಸ್ಉನ್ನತಾಧಿಕಾರಿಗಳುಸ್ಪೋಟದ ಹಿಂದಿರುವ ಶಕ್ತಿಗಳು ಯಾರೆಂದು ಗೊತ್ತಿಲ್ಲ ಎಂದು ಹೇಳಿಕೆ ನೀಡುವಾಗ ಇಲ್ಲಿನ ಮಾಧ್ಯಮಗಳಿಗೆ ಈ ಸಲ ಅದು ಯಾವುದೋ "ಅಲ್ ಉಮ್ಮ " ಅನ್ನುವ ಸಂಘಟನೆಯ ಕೈವಾಡವೆಂದು ಪ್ರಸಾರ ಮಾಡಿಯೇ ಬಿಟ್ಟಿತು...!!ಅದರಲ್ಲಿ ಅಚ್ಚರಿ ಪಡುವಂತದ್ದೇನಿಲ್ಲ, ಎಲ್ಲಿಯಾದರೂ ಬಾಂಬ್ ಸ್ಪೋಟಗೊಂಡರೆ ಅದರ ಪೂರ್ವಾಪರ ತಿಳಿಯದೆ ಯಾವುದೋ ಇಸ್ಲಾಮಿಕ್ ಹೆಸರಿನ ಸಂಘಟನೆಗಳ ಮೇಲೆ ಹೊರಿಸಿ ಮುಸ್ಲಿಮರನ್ನು ಸಂಶಯದಿಂದ ನೋಡುವಂತಾಗಿಸುವುದು ಮಾಧ್ಯಮದವರಿಗೆ ಪರಿಪಾಠವಾದಂತಿದೆ.ಜನತೆಯ ಮನಸ್ಸಿನಿಂದ ನಿನ್ನೆಯ ಬಾಂಬ್ ಸ್ಪೋಟದ ಭಯ ಮರೆಯಾಗುವ ಮುನ್ನವೇ ಅದು ಯಾವುದೋ ಅಬ್ದುಲ್ಲ ಖಾನ್ ಅನ್ನುವ ಹೆಸರಿನಲ್ಲಿ ಈ ಮೈಲ್ ರವಾನೆಯಾಗುತ್ತದೆ.ಬಾಂಬ್ ಸ್ಪೋಟದ ಬೆದರಿಕೆಯನ್ನು ಹಾಕುತ್ತಾನೆ ಮೂಡಬಿದ್ರೆ ಆಳ್ವಾಸ್ ಕಾಲೇಜಿಗೆ,ಅದಲ್ಲದೆ ನನ್ಜೊತೆ 600 ಯುವಕರ ಪಡೆ ಇದೆಯೆಂದು.ಮೊದಲೇ ಒಂದು ಸಮುದಾಯವನ್ನು ಗುರಿಯಾಗಿಸಿ ವರದಿ ಬಿತ್ತರಿಸುವ ಮಾಧ್ಯಮಗಳಿಗೆ ಒಬ್ಬ ಮುಸ್ಲಿಮನ ಹೆಸರು ಕೇಳಿಸಿದಾಗ ಆಹಾರ ದೊರಕಿದಂತಾಯ್ತು.ವರ್ಣರಂಜಿತವಾದ ವರದಿಗಳನ್ನು ಬಿತ್ತರಿಸಲು ಪ್ರಾರಂಭಿಸಿದವು..!!ಕಾನೂನು ಪಾಲಕರ ಸಮಯೋಚಿತವಾದ ತನಿಖೆಯಿಂದ ಈ ಮೇಲ್ ಕಳುಹಿಸಿದವನು ಅಬ್ದುಲ್ಲ ಖಾನ್ ಅಲ್ಲ ಅದು ಸತೀಶ್ ಅಂತ ಗೊತ್ತಾದದ್ದೇ ತಡ ಕ್ಷಣ ಮಾತ್ರದಲ್ಲಿ ಆತನನ್ನು ಮಾನಸಿಕ ರೋಗಿಯನ್ನಾಗಿಸಿ ಬಿಟ್ಟರು...!!!ಇಷ್ಟೆಲ್ಲಾ ಜ್ವಲಂತವಾದ ಸಮಸ್ಯೆಗಳು ಸಮಾಜದಲ್ಲಿ ತಲೆದೂರುತ್ತಾ ಇರುವಾಗ ಒಬ್ಬ ಮಾನಸಿಕ ರೋಗಿಯಾದವನಿಗೆ ತನ್ನಈ ಮೇಲ್ ಖಾತೆಯಿಂದ ಅನ್ಯ ಸಮುದಾಯದ ಯುವಕನ ಹೆಸರಲ್ಲಿ ಇಂತಹ ಮೇಲ್ ಕಳುಹಿಸಲು ಸಾಧ್ಯನಾ...??ಇಂತಹ ಮಾನಸಿಕ ರೋಗಿಗಳನ್ನು ಸೂಕ್ತವಾಗಿ ತನಿಖೆಗೊಳಪಡಿಸಿದರೆ ಇನ್ನಷ್ಟು ಮಾನಸಿಕ ರೋಗಿಗಳನ್ನು ಪತ್ತೆಹಚ್ಚಲು ಸಾಧ್ಯವಾದೀತು.ಅಂದು ಪ್ರದೀಪ್,ಇಂದು ಸತೀಶ್..ನಾಳೆ ಇನ್ನೊಬ್ಬ ಮಾನಸಿಕ ರೋಗಿ ಬೆಳಕಿಗೆ ಬರುವುದಕ್ಕಿಂತ ಮುಂಚೆ ಕಾನೂನು ಪಾಲಕರು ಜಾಗೃತರಾಗಬೇಕಿದೆ.ಮಾನಸಿಕ ಅಸ್ವಸ್ಥತೆ ದೇಶದ ಶಾಂತಿ,ಸೌಹಾರ್ದತೆಗೆ ಮಾರಕವಾಗದಿರಲಿ.

ಸ್ನೇಹಜೀವಿ ಅಡ್ಕ

Friday 26 December 2014

ಸಂಭ್ರಮ..!

ಭಾರತ ಸಂಭ್ರಮಿಸುತ್ತಿದೆ... 
ಚಂದ್ರನಲ್ಲಿಗೆ ತಾನು ಮುಟ್ಟಿದೆನೆಂದು. 
 
ಮೂರು ಹೊತ್ತು ಊಟವಿಲ್ಲದ 
ಕಡು ಬಡವನನ್ನು ಮೆಟ್ಟಿ.. 
ಮನೆಯಿಲ್ಲದೆ ಮರದಡಿಯಲ್ಲಿ 
ಮಲಗುವ ಕಂದಮ್ಮಗಳ ತುಳಿದು.. 
ಎಳೆ ಮಗುವನ್ನು ಬೆನ್ನಿಗೆ ಕಟ್ಟಿ 
ದುಡಿಯುವ ಹೆಣ್ಣು ಮಗಳ ಕಡೆಗಣಿಸಿ.. 
ತಾನು ಸೀದಾ ಹೋದದ್ದು ಚಂದ್ರನಲ್ಲಿಗೆ... 
 
ಭೂಮಿಯಲಿ ಸಿಗದ ಮನಶಾಂತಿ 
ಚಂದ್ರನಲ್ಲಿ ಹುಡುಕುವ ತವಕವೇ ? 
ಮುಂದುವರಿದ ವಿಶ್ವ ರಾಷ್ಟ್ರಗಳಿಗೆ 
ಸರಿ ಸಾಟಿಯಾಗಿ ನಿಲ್ಲುವ ಹಂಬಲವೇ ? 
ಕೂಡಿಟ್ಟ ಜನರ ಸಂಪತ್ತನ್ನು 
ಮುಗಿಸಿ ಬಿಡುವ ತಂತ್ರವೇ ? 
      ಗೊತ್ತಿಲ್ಲ! 
ಅಂತೂ ನಾವು ತಲುಪಿದೆವು ಚಂದ್ರನಲ್ಲಿಗೆ... 
 
ಭಾರತ ಸಂಬ್ರಮಿಸುತ್ತಿದೆ ... 
ಚಂದ್ರನಲ್ಲಿಗೆ ತಾನು ಮುಟ್ಟಿದೆ ನೆಂದು... 
 
                      @sha kudradka @

ಹಿಂಸೆ


ಮನುಷ್ಯ ದೇಹಗಳು  
ಛಿದ್ರಗೊಂಡು ಬೀಳುತ್ತಿವೆ, 
ಗಾಳಿಯ ರಭಸಕ್ಕೆ  
ಬಿದ್ದ ತರಗೆಲೆಯಂತೆ  
 
ಹಿಂಸಾ ಮುಖ  
ವ್ಯಾಘ್ರರ ಕ್ರೂರ ಕೈಗಳ  
ರುದ್ರ ನರ್ತನಕ್ಕೆ  
ಬಲಿಯಾಗುತ್ತಿದೆ ಬಡ ಜೀವ  
 
ಮರಣದ ನೋವು  
ಅರಿತವನೊಬ್ಬ  
ಮನುಷ್ಯ ಜೀವ  
ತೆಗೆಯುವನೇ? 
 
ತಾನು ಕೊಲ್ಲುವ  
ವ್ಯಕ್ತಿಯ ನಂಬಿ  
ಬದುಕುವ ಕುಟುಂಬವ  
ಮರೆತನೆ ?  
 
ಧರ್ಮ, ಪಾರ್ಟಿಗಾಗಿ  
ಹಿಂಸೆ ಗಿಳಿಯುವ  
ನೀಚ ಪ್ರವೃತ್ತಿ  
ಕೊನೆಗೊಳ್ಳುವುದಾದರೂ ಎಂದು? 
 
ಬಾಪೂಜಿ ಕಂಡ  
"ರಾಮ ರಾಜ್ಯ"  
ಕಟ್ಟುವ ಸಮಯ  
ಬರುವುದಾದರೂ ಎಂದು ?  
 
 
                - ಷಾ ಕುದ್ರಡ್ಕ

Saturday 6 December 2014

ಮರೆಯದಿರೋಣ ಆ ಬಾಬರಿ..!

ಅದೊಂದು ಕಾಲವಿತ್ತು, ಹಿಂದೂ ಮುಸ್ಲಿಮರು ಪರಸ್ಪರ ಭೇಧಭಾವವಿಲ್ಲದೆ ಐಕ್ಯತೆಯಿಂದ ಬದುಕುತ್ತಿದ್ದಂತಹ ಕಾಲವಾಗಿತ್ತು.ಇವರ ಈ ಐಕ್ಯತೆಯು ಬ್ರಿಟೀಷರಿಗೆ ತನ್ನ ರಾಜ್ಯ ವಿಸ್ತರಣೆಗೆ ಕಗ್ಗಂಟಾಗಿ ಉಳಿಯಿತು.ಇವರ ಐಕ್ಯತೆಯನ್ನು ಒಡೆಯಲು ಬ್ರಿಟೀಷರು ಹಲವಾರು ತಂತ್ರಗಳನ್ನು ಪ್ರಯೋಗಿಸಿದರು,ಆದರೆ ಅದರಲ್ಲಿ ಯಾವುದರಲ್ಲಿಯೂ ಸಫಲತೆಯನ್ನು ಕಾಣದೇ ಇದ್ದಾಗ ಹಿಂದೂ ಮತ್ತು ಮುಸ್ಲಿಮರ ಮಧ್ಯೆ ಪರಸ್ಪರ ಭಿನ್ನಮತವನ್ನು ಸ್ರಷ್ಟಿಸಲು ಇವರು ಕಂಡುಹಿಡಿದ ವಾಮಮಾರ್ಗವಾಗಿತ್ತು ಈ ಬಾಬರಿ ಮಸೀದಿ ವಿವಾದ.ಅದಕ್ಕಾಗಿ ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಕಿಚ್ಚನ್ನು ಹಬ್ಬಿಸಿ ಹಿಂದೂ ಮತ್ತು ಮುಸಲ್ಮಾನರ ಮಧ್ಯೆ ಭಿನತೆಯನ್ನು ಸ್ರಷ್ಟಿಸುವಲ್ಲಿ ಸಫಲರಾದರು.ಬ್ರಿಟಿಷರು ಭಾರತ ಬಿಟ್ಟು ತೊಲಗಿದ ನಂತರ ಅವರು ಮುಂದುವರಿಸದೇ ಬಿಟ್ಟಿದ್ದ ಕೆಲಸವನ್ನು ಮುಂದುವರಿಸಲು ಸ್ವಾತಂತ್ರ್ಯಾ ಪೂರ್ವದಲ್ಲಿ ಅವರ ಗೂಡಾಚಾರಿಗಳಾಗಿದ್ದಂತಹ ಸಂಘಪರಿವಾರದವರು ಗುತ್ತಿಗೆ ಪಡೆದುಕೊಂಡರು.ಹೀಗೆ ಬ್ರಿಟೀಷರಿಂದ ಕಲಿತಿದ್ದ ಹಲವು ಶಕುನಿಯ ಬುದ್ಧಿಗಳನ್ನು ಪ್ರಯೋಗಿಸಿ ಬಾಬರಿ ಮಸೀದಿಯನ್ನು ನೆಲಸಮಗೊಳಿಸುವಲ್ಲಿ ಯಶಸ್ವಿಯೂ ಆದರು.ಇಲ್ಲಿ ಸಂಘಪರಿವಾರದ ಉದ್ದೇಶ ಮಸೀದಿಯನ್ನು ಧ್ವಂಸಗೊಳಿಸುವುದಾಗಿರಲ್ಲಿಲ್ಲ ಬದಲಾಗಿ ದೇಶಾದಾದ್ಯಂತ ಕೋಮುಗಲಭೆಯನ್ನು ಸ್ರಷ್ಟಿಸಿ,ಮುಸಲ್ಮಾನರ ಪ್ರಾರ್ಥನಾಲಯಗಳನ್ನು ನಾಶ ಮಾಡಿ ಅವರ ಮನದಲ್ಲಿ ಭಯವನ್ನು ತುಂಬಿಸಿ ಅವರ ಶಕ್ತಿಯನ್ನು ನಿಷ್ಕ್ರಿಯಗೊಳಿಸಿ  ತಮ್ಮದೇ ಆದ ಒಂದು ಹೊಸ ಸಾಮ್ರಾಜ್ಯವನ್ನು ರೂಪಿಸುವ ಬಹುದೊಡ್ಡ ಯೋಜನೆಯೊಂದನ್ನು ಕೈಗೊಂಡಿತ್ತು ಆದರೆ ಇಸ್ಲಾಮಿನ ತಕ್ವಗಳನ್ನು ಮೈಗೂಡಿಸಿಕೊಂಡು ಅಲ್ಲಾಹನಿಗೆ ಹೊರತು ಬೇರೆ ಯಾರಿಗೂ ಹೆದರದ ಹಲವು ಮುಸಲ್ಮಾನರು ಈ ಸಮಾಜದಲ್ಲಿ ಇನ್ನೂ ಸಹ ಜೀವಂತವಾಗಿರುವುದರಿಂದ ಇವರು ಹಾಕಿದ ಗುರಿಯ ಒಂದಂಶವನ್ನೂ ಮುಟ್ಟಲು ಈಗಲೂ ಸಹ ಹೆಣಗಾಡುತ್ತಿದ್ದಾರೆ.
    ಬಾಬರಿ ಮಸೀದಿ ಶಹೀದ್ ಆಗಿ ಇಂದಿಗೆ ವರುಷ ೨೨ ಸಂದರೂ ಅದರ ನೆನಪು ಮಾತ್ರ ಎಂದೆಂದಿಗೂ ಅಮರ,ಆದರೆ ಇದರ ಹಿಂದಿರುವ ಹಲವಾರು ಸತ್ಯಾಂಶಗಳು ನಮ್ಮಲ್ಲಿ ಹಲವರಿಗೆ ತಿಳಿದಿಲ್ಲ ಆದ್ದರಿಂದ "ನ್ಯಾಯದ ನಿರೀಕ್ಷೆಯಲ್ಲಿ ಬಾಬರ್ ಮಸೀದಿ" ಎಂಬ ಪುಸ್ತಕದಿಂದ ಆಯ್ದಂತಹ ಕೆಲವು ಪ್ರಮುಖ ಘಟನಾವಳಿಗಳನ್ನು ನಿಮಗೆ ನೆನಪಿಸುವ ಉದ್ದೇಶದಿಂದ ಇಲ್ಲಿ ವಿವರಿಸಿದ್ದೇನೆ

 *1528:ಆಡಳಿತಗಾರ ಬಾಬರ್ ಗೆ ಗೌರವಯುತವಾಗಿ ಮುಘಲ್ ಗವರ್ನರ್ ಮೀರ್ ಬಾಕ್ರಿ ಬಾಬರಿ ಮಸ್ಜಿದ್ ನಿರ್ಮಿಸಿದನು.ಮಧ್ಯಕಾಲೀನ ಸಾಹಿತ್ಯದಲ್ಲಿ ಹಿಂದೂ ಮಂದಿರದ ಕುರಿತು ಅಥವಾ ಸ್ಥಳದಲ್ಲಿ ರಾಮನ ಸಂಬಂದದ ಕುರಿತು  ಯಾವುದೇ ರೀತಿಯ ಪ್ರಸ್ತಾಪವಿಲ್ಲ

*1532-1623:ತುಳಸಿದಾಸನು ರಾಮಯಣದ ಹಿಂದಿ ಆವ್ರತಿ’ರಾಮ್ ಚರಿತ್ ಮಾನಸ್’ ಅನ್ನು ಬರೆಯುತ್ತಾನೆ.ರಾಮನನ್ನು ಹಿಂದೂ ದೇವರಾದ ವಿಷ್ಣುವಿನ ಅವತಾರವಾಗಿ ಪೂರ್ಣ ದೇವತೆಯ ಸ್ಥಾನಕ್ಕೆ ಏರಿಸಲಾಯಿತು,ತುಳಸಿದಾಸನು ಅಯೋದ್ಯೆಯಲ್ಲಿ ಬಾಬರಿ ಮಸ್ಜಿದ್ ನೊಂದಿಗೆ ರಾಮ ಜನ್ಮ ಸ್ಥಳದ ಸಂಬಂದವನ್ನು ಎಲ್ಲಿಯೂ ಕಲ್ಪಿಸಿಲ್ಲ.

*1759-60:ರಾಜ್ ಚತುರ್ಮಾನ್ ತನ್ನ"ಚಹರ್ ಗುಲ್ಶನ್" ನಲ್ಲಿ ಮೊದಲ ಬಾರಿಗೆ ಆಧುನಿಕ ಅಯೋಧ್ಯೆಯು ರಾಮನ ಜನ್ಮಸ್ಥಾನವಾಗಿರುವ ಸಾಧ್ಯತೆ ಇದೆ ಎಂದು ಉಲ್ಲೇಖಿಸುತ್ತಾನೆ.ಆದರೆ ಬಾಬರಿ ಮಸೀದಿಯೊಂದಿಗೆ ಇದರ ಸಂಬಂದದ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲ.

*1788:ಕ್ಯಾಥೋಲಿಕ್ ಧರ್ಮಗುರು ಜೋಸೆಫ್ ಟೀಫನ್ತೆಲೆರ್ ರಾಮ ಜನ್ಮಸ್ಥಳವು ಮಸ್ಜಿದ್ ಸಮೀಪದಲ್ಲಿದೆ ಎಂದು ನಂಬಲಾಗಿದೆ ಎಂದು ಉಲ್ಲೇಖಿಸುತ್ತಾನೆ.ಮಸ್ಜಿದ್ ರಾಮನ ಜನ್ಮಸ್ಥಳವಾಗಿರಬಹುದೆಂಬ ಮೊತ್ತಮೊದಲ ಪ್ರಸ್ತಾಪದಲ್ಲಿ ಯಾವುದೇ ದಾಖಲೆಗಳು ಅಥವಾ ಪುರಾವೆಗಳನ್ನು ನೀಡಿಲ್ಲ.ಅಯೋಧ್ಯೆಯಲ್ಲಿರುವ ಹಲವು ಪ್ರದೇಶಗಳನ್ನು ರಾಮನ ಜನ್ಮಸ್ಥಳ ಎಂದು ಹೇಳಲಾಗುತ್ತಿತ್ತು.

*1859:ಬ್ರಿಟೀಷ್ ಆಡಳಿತವು ಮಸ್ಜಿದ್ ನ ಒಳಾಂಗಣವನ್ನು ಮುಸ್ಲಿಮರಿಗೆ ಮತ್ತು ಹೊರಾಂಗಣವನ್ನು ಹಿಂದೂಗಳಿಗೆ ಪ್ರಾರ್ಥನೆ ಮಾಡಲು ಅನುಮತಿಸುವುದರೊಂದಿಗೆ ಪ್ರತ್ಯೇಕ ಪ್ರಾರ್ಥನಾಲಯಗಳಾಗಿ ಬೇರ್ಪಡಿಸುದಕ್ಕೆ ಬೇಲಿ ಹಾಕುತ್ತದೆ

*1885:ರಾಮ್ ಚಬೂತ್ರದಲ್ಲಿ ಮಂದಿರವನ್ನು ಕಟ್ಟಲು ಅನುಮತಿಯನ್ನು ಕೋರಿ ಮಹಾಂತ್ ರಘುವೀರ್ ನಿಂದ ಮೊದಲ ದೂರು ದಾಖಲಾಗುತ್ತದೆ,ಆದರೆ ಪೈಝಾಬಾದ್ ಜಿಲ್ಲಾಕೋರ್ಟ್ ದೂರನ್ನು ತಿರಸ್ಕರಿಸಿತು
 
*ಡಿಸೆಂಬರ್22,1949:ಸಂಘಪರಿವಾರದ ಗುಂಪೊಂದು ರಾತ್ರಿ ಸಮಯದಲ್ಲಿ ಯಾರಿಗೂ ಗೊತ್ತಾಗದ ರೀತಿಯಲ್ಲಿ ರಾಮನ ವಿಗ್ರಹವೊಂದನ್ನು ಮಸೀದಿಯೊಳಗೆ ಇರಿಸುತ್ತದೆ

*ಜನವರಿ 6,1950:ಜಿಲ್ಲಾ ಮಾಜಿಸ್ಟ್ರೇಟ್ ಕೆ.ಕೆ ನಯ್ಯರ್ ಎಂಬಾತನು ಬಾಗಿಲುಗಳಿಗೆ ಬೀಗಹಾಕುವ ಮೂಲಕ ಮತ್ತು ಅಯೋದ್ಯೆ ಮುನ್ಸಿಪಾಲ್ ಕಾರ್ಪೋರೇಷನ್ ಅನ್ನು ಆಸ್ತಿ ನಿರ್ವಾಕನಾಗಿ ನೇಮಿಸಿ ಮಸೀದಿಯನ್ನು ಜಪ್ತಿ ಮಾಡುತ್ತಾರೆ.ಕೆಲಸಮಯದ ಜನ ಸಂಘದ ಟಿಕೆಟ್ ಮೂಲಕ ಸಂಸದನಾಗಿ ಆಯ್ಕೆಯಾದ ನಯ್ಯರ್ ವಿಗ್ರಹಗಳಿಗೆ ಪೂಜೆ ಮಾಡುವ ಮತ್ತು ಅದರ ಉಸ್ತುವಾರಿ ನಡೆಸುವ ಅನುಮತಿಯನ್ನು ನೀಡುತ್ತಾನೆ.ಮುಸ್ಲಿಮರು ತಮ್ಮ ಸ್ವಂತ ಮಸೀದಿಯ 300 ಯಾರ್ಡ್ ಗಿಂತ ಹತ್ತಿರ ಸಮೀಪಿಸುವುದಕ್ಕೆ ನಿರ್ಬಂದಿಸಲಾಯಿತು.

*1950:ಮಸೀದಿ ಗೇಟ್ ಗಳು ಮುಕ್ತವಾಗಬೇಕು ಮತ್ತು ನಮಾಜ್ ಗೆ ಅನುಮತಿಸಬೇಕೆಂದು ಕೋರಿ ಹಾಶಿಮ್ ಅನ್ಸಾರಿ ಪೈಝಾಬಾದ್ ಕೋರ್ಟ್ ನಲ್ಲಿ ದಾವೆ ಹೂಡುತ್ತಾರೆ.ಇದಾದ ಕೂಡಲೇ ಆಸ್ಥಾನ್ ಜನ್ಮ ಭೂಮಿಯಲ್ಲಿ ವಿಗ್ರಹಗಳಿಗೆ ಪ್ರಾರ್ಥನೆ ಮಾಡಲು ಅವಕಾಶವನ್ನು ಬೇಡುತ್ತಾ  ಗೋಪಾಲ್ ವಿಶಾರದ್ ಮತ್ತು ಮಹಾಂತ್ ಪರಮಹಂಸ ರಾಮಚಂದ್ರ ದಾಸ್ ದಾವೆ ಹೂಡುತ್ತಾರೆ.

*1959:ಮಂದಿರದ ವ್ಯವಸ್ಥಾಪಕತ್ವದಿಂದ ಪ್ರಿಯಾದತ್ ರಾಮ್ ರನ್ನು ವಜಾಗೊಳಿಸುವಂತೆ ಹಾಗೂ ತನ್ನನ್ನೆ ಮಂದಿರದ ಉಸ್ತುವಾರಿ ನೋಡಿಕೊಳ್ಳಲಾಗುವಂತೆ ಕೋರಿ ನಿರ್ಮೋಹಿ ಅಖಾಡವು (ಮಹಂತ್ ಬಾಸ್ಕರ್ ದಾಸ್ ನೆತ್ರತ್ವದಲ್ಲಿ)ಪೈಝಾಬಾದ್ ಕೋರ್ಟ್ ನಲ್ಲಿ ಒಂದು ದೂರನ್ನು ದಾಖಲಿಸಿತಿ.

*1961:ಮಸ್ಜಿದ್ನಲ್ಲಿ ಮುಸ್ಲಿಮರಿಗೆ ಪ್ರಾರ್ಥನೆ ಮಾಡುವ ಹಕ್ಕನ್ನು ಮರು ಸ್ಥಾಪಿಸುವಂತೆ ಉತ್ತರಪ್ರದೇಶದ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ ದಾವೆಯನ್ನು ಹೂಡಿತು.

*1964:ಹಿಂದೂಗಳು ಸಲ್ಲಿಸಿದ ಮೂರು ದಾವೆ ಮತ್ತು ಮುಸ್ಲಿಮರು ಸಲ್ಲಿಸಿದ ಒಂದು ದಾವೆಯನ್ನು ದಾವೆ ನಂ 12/196 ಎಂದು ಕ್ರೋಡಿಕರಿಸುವುದರೊಂದಿಗೆ ಈ ವಿವಾದ ಪ್ರಮುಖ ಪ್ರಮುಖ ದಾವೆಯಾಗಿ ಮಾರ್ಪಟ್ಟಿತು.

*1984:ಮೊಘಲ್ ಸಾಮ್ರಾಟ ಬಾಬರ್ ರಾಮ ಮಂದಿರವನ್ನು ನಿರ್ಮೂಲನಗೊಳಿಸಿದ್ದಾನೆ ಎಂದು ಹೇಳಿಕೊಳ್ಳುವ ಕೆಲವು ಮತಾಂಧ ಹಿಂದೂಗಳು ಮಸ್ಜಿದ್ ತಮ್ಮದೇ ಎಂದು ವಾದಿಸುತ್ತಾ ಅದರ ಬೀಗ ತೆಗೆಯುವಂತೆ ವಿಶ್ವ ಹಿಂದೂ ಪರಿಷತ್ ನೇತ್ರತ್ವದಲ್ಲಿ ಬ್ರಹತ್ ಚಳುವಳಿಯೊಂದನ್ನು ಪ್ರಾರಂಭಿಸಿತು.

*1984:ವಿವಾದಿತ ಸ್ಥಳವನ್ನು ಮುಕ್ತಗೊಳಿಸಿ ಅಲ್ಲಿ ರಾಮ ಮಂದಿರವನ್ನು ಕಟ್ಟಲು ವಿಶ್ವ ಹಿಂದೂ ಪರಿಷತ್ ಸಮಿತಿಯೊಂದನ್ನು ರಚಿಸಿತು.
 
*ಪೆಬ್ರವರಿ 1,1986:ಸಾರ್ವಜನಿಕವಾಗಿ ಆರಾದನೆ ನಡೆಸಲು ಸಾಧ್ಯವಾಗಬೇಕೆಂದು ಹಿಂದೂಗಳ ಪರವಾಗಿ ಯು.ಸಿ ಪಾಂಡೆ ಎಂಬಾತನು ನೀಡಿದ ದಾವೆಯನ್ನು ಆಧರಿಸಿ ಜಿಲ್ಲಾ ಮ್ಯಾಜಿಸ್ಟ್ರೀಟ್ ಟಿ.ಕೆ ಪಾಂಡೆಯ ಶಿಫಾರಸ್ಸಿನ ಮೇರೆಗೆ ಜಿಲ್ಲಾ ನ್ಯಾಯಾಧೀಶ ಕೆ.ಎಂ ಪಾಂಡೆ ಎಂಬಾತನು ಮುಸ್ಲಿಮರ ಅಭಿಪ್ರಾಯವನ್ನು ಕಡೆಗಣಿಸಿ ಹಿಂದೂಗಳಿಗೆ ಸಾರ್ವಜನಿಕವಾಗಿ ಪ್ರಾರ್ಥಿಸಲು ಅನುಮತಿ ನೀಡಿದನು.ಮಾಧ್ಯಮಗಳ ಹಾಗು ಭರ್ಜರಿ ಪ್ರಚಾರದ ಸಮ್ಮುಖದೊಂದಿಗೆ ಮಸ್ಜಿದನ್ನು ಹಿಂದೂಗಳಿಗೆ ನೀಡಲಾಯಿತು.

*ನವೆಂಬರ್ 9,1989:ಆಗಿನ ಪ್ರಧಾನಿ ರಾಜೀವ್ ಗಾಂಧಿಯವರು ವಿವಾದಿತವಲ್ಲದ ಸ್ಥಳದಲ್ಲಿ ಶಿಲಾನ್ಯಾಸ ಅಥವಾ ನೆಲ ಅಗೆಯುವ ಕೆಲಸಕ್ಕೆ ಅನುಮತಿ ನೀಡಿದರು.

*ನವೆಂಬರ್11,1989:ಬಿ.ಜೆ.ಪಿ ಮತ್ತು ವಿ.ಎಚ್.ಪಿ ಕೂಟವು ಮುಸ್ಲಿಮರು ತಮ್ಮ ವಕ್ಫ್ ನ ಭಾಗವಾಗಿದೆ ಎಂದು ವಾದಿಸುತ್ತಿದ್ದ ಭೂಮಿ ಪಕ್ಕದಲ್ಲೇ ಮಂದಿರ ನಿರ್ಮಾಣಕ್ಕಾಗಿ ಅಡಿಪಾಯವನ್ನು ಹಾಕಿತು.ರಕ್ತ ರಂಜಿತ ರಥ ಯಾತ್ರೆಯು ದ್ವೇಷವನ್ನು ಬಿತ್ತಿತು,ಮುಸ್ಲಿಮ್ ವಿರೋಧಿ ಭಾವನೆಯನ್ನು ಕೆರಳಿಸಿತು ಮತ್ತು ವ್ಯಾಪಕ ಗಲಭೆಯನ್ನು ಸ್ರಷ್ಟಿಸಿತು.ಈ ವಿವಾದವು ಹೈಕೋರ್ಟ್ ಮತ್ತು ಸುಪ್ರೀಮ್ ಕೋರ್ಟ್ ಮುಂದೆ ಕಾಯ್ದಿರಿಸಲಾಯಿತು.

*ಸೆಪ್ಟೆಂಬರ್ 25,1990:ಆಗಿನ ಬಿ.ಜೆ.ಪಿ ಅಧ್ಯಕ್ಷ ಅಡ್ವಾಣಿಯ ನೇತ್ರತ್ವದಲ್ಲಿ ಗುಜರಾತಿನ ಸೋಮನಾಥದಿಂದ ಉತ್ತರಪ್ರದೇಶದ ಅಯೋಧ್ಯೆವರೆಗೆ ರಥಯಾತ್ರೆಯನ್ನು ನಡೆಸಲಾಯಿತು.

*ನವೆಂಬರ್,1990:ಬಿಹಾರದ ಸಮಸ್ತಿಪುರದತ್ತ ಸಾಗುತ್ತಿರುವ ಅಡ್ವಾಣಿಯನ್ನು ಬಂದಿಸಲಾಯಿತು.ಅದರ ಪರಿಣಾಮವಾಗಿ ಬಿ.ಜೆ.ಪಿ ಮತ್ತು ಎಡಪಕ್ಷಗಳ ಬೆಂಬಲದ ವಿ.ಪಿ ಸಿಂಗ್ ನೇತ್ರತ್ವದ ಸರಕಾರಕ್ಕೆ ಬಿ.ಜೆ.ಪಿ ನೀಡಿದ ಬೆಂಬಲ ಹಿಂಪಡೆಯುವುದರೊಂದಿಗೆ ಸರಕಾರ ಪತನವಾಯಿತು.

*1991:ಉತ್ತರ ಪ್ರದೇಶದಲ್ಲಿ ಬಿ.ಜೆ.ಪಿ ಅಧಿಕಾರ ಹಿಡಿಯಿತು.

*ಅಕ್ಟೋಬರ್ 7,1991:ಉತ್ತರ ಪ್ರದೇಶದ ಬಿ.ಜೆ.ಪಿ ಸರಕಾರವು ಮಸ್ಜಿದ್ ನ ಸಾಮಿಪ್ಯವಿದ್ದ 2.77 ಎಕರೆ ವಕ್ಫ್ ಭೂಮಿಯನ್ನು ಸ್ವಾದೀನಪಡಿಸಿಕೊಂಡಿತು ಮತ್ತು ನಿರ್ಮಾಣ ಕಾಮಗಾರಿಯನ್ನು ಪ್ರಾರಂಭಿಸಿತು.ಕಾಮಗಾರಿ ನಿಲ್ಲಿಸುವಂತೆ ಸುಪ್ರೀಮ್ ಕೋರ್ಟ್ ನೀಡಿದ ಹಲವು ನಿರ್ದೇಶನಗಳನ್ನು ಮುಖ್ಯಮಂತ್ರಿ ಕಲಾಣ್ ಸಿಂಗ್ ಕಡೆಗಣಿಸಿದರು.

*ಜುಲೈ 23,1992:ತನಗೆ ಪರಿಹಾರವೊಂದನ್ನು ಕಂಡುಹುಡುಕುವುದಕ್ಕಾಗಿ ಕಾಮಗಾರಿ ನಿಲ್ಲಿಸುವಂತೆ ಪ್ರಧಾನ ಮಂತ್ರಿ ಸಾದುಗಳೊಂದಿಗೆ ಒಪ್ಪಂದವೊಂದನ್ನು ಮಾಡಿಕೊಳ್ಳುತ್ತಾರೆ.ಉತ್ತರ ಪ್ರದೇಶ ಮುಖ್ಯಮಂತ್ರಿ ಮಸ್ಜಿದ್ ಗೆ ರಕ್ಷಣೆ ನೀಡುವ ಮತ್ತು ಯಥಾ ಸ್ಥಿತಿ ಕಾಪಾಡುವ ಭರವಸೆ ನೀಡುತ್ತಾರೆ.

*ನವೆಂಬರ್ 28,1992:ಸುಪ್ರೀಮ್ ಕೋರ್ಟ್ ನಿರ್ಧಾರವನ್ನು ಲಕ್ಷಿಸದೆ ಮಂದಿರ ನಿರ್ಮಾಣ ಕಾಮಗಾರಿ ಮುಂದುವರಿಯುತ್ತದೆಂದು ಎಲ್.ಕೆ ಅಡ್ವಾಣಿಯಿಂದ ಸವಾಲು.

*ಡಿಸೆಂಬರ್ 6,1992:ಬಿ.ಜೆ.ಪಿ , ಆರ್.ಎಸ್.ಎಸ್ ಮತ್ತು ಸಂಘಪರಿವಾರದ ಮೂರು ಲಕ್ಷಕ್ಕಿಂತಲೂ ಅಧಿಕ ಸ್ವಯಂ ಸೇವಕರು ಕರಸೇವೆಗಾಗಿ ಒಟ್ಟು ಸೇರುತ್ತಾರೆ.ಪೋಲಿಸರು ಮದ್ಯ ಪ್ರವೇಶಿಸುವುದಿಲ್ಲ,ಮುಸ್ಲಿಮರ ಪ್ರಾರ್ಥನಾಲಯ ಮತ್ತು ಐತಿಹಾಸಿಕ ಸ್ಮಾರಕವಾಗಿದ್ದಂತಹ ಬಾಬರಿ ಮಸ್ಜಿದ್ ಸಂಪೂರ್ಣ ನೆಲಸಮವಾಗುತ್ತದೆ.ಈ ಘಟನೆಯು ದೇಶದಾದ್ಯಂತ ಕೋಮುಗಲಭೆ ಸ್ರಷ್ಟಿಸಲು ಕಾರಣವಾಯಿತು ಮತ್ತು ಸುಮಾರು ಎರಡು ಸಾವಿರಕ್ಕಿಂತಲೂ ಅಧಿಕ ಜನರು ಬಲಿಯಾದರು
   ಹೀಗೆಯೆ ಐತಿಹಾಸಿಕ ಸ್ಮಾರಕ ಬಾಬರಿ ಮಸೀದಿಯು ಬ್ರಿಟಿಷರ ಎಜೆಂಟರಾದ ಸಂಘಪರಿವಾರದವರಿಂದ ದುರಂತ ಕಂಡಿತು.
 ಮೇಲಿನ ಎಲ್ಲಾ ಅಂಶಗಳನ್ನು "ನ್ಯಾಯದ ನಿರೀಕ್ಷೆಯಲ್ಲಿ ಬಾಬರಿ ಮಸ್ಜಿದ್"ಎಂಬ ಪುಸ್ತಕದಿಂದ ಸಂಗ್ರಹಿಸಲಾಗಿದೆ.
ಇಂಶಾಅಲ್ಲಾಹ್ ಒಂದಲ್ಲ ಒಂದು ದಿನ ನಾವು ಬಾಬರ್ ಮಸೀದಿಯನ್ನು ಪುನಃ ನಿರ್ಮಿಸೋಣ.ಸಂಘಪರಿವಾರದವರಿಂದ ಹರಾಜಾಗಿರುವ ನಮ್ಮ ದೇಶದ ಸಂವಿದಾನದ ಗೌರವವನ್ನು ಮತ್ತೆ  ಎತ್ತಿ ಹಿಡಿಯೋಣ.

* ಮಹಮ್ಮದ್ ಅನ್ವರ್ ಮಠ.

Saturday 29 November 2014

ಮರೆಯದಿರೋಣ ಬಾಬರಿ ಮಸ್ಜಿದ್...!

ಮರೆಯದಿರೋಣ ಡಿಸೆಂಬರ್ 6..!!!

ಭಾರತೀಯ ಭವ್ಯ ಇತಿಹಾಸಕ್ಕೆ ಕಪ್ಪು ಮಸಿ ಬಳಿದ ಆ ಕರಾಳ ದಿನ ಮಗದೊಮ್ಮೆ ನಮ್ಮ ಮುಂದೆ ಬರುತ್ತಿದೆ.

400 ವರ್ಷಗಳ ಕಾಲ ಅಲ್ಲಾಹನಿಗೆ ಸುಜೂದ್ ಕರುಣಿಸಿದ ಆ ಭವ್ಯ ಮಂದಿರದ ಧ್ವಂಸ ನಮ್ಮೆದೆಯಲ್ಲಿ ಮಾಸದ ಗಾಯವಾಗಿಯೇ ಉಳಿದಿದೆ.

ನೆನಪಿಸಲೂ ಅಸಹ್ಯವಾಗುತ್ತಿದೆ..!!!
ಮುಸ್ಲಿಮರ ರಕ್ಷಕ ಮುಖವಾಡವನ್ನು ಹೊತ್ತಿದ್ದ ಕಾಂಗ್ರೆಸ್ ಸರಕಾರದ ಸಂಪೂರ್ಣ ಸಹಾಯದೊಂದಿಗೆ ಸಂಘಪರಿವಾರವು ನಮ್ಮ ನಂಬಿಕೆಯನ್ನು ಮೆಟ್ಟಿ ನಿಂತು ಸವಾಲು ಹಾಕಿದ ಆ ದಿನ..!!!!

ನಿಮ್ಮ ಸವಾಲನ್ನು ನಾವು ಸ್ವೀಕರಿಸಿದ್ದೇವೆ.
ಇಂದು ಜನ್ಮ ಪಡೆಯುವ ಪುಟ್ಟ ಮಗುವಿನೊಂದಿಗೂ ನೆನಪಿಸುವೆವು ನಿಮ್ಮ ಕ್ರೂರತೆಯನ್ನು..!!!
ಇಂಶಾ ಅಲ್ಲಾಹ್...
ಮುಂದೊಂದು ದಿನ ಅಯೋಧ್ಯೆಯ ಮಣ್ಣಿನಲ್ಲಿ ಬಾಂಗ್ ಶಬ್ದ ಮೊಳಗುವ ದಿನ ದೂರವಿಲ್ಲ ಎಂಬ ಎಚ್ಚರಿಕೆ ಘಂಟೆಯ ಬಾರಿಸುತ್ತಾ,,

ಬರಲಿದೆ ಮುಂದೊಂದು ದಿನ,
ಅಂದು ಮುಸಲ್ಮಾನರ ಸುದಿನ,!!
ಬಾಬರಿ ತಲೆಯುತ್ತಿ ನಿಲ್ಲುವ ಕ್ಷಣ,
ಅವಕಾಶ ಕಾಯುತ ಪ್ರತಿ ಕ್ಷಣ..!!!

ಸಫ್ವಾನ್ ಅಡ್ಯನಡ್ಕ.

Thursday 20 November 2014

ಶಹೀದೆ ಮಿಲ್ಲತ್ ಟಿಪ್ಪು ಸುಲ್ತಾನ್ ರ.ಅ ರವರ ಜನುಮದಿನೋತ್ಸವದ ಶುಭಾಶಯಗಳು

ಟಿಪ್ಪು (ರ.ಅ )ದಿ ಗ್ರೇಟ್ ....!!!

ಭಾರತ ದೇಶ ಕಂಡ ಅಪ್ರತಿಮ ದೇಶ ಪ್ರೇಮಿ  ,ಸ್ವತಂತ್ರ್ಯ ಭಾರತಕ್ಕಾಗಿ ರಣರಂಗದಲ್ಲಿ ಶಹೀದಾದ ಪ್ರಪ್ರಥಮ ದೊರೆ,ಕಾಲಾನುಸಾರವಾಗಿ ನಡೆದಂತಹ ಆಂಗ್ಲೋ -ಮೈಸೂರು ಮೂರನೇ ಯುದ್ಧದ ಸಂದರ್ಭದಲ್ಲಿ ಒಡಂಬಡಿಕೆಯ ಪ್ರಕಾರ ಯುದ್ಧದ ಖರ್ಚನ್ನು ಭರಿಸಲು ಅಸಾಧ್ಯವಾದಂತಹ ಸಂದರ್ಭದಲ್ಲಿ ತನ್ನ ಹತ್ತು ವರ್ಷದ ಅಬ್ದುಲ್ ಮಲಿಕ್ ಹಾಗೂ ಎಂಟು ವರ್ಷದ ಮೊಯ್ದೀನ್ ಅನ್ನುವ ತನ್ನಿಬ್ಬರು ಕರುಳ ಕುಡಿಗಳನ್ನು ವರ್ಷಾನುಗಟ್ಟಲೆ ಸ್ವತಂತ್ರ್ಯ ಭಾರತಕ್ಕೋಸ್ಕರ ಒತ್ತೆಯಿಟ್ಟಂತಹ ಮಹಾನ್ ಸ್ವಾತಂತ್ರ್ಯ ಹೋರಾಟಗಾರ,ಇಲ್ಲಿನ ಹಿಂದೂ,ಮುಸ್ಲಿಂ, ಕ್ರೈಸ್ತರು ಪರಸ್ಪರ ಸಹೋದರರು ಅವರ ಹಿತವನ್ನು ಕಾಪಾಡುವುದು ನನ್ನ ಕರ್ತವ್ಯವೆಂದು ಸಾರಿದ ಮಹಾನ್ ಮೇಧಾವಿ,ಶೃಂಗೇರಿ ಮಠದಲ್ಲಿರುವ ಬೆಳೆಬಾಳುವ ಚಿನ್ನಾಭರಣಗಳನ್ನು ಲೂಟಿ ಮಾಡುವ ಉದ್ದೇಶಕ್ಕಾಗಿ ಮರಾಠರು ಶೃಂಗೇರಿ ಮಠದ ಮೇಲೆ ದಾಳಿ ಮಾಡಿದಾಗ ಕೆಚ್ಚೆದೆಯಿಂದ ಹೋರಾಡಿ ಮರಾಠರನ್ನು ಸದೆಬಡಿದು ಶೃಂಗೇರಿ ಮಠವನ್ನು ಸಂರಕ್ಷಿಸಿದ ಮಹಾನ್ ಜಾತ್ಯಾತೀತ ನಾಯಕ ಶಹೀದೆ ಮಿಲ್ಲತ್ ಟಿಪ್ಪು ಸುಲ್ತಾನ್ ರ.ಅ ರವರ ಜನ್ಮದಿನವಾಗಿದೆ ಇಂದು.

ದೇಶದ ಇತಿಹಾಸವನ್ನು ತಿರುಚಿಕೊಂಡು ಟಿಪ್ಪು ಸುಲ್ತಾನ್ ರ.ಅ ರವರು ಮುಸ್ಲಿಂ ಸಮುದಾಯದ ಹೆಸರಿನಿಂದ ಗುರುತಿಸುವರು ಅನ್ನುವ ಏಕೈಕ ಕಾರಣಕ್ಕೋಸ್ಕರ ಇಂದು ಟಿಪ್ಪು ಸುಲ್ತಾನ್  ರ.ಅ ರವರನ್ನು ಮತಾಂಧ, ದೇಶದ್ರೋಹಿ ಅನ್ನುವಂತೆ ಬಿಂಬಿಸುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿರುವುದು ಖೇದಕರ .

ತನ್ನ ಹದಿನೈದನೇ ವಯಸ್ಸಿನಲ್ಲೇ ತನ್ನ ತಂದೆಯೊಂದಿಗೆ ಪ್ರಥಮ ಮೈಸೂರು ಯುದ್ಧದಲ್ಲಿ ನಾಯಕತ್ವವನ್ನು ವಹಿಸಿಕೊಂಡು ಬ್ರಿಟಿಷರ ಮುಂದೆ ಕೆಚ್ಚೆದೆಯಿಂದ ಹೋರಾಡಿದ ಟಿಪ್ಪು ಸುಲ್ತಾನ್ ರ.ಅ ರವರು "ಮೈಸೂರಿನ ಹುಲಿ " ಅನ್ನುವ ಬಿರುದನ್ನು ಪಡೆದುಕೊಂಡು ಜಗತ್ಪ್ರಸಿದ್ಧರಾದರು.

"ನೂರು ವರ್ಷ ಇಲಿಯಾಗಿ ಬಾಳುವುದಕ್ಕಿಂತ ಮೂರು ದಿವಸ ಹುಲಿಯಾಗಿ ಜೀವಿಸು " ಎಂದು ಜಗತ್ತಿಗೆ ತನ್ನ ವೀರಾವೇಷದಿಂದ ಕೂಡಿದ ಹೋರಾಟಗಳಿಂದ  ಕಾಣಿಸಿ ಕೊಟ್ಟರು.

ಜಾತ್ಯತೀತವಾದ ಸಂವಿಧಾನವನ್ನು ನಿರ್ನಾಮಗೊಳಿಸಿ ಮನುವಾದವನ್ನು ಬೆಳೆಸಲು ಹಾತೊರೆಯುತ್ತಿರುವ ಕೆಲವು ಸ್ವಯಂಘೋಷಿತ ಧರ್ಮ ರಕ್ಷಕರೆನಿಸಿಕೊಳ್ಳುವ ಸಂಘಪರಿವಾರದವರು ಕೆ.ಎಲ್ ಬೈರಪ್ಪ,ಡಿ.ಎಚ್ ಶಂಕರಮೂರ್ತಿ ಯಂತವರು ಬರೆದಂತಹ ಕಾದಂಬರಿಗಳನ್ನು ದೇಶದ ಇತಿಹಾಸವೆಂದು ತಿಳಿದು  ಟಿಪ್ಪು ಸುಲ್ತಾನ್ ರ.ಅ ರವರನ್ನು ಮತಾಂಧರನ್ನಾಗಿ ಚಿತ್ರೀಕರಿಸುತ್ತಿರುವುದು ವಿಪರ್ಯಾಸ..!!

ಬ್ರಿಟಿಷರ ಪಾಲಿಗೆ ಕಗ್ಗಂಟಾಗಿದ್ದಂತಹ ಟಿಪ್ಪು ಸುಲ್ತಾನ್ ರ.ಅ ರವರನ್ನು ರಣರಂಗದಲ್ಲಿ ಸೋಲಿಸುವುದು ಅಸಾಧ್ಯವೆಂದು ಮನಗಂಡಂತಹ ಬ್ರಿಟಿಷರು ಕುತಂತ್ರದ ಮೂಲಕ ಅವರನ್ನು ಸಾಯಿಸಿದರು.ಬ್ರಿಟಿಷರ ಗುಂಡುಗಳು ಅವರ ಎದೆಗಳನ್ನು ಸೀಳಿದಾಗಲೂ ಅವರು ತನ್ನನ್ನು ವಂಚನೆಯ ಮೂಲಕ ಆಕ್ರಮಿಸಲು ಬಂದ ಬ್ರಿಟಿಷರ ವಿರುದ್ಧ ವೀರಾವೇಷದಿಂದ ಹೋರಾಡಿದ್ದರು.ಅವರ ಪ್ರಾಣಪಕ್ಷಿ ಹಾರಿಹೋಗಿದೆ ಅನ್ನುವುದನ್ನು ಖಚಿತಪಡಿಸಿಕೊಂಡ ಬ್ರಿಟಿಷರು ಅವರ ಎದೆಯ ಮೇಲೆ ನಿಂತು "ಇಂದಿನಿಂದ ಭಾರತ ನಮ್ಮದು " ಎಂದು ಉದ್ಘರಿಸಿದರು...!!

ಅಂದು ಬ್ರಿಟಿಷರ ಪಾಲಿಗೆ ಸಿಂಹಸ್ವಪ್ನರಾಗಿದ್ದರು ಶಹೀದೆ ಮಿಲ್ಲತ್ ಟಿಪ್ಪು ಸುಲ್ತಾನ್ ರ.ಅ ...!!

ಇಂದು ಕೋಮುವಾದಿಗಳ ಪಾಲಿಗೆ ಸಿಂಹಸ್ವಪ್ನವಾಗಿಬಿಟ್ಟಿದೆ ಶಹೀದೆ ಮಿಲ್ಲತ್ ಟಿಪ್ಪು ಸುಲ್ತಾನ್ ರ.ಅ ರವರ ಆ ಕೆಚ್ಚದೆಯ ನೆನಪುಗಳು...!!

ನಾಡಿನ ಸರ್ವ ಜನತೆಗೂ ಶಹೀದೆ ಮಿಲ್ಲತ್ ಟಿಪ್ಪು ಸುಲ್ತಾನ್ ರ.ಅ ರವರ ಜನುಮದಿನೋತ್ಸವದ ಶುಭಾಶಯಗಳನ್ನು ಸಲ್ಲಿಸುತ್ತಾ, ನಮ್ಮೊಳಗಿರುವ ಮೀರ್ ಸಾದಿಕ್ ರಂತವರನ್ನು  ,ಕೋಮುವಾದಿಗಳನ್ನೂ ಹಿಮ್ಮೆಟ್ಟಿಸುತ್ತಾ ಸೌಹಾರ್ದಯುತ ಸಮಾಜ ನಿರ್ಮಾಣಕ್ಕೆ ಟಿಪ್ಪು ಸುಲ್ತಾನ್ ರ.ಅ ರವರು ತೋರಿಸಿಕೊಟ್ಟ ಧೈರ್ಯವು ಸ್ಪೂರ್ತಿಯಾಗಲಿ ಅಂದು ಹಾರೈಸುತ್ತಿದ್ದೇನೆ.

ಸ್ನೇಹಜೀವಿ ಅಡ್ಕ

Wednesday 12 November 2014

ಕ್ಷಮಿಸಿ ಬಿಡು ಸಹೋದರಿ ನಂದಿತಾ ನನ್ನನ್ನು.......

ಕ್ಷಮಿಸಿ ಬಿಡು ಸಹೋದರಿ ನಂದಿತಾ ನನ್ನನ್ನು..........
ನಿನಗೆ ಆಗಿರುವ ಅನ್ಯಾಯದ ವಿರುದ್ಧ ಅಕ್ಷರಗಳ ಮೂಲಕವಾದರೂ ಧ್ವನಿ ಎತ್ತಬೇಕೆಂದು ಪೆನ್ನನ್ನು ಕೈಗೆ ತೆಗೆದುಕೊಂಡಾಗಳೆಲ್ಲಾ ಯಾರ ಬಗ್ಗೆ ಬರೆಯಬೇಕೆಂಬುದರ ಅರಿವೇ ಇಲ್ಲದೆ ಕಂಗಾಲಾಗಿದ್ದೇನೆ
*ನಿನ್ನ ಸಾವನ್ನೇ ಬಂಡವಾಳವಾಗಿಸಿಕೊಂಡು ತಮ್ಮ ರಾಜಕೀಯ ಬೇಳೆಯನ್ನು ಬೇಯಿಸಿಕೊಳ್ಳಲು ಪ್ರಯತ್ನಿಸುತ್ತಿರುವ ದುಷ್ಟ ರಾಜಕಾರಣಿಗಳ ಬಗ್ಗೆ ಬರೆಯಲೇ?
*ಇನ್ನೊಂದು ಧರ್ಮದವರ ವಿರುದ್ಧ ದಾಳಿ ನಡೆಸಲು ಹಾಗು ಸಮಾಜಘಾತಕ ಚಟುವಟಿಕೆಗಳನ್ನು ಮಾಡಲು ನಿನ್ನಂತ ಸಹೋದರಿಯರ ಸಾವನ್ನೇ ಎದುರು ನೋಡುತ್ತಿರುವ ಸ್ವಯಂ ಘೋಷಿತ ಧರ್ಮ ರಕ್ಷಕರ ಬಗ್ಗೆ ಬರೆಯಲೇ?
*ಅನ್ಯಸ್ತ್ರೀಯರನ್ನು ಕಣ್ಣೆತ್ತಿಯೂ ನೋಡಬಾರದು(ಕೆಟ್ಟ ದ್ರಷ್ಟಿಯಿಂದ)ಎಂದು ಇಸ್ಲಾಮ್ ಕಲಿಸಿದ ಪಾಠವನ್ನು ದಿಕ್ಕರಿಸಿ ನಿನ್ನನ್ನು ಪ್ರೇಮದ ಬಲೆಗೆ ಬೀಳಿಸಿ ನಿನ್ನ ಈ ಸಾವಿನಲ್ಲಿ ಪಾಲುಗಾರಿಕೆಯನ್ನು ಪಡೆದಿರುವ ಆ ನಾಮಧಾರಿ ಮುಸ್ಲಿಂ ಯುವಕರ ಬಗ್ಗೆ ಬರೆಯಲೇ?
*ಗರುಡ ಪಕ್ಷಿಯು ಸಣ್ಣ ಹಕ್ಕಿ ಮರಿಯನ್ನು ಎತ್ತಿಕೊಂಡು ಹೇಗೆ ಹೋಗಿ ಕುಕ್ಕಿ ಕುಕ್ಕಿ ತಿನ್ನುತ್ತದೆಯೋ ಅದೇ ರೀತಿ ಇನ್ನೂ ಸಹ ಸರಿಯಾಗಿ ಬೆಲೆಯದ ಆ ನಿನ್ನ ದೇಹವನ್ನು ಕುಕ್ಕಿ ಕುಕ್ಕಿ ತಿಂದ ಕತ್ತಲಲ್ಲಿ ಬೆತ್ತಲಾಗುವ ಆ ಮಾಧ್ಯಮಗಳ ಬಗ್ಗೆ ಬರೆಯಲೇ?
ನಿನ್ನ ಚಿತೆಯ ಅಗ್ನಿಯಲ್ಲಿ ಮೈ ಕಾಯಿಸಿ ಕೊಂಡವರೇ ತುಂಬಿ ಹೋಗಿದ್ದಾರೆ ಸಹೋದರಿ ಈ ಸಮಾಜದಲ್ಲಿ.ಸಮಾಜದಲ್ಲಿ ಪುಕ್ಕಟೆ ಪ್ರಚಾರಗಳನ್ನು ಗಿಟ್ಟಿಸಿಕೊಳ್ಳುವ ಸಲುವಾಗಿ ಸಹೋದರಿ ಸೌಜನ್ಯಾಳ ಪ್ರಕರಣವನ್ನು ಬಳಸಿ ತೋರಿಕೆಗಾಗಿ ಅಲ್ಲಲ್ಲಿ ಕೆಲವು ವೇದಿಕೆಗಳನ್ನು ಕಟ್ಟಿ ನಾಯಕನೆನಿಸಿಕೊಂಡ ಆಸಾಮಿಯೊಬ್ಬನಿಂದ ಪ್ರೇರಿತರಾದ ಕೆಲವರು ನಿನ್ನ ಪ್ರಕರಣದಲ್ಲೂ ಲಾಭ ಪಡೆಯಲು ನೋಡುತ್ತಿದಾರಮ್ಮ. ನೀನು ಅತ್ಯಾಚಾರಕ್ಕೆ ಒಳಪಟ್ಟಿಲ್ಲವೆಂದುಹಲವಾರು ದಾಖಲೆಗಳಿದ್ದರೂ ತಮ್ಮ ಬೇಳೆ ಬೇಯಿಸಿಕೊಳ್ಳಲು ನಿನ್ನ ಮಾನವನ್ನೇ ಹರಾಜಿಗಿಡಲು ಹೊರಟ ಆ ನಿನ್ನ ಧರ್ಮದ ಸ್ವಯಂ ಘೋಷಿತ ಧರ್ಮ ರಕ್ಷಕರ ಬಗ್ಗೆ ಮರುಕ ಪಡುತ್ತಿದ್ದೀಯಾ ಸಹೋದರಿ? ಈ ದೇಶದ ಮುಸ್ಲಿಮರ ಸರ್ವನಾಶಕ್ಕಾಗಿ ಭಾರತ ಮಾತೆಯನ್ನೆ ಬ್ರಿಟೀಷರ ಕೈಗೆ ಕೊಡಲು ಪ್ರಯತ್ನಪಟ್ಟ ತಲೆಹಿಡುಕರಮ್ಮ ಅವರು.ನನಗೆ ಅವರ ಬಗ್ಗೆ ತುಂಬಾ ಮರುಕವಿದೆ ಸಹೋದರಿ
*ಮುಝಪ್ಪರ್ ನಗರದಲ್ಲಿ ನಿನ್ನ ಹಾಗೆಯೇ ಇರುವ ಅದೆಷ್ಟೋ ನನ್ನ ಸಹೋದರಿಯರನ್ನು ಅವರ ಗಂಡಂದಿರ ಎದುರಲ್ಲೆ,ಅವರ ತಾಯಂದಿರ ಎದುರಲ್ಲೇ,ಅವರು ಹೆತ್ತ ಸ್ವಂತ ಮಕ್ಕಳ ಎದುರಲ್ಲೇ ಅವರನ್ನು ವಿವಸ್ತ್ರಗೊಳಿಸಿ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆಗೈದಂತಹ ಆ ಪಾಪಿಗಳ ಬಗ್ಗೆ ನನಗೆ ಮರುಕವಿದೆ ಸಹೋದರಿ
*ಅಸ್ಸಾಮಿನಲ್ಲಿ ನಿನ್ನಂತೆಯೆ ಇರುವ ಅದೆಷ್ಟೋ ಮಂದಿ ನನ್ನ ಸಹೋದರಿಯರನ್ನು ಅಟ್ಟಾಡಿಸಿಕೊಂಡು ಹೋಗಿ ಅವರ ಮುಗಿಲು ಮುಟ್ಟಿದ ಆಕ್ರಂದನವನ್ನೂ ಸಹ ಕೇಳದೆ ಅವರ ಮಾನವನ್ನು ಕುಕ್ಕಿ ಕುಕ್ಕಿ ತಿಂದಂತಹ ಆ ದುರಾತ್ಮರ ಬಗ್ಗೆ ನನಗೆ ಮರುಕವಿದೆ ಸಹೋದರಿ.
*ನಿನ್ನ ಹಾಗೆಯೇ ಗುಜರಾತಿನಲ್ಲಿದ್ದಂತಹ ಅದೆಷ್ಟೋ ನನ್ನ ಸಹೋದರಿಯರನ್ನು ಬೀದಿ ಬೀದಿಗಳಲ್ಲಿ ಅಡ್ಡಡ್ಡಾ ಮಲಗಿಸಿ ಅತ್ಯಾಚಾರವೆಸಗಿ ಕೊಂದಂತಹ ಆ ಪಾಪಿಗಳ ಬಗ್ಗೆ ನನಗೆ ಮರುಕವಿದೆ ಸಹೋದರಿ.
*ಗುಜರಾತಿನ ಆ ನನ್ನ ತುಂಬು ಗರ್ಭಿಣಿ ಸಹೋದರಿಯ ಹೊಟ್ಟೆಯನ್ನು ಸೀಳಿ ಅದರೊಳಗಿದ್ದ ಭ್ರೂಣವನ್ನು ತ್ರಿಶೂಲದಲ್ಲಿ ತೆಗೆದು ಬೆಂಕಿಗೆ ಹಾಕಿ ಕೊಂದ ಆ ರಾಕ್ಷಸರ ಬಗ್ಗೆ ನನಗೆ ಮರುಕವಿದೆ ಸಹೋದರಿ
*ಇಷ್ಟೆಲ್ಲಾ ನಡೆಯುತ್ತಿದ್ದರೂ ತನಗಾವುದರ ಅರಿವಿಲ್ಲದಂತೆ ಮೂಕಪ್ರೇಕ್ಷಕನಾಗಿನೋಡುತ್ತಿದ್ದ ಆ ಗಲಭೆಯ ರೂವಾರಿ ಅಂದಿನ ಗುಜರಾತಿನ ಮುಖ್ಯಮಂತ್ರಿಯ ಬಗ್ಗೆ ನನಗೆ ಮರುಕವಿದೆ ಸಹೋದರಿ
*ಗುಜರಾತ್,ಮುಝಪ್ಪರ್ ನಗರ, ಅಸ್ಸಾಂ ಹಾಗು ದೇಶದ ನಾನಾ ಕಡೆಗಳಲ್ಲಿ ತಮ್ಮ ರಾಜಕೀಯ ಲಾಭಕ್ಕಾಗಿ ಕೋಮುಗಲಬೆ ನಡೆಸಿ ಅದೆಷ್ಟೋ ಹೆಣ್ಣು ಮಕ್ಕಳನ್ನು ವಿಧವೆಯರನ್ನಾಗಿ ಮಾಡಿದ,ಅದೆಷ್ಟೋ ಮಕ್ಕಳನ್ನು ಅನಾಥರನ್ನಾಗಿ ಮಾಡಿದ,ಅದೆಷ್ಟೋ ಕುಟುಂಬಗಳನ್ನು ಬೀದಿ ಪಾಲು ಮಾಡಿದ ಆ ನರಹಂತಕರ ಬಗ್ಗೆ ನನಗೆ ಮರುಕವಿದೆ ಸಹೋದರಿ
ಇವರುಗಳು ಬದಲಾಗುವುದಿಲ್ಲ ಸಹೋದರಿ,ಒಂದು ವೇಳೆ ಇವರುಗಳು ಬದಲಾದರೂ ಇವರ ಮನಸ್ಸಿನಲ್ಲಿ ತುಂಬಿರುವ ಆ ಕೋಮು ಮನೋಭಾವನೆ ಯಾವತ್ತೂ ಬದಲಾಗುವುದಿಲ್ಲ,ಇವರುಗಳಿಂದಾಗಿ ನಮ್ಮ ಭಾರತವು ಬದಲಾಗುವುದಿಲ್ಲ ಏಕೆಂದರೆ ಇವತ್ತು ರಾಜಕಾರಣಿಗಳಿಂದ ಹಿಡಿದು,ಅಧಿಕಾರಿ ವರ್ಗಗಳಿಂದ ಹಿಡಿದು ಸಾಮಾನ್ಯ ಗುಮಾಸ್ತನವರೆಗೂ ಇಂತಹ ಪ್ಯಾಶಿಸ್ಟ್ ಮನೋಸ್ಥಿತಿಯವರೆ ತುಂಬಿ ಹೋಗಿದ್ದಾರೆ ಸಹೋದರಿ..
ಸಹೋದರಿಯರಾದ ಸೌಜನ್ಯ,ರತ್ನ ಕೊಟ್ಟಾರಿ,ಮತಾಂದ ಪತ್ರಕರ್ತ ವಿ.ಟಿ.ಪ್ರಸಾದನಿಂದ ಹತ್ಯೆಯಾದ ವಿಟ್ಲದ ದುಲೈಕಾ ಹಾಗು ಮುಂತಾದ ಸಹೋದರಿಯರಿಗೆ ಆದ ರೀತಿಯಲ್ಲಿ ನಿನಗೂ ನ್ಯಾಯ ಮರೀಚಿಕೆಯಾಗದಿರಲಿ.ನಿನ್ನ ಸಾವಿನ ನಿಜ ಬಣ್ಣ ಬಯಲಾಗಿ ನಿನ್ನ ಆತ್ಮಕ್ಕೆ ಶಾಂತಿ ಸಿಗುವಂತಾಗಲಿ ಎಂದು ಹಾರೈಸುವ

ನಿನ್ನ ಒಬ್ಬ ಮುಸ್ಲಿಮ್ ಸಹೋದರ
MJV

 
Design by Free WordPress Themes | Bloggerized by - Free Blogger Themes | @javtl