ಹಿಂದು ಧರ್ಮವೇ ಏನೆಂದು ತಿಳಿಯದ ಮಾನ್ಯ ಮೋದಿಜಿಯಿಂದ ಮುಸ್ಲಿಮರಿಗೆ ನಿಜವಾದ ಇಸ್ಲಾಂ ತಿಳಿಯಲು ಕರೆ..!
ಐದು ಸಾವಿರಕ್ಕಿಂತಲೂ ಹೆಚ್ಚು ಭಾರತೀಯ ಮುಸ್ಲಿಮರನ್ನು ವಧಿಸಲು, ಪರದೆಯ ಹಿಂದಿನಿಂದ ನರಹಂತಕರಿಗೆ ಅನುವು ಮಾಡಿಕೊಟ್ಟ, ದೇಶದಲ್ಲಿ ಇತಿಹಾಸದಲ್ಲೇ ಮುಸ್ಲಿಮರ ಈದ್ ಹಬ್ಬಕ್ಕೆ ದೇಶದ ಪ್ರಧಾನಿಯಾಗಿ ಶುಭಾಶಯ ಹೇಳುವುದನ್ನೂ ಕೂಡಾ ನಿಲ್ಲಿಸಿದ ಮೊದಲ ಪ್ರದಾನಿಯೊಬ್ಬರಿಂದ ಇಲ್ಲಿನ ಮುಸಲ್ಮಾನನು ದೇಶದ ಅಧೋಗತಿಯನ್ನಲ್ಲದೆ ಬೇರೇನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ..
ಇನ್ನು ಮೋದಿಜಿ ಉಲ್ಲೇಖಿಸಿದ ಸೂಫಿಸಂ, ಕಬೀರ್ ದಾಸರಂತೆ ಮಂದಿರಗಳಲ್ಲಿ ಭಜಾನಾ ನಿರತರೋ, ಅಬ್ದುಲ್ ಕಲಾಂರಂತೆ ಹಿಂದೂ ಸಂಪ್ರದಾಯವಾದಿ ಮುಸ್ಲಿಮನೋ ಆಗಿದ್ದಾರೆ, ಅದ್ಯಾಕೋ ನಮ್ಮ ಕೆಲ ಉಲೆಮಾಗಳಿಗೆ ಮೋದಿಯೆಂದರೆ ಬಹಳ ಇಷ್ಟ..!
ಅಲ್ಲದಿದ್ದರೂ ಮೋದಿಜಿಯವರಿಗೆ ಮೊದಲಿನಿಂದಲೂ ಒಬ್ಬ ನೈಜ ಮುಸಲ್ಮಾನನೆಂದರೆ ಬಹಳ ಕೋಪ. ಆದರೆ ಶಿಯಾಗಳು, ಭೋರಿಗಳು, ಸೂಫಿಗಳನ್ನು ಅಪ್ಪಿಕೊಂಡು ಮುದ್ದಾಡುತ್ತಾ, ಮೊನ್ನೆ ದುಬೈಯಲ್ಲಿ ನಡೆದಂತ ತನ್ನ ಭಾಷಣಗಳಿಗೆ ಮುಸ್ಲಿಮರೆಲ್ಲರೂ ಚಪ್ಪಾಳೆ ತಟ್ಟುವರೆಂದು ಲೋಕಕ್ಕೆ ತಿಳಿಸಲೆಂದೇ, ಟೋಪಿ ಗಡ್ಡ ಭರಿತ ಶಿಯಾ, ಬೋರಿಗಳನ್ನೇ ತನ್ನ ಸ್ಟೇಜ್ ಮುಂದೆ ಕುಳ್ಳಿರಿಸಿ ಚಪ್ಪಾಳೆ ಗಿಟ್ಟಿಸಿಕೊಂಡಂತೆಯೇ, ಹಿಂದಿನ ಚುನಾವಣೆಯಲ್ಲೂ ಅವರುಗಳಿಂದ ಓಟ್ ಪಡೆದಿರುತ್ತಾರೆ.
ಇನ್ನು ಮೋದಿಯವರ ಮಾತು ನಿಜವಾದ ಇಸ್ಲಾಮೀ ಸೂಫಿ ಉಲೆಮಾಗಳ ಬಗ್ಗೆಯಾಗಿದ್ದರೆ., ಮೋದಿಯ ಮಾತಿಗೆ ಮರುಳಾದವರಿಗೆ ತಿಳಿಯದಾಯಿತೇ.., ಔರಂಗಜೇಬ'ರೆಂಬ ದೇಶಕಂಡ ಅಪ್ರತಿಮ ಆಡಳಿತಾಧಿಕಾರಿ ಕೂಡಾ ಒಬ್ಬ ಸೂಫೀ ಅನುಯಾಯಿಯಾಗಿದ್ದರೆಂದು..?!
ಹೌದು ಔರಂಗಜೇಬರು "ನಕ್ಷ್ ಬಂದೀ -ಮುಜದ್ದಿದೀ " ಸೂಫೀ ತತ್ವದವರಾಗಿದ್ದು. ಹಾಗೂ ಮುಜದ್ದಿದೀ ಪಂಡಿತ ಶೈಕ್ ಅಹ್ಮದ್ ಸರ್ಹಿಂದೀ ಅವರ ಮೂರನೇ ಮಗ, "ಕ್ವಾಜಾ ಮಹಮ್ಮದ್ ಮಾಸೂಮ್" ಅವರ ಶಿಷ್ಯರೂ ಕೂಡಾ ಆಗಿದ್ದರು. ಆದುದರಿಂದಲೇ ಆಗಿತ್ತು ತಮ್ಮ ಆಡಳಿತಾವದಿಯಲ್ಲಿ ಭಾರತೀಯರಲ್ಲಿ ಬೀಡು ಬಿಟ್ಟಿದ್ಧ ಮದ್ಯಪಾನ, ಧೂಮಪಾನ, ಜೂಜು, ಕ್ಯಾಸ್ಟರೇಷನ್ (ಗಂಡಸುತನವನ್ನು ಇಲ್ಲವಾಗಿಸುವ ಶಿಕ್ಷೆ), ದಾಸ್ಯ ಪದ್ದತಿ, ಅನನುವದನೀಯ ಲೈಂಗಿಕತೆಯನ್ನು ಔರಂಗಜೇಬರು ಷರಹೀ ಪ್ರಕಾರ ನಿಷಿದ್ದಗೊಳಿಸಿದ್ದು.
ಅದೇ ಸೂಫೀ ರಾಜ ಔರಂಗಜೇಬರ ವಿರುದ್ಧವಾಗಿದೆ, ಇಂದಿನ ಮೋದಿ ಸಂಘಪರಿವಾರವು ಇತಿಹಾಸ ತಿರುಚುವ ಭಾಗವಾಗಿ, ದೆಹಲಿಯಲಿಯ "ಔರಂಗಜೇಬರ" ಹೆಸರಿನ ರಸ್ತೆಯ ಮರುನಾಮಕರಣ. ಸೂಫೀ ತತ್ವದ ಬಗ್ಗೆ ಮಾತನಾಡುವ ಮೊದಿಗೆ ಅದು ಹೇಗೆ ಸಾಧ್ಯವಾಯಿತು, ಸೂಫೀ ರಾಜರೊಬ್ಬರನ್ನು ಕ್ರೂರಿಯೆಂದು ಬಣ್ಣಿಸಲು ..?
ಇನ್ನು ಸೂಫಿಗಳೆಂಬ ಹೆಸರಿನಲ್ಲಿ ಮೋದಿಯ ಕೃಪಕಟಾಕ್ಷ ಭೇಟಿ ಬಯಸಿದ ನಮ್ಮ ಉಲೆಮಾಗಳಿಗಾದರೂ ಔರಂಗಜೇಬರ ಬಗ್ಗೆ ಇತಿಹಾಸ ತಿಳಿಸಿ ಕೊಡಲಸಾಧ್ಯವಾಯಿತೇ..?!
ಇನ್ನು ಸೂಫಿಗಳೆಂಬ ಹೆಸರಿನಲ್ಲಿ ಮೋದಿಯ ಕೃಪಕಟಾಕ್ಷ ಭೇಟಿ ಬಯಸಿದ ನಮ್ಮ ಉಲೆಮಾಗಳಿಗಾದರೂ ಔರಂಗಜೇಬರ ಬಗ್ಗೆ ಇತಿಹಾಸ ತಿಳಿಸಿ ಕೊಡಲಸಾಧ್ಯವಾಯಿತೇ..?!
ಇನ್ನು ರಾಜರೊಬ್ಬರು ತನ್ನ ಆಡಳಿತಕಾಲದಲ್ಲಿ ಮಾಡಿದ ಯುದ್ಧಗಳ ಅನುಪಾತದಲ್ಲಿ ಕ್ರೂರಿಯೆಂದು ಬಣ್ಣುಸುವುದಾದರೆ, ಲೊಕದಾದ್ಯಂತ ರಾಜರಲ್ಲಿಯುದ್ದಮಾಡದ ರಾಜರೆಷ್ಟು..?
ಒಂದು ರಾಜ್ಯಕೀಯ ಅಂದಮೇಲೆ , ಯುದ್ಧಗಳು ಆ ರಾಜ್ಯದ ಹಿತದೃಷ್ಟಿಯಿಂದಾಗಿರುತ್ತದೆಯೇ ಹೊರತು ದುರದೃಷ್ಟಿಯಿಂದಲ್ಲ ಅನ್ನುವುದು ಇತಿಹಾಸ ಬಲ್ಲ ಪ್ರತಿಯೊಬ್ಬನಿಗೂ ತಿಳಿದಿದೆ.
ಒಂದು ರಾಜ್ಯಕೀಯ ಅಂದಮೇಲೆ , ಯುದ್ಧಗಳು ಆ ರಾಜ್ಯದ ಹಿತದೃಷ್ಟಿಯಿಂದಾಗಿರುತ್ತದೆಯೇ ಹೊರತು ದುರದೃಷ್ಟಿಯಿಂದಲ್ಲ ಅನ್ನುವುದು ಇತಿಹಾಸ ಬಲ್ಲ ಪ್ರತಿಯೊಬ್ಬನಿಗೂ ತಿಳಿದಿದೆ.
ಇನ್ನು ಮೋದಿಯ ಹೇಳಿಕೆಯು, ಇಸ್ಲಾಮಿ ಸೂಫಿಸಂ'ನ ಪರವಲ್ಲ...!
ಬದಲಾಗಿ ಇದು ಸೂಫಿಗಳೆನ್ನಲ್ಪಡುವವರಿಂದ 'ಮೋದಿಸಂ'ನ ಗುಣಗಾನ..!
ಬದಲಾಗಿ ಇದು ಸೂಫಿಗಳೆನ್ನಲ್ಪಡುವವರಿಂದ 'ಮೋದಿಸಂ'ನ ಗುಣಗಾನ..!
©ಚಿಂತಕ
#ಹೊಂಗಿರಣ