ವಿಟ್ಲ : ಪೂರ್ವಿಕ ಉಲಮಾಗಳನ್ನು ಗೌರವಿಸಿ ಅನುಸರಿಸುವುದು ಇಹ-ಪರ ವಿಜಯಕ್ಕೆ ನಾಂದಿ ಎಂದು ಮೌಲಾನಾ ಪೇರೋಡ್ ಅಬ್ರುರ್ರಹ್ಮಾನ್ ಸಖಾಫಿ ಹೇಳಿದರು.
ಮರ್ಹೂಂ ಶೈಖುನಾ ಸುರಿಬೈಲು ಉಸ್ತಾದರ ೧೦ನೇ ಆಂಡ್ ನೇರ್ಚೆ ಹಾಗೂ ಅನುಸ್ಮರಣಾ ಸಮ್ಮೇಳನದ ಪ್ರಯುಕ್ತ ಆರು ದಿವಸಗಳ ಕಾಲ ಸುರಿಬೈಲ್ ಅಶ್-ಅರಿಯ್ಯದಲ್ಲಿ ನಡೆದ ಕಾರ್ಯಕ್ರಮ ಶುಕ್ರವಾರ ಸಮಾಪನ ಕಾರ್ಯಕ್ರಮದಲ್ಲಿ ಅವರು ಮುಖ್ಯ ಭಾಷಣಗೈದು ಮಾತನಾಡಿದರು
ಶೈಖುನಾ ತಾಜುಲ್ ಉಲಮಾ ಸಯ್ಯಿದ್ ಅಬ್ದುರ್ರಹ್ಮಾನ್ ಅಲ್-ಬುಖಾರಿ ಉಳ್ಳಾಲ ಅಧ್ಯಕ್ಷತೆ ವಹಿಸಿದ್ದು, ಉಡುಪಿ ಖಾಝಿ ಪಿ.ಎಂ. ಇಬ್ರಾಹಿಂ ಮುಸ್ಲಿಯಾರ್ ಬೇಕಲ ಉದ್ಘಾಟಿಸಿದರು.
ಎ.ಪಿ. ಮುಹಮ್ಮದ್ ಮುಸ್ಲಿಯಾರ್ ಕಾಂತಪುರಂ, ಅಬ್ಬಾಸ್ ಮುಸ್ಲಿಯಾರ್ ಅಲ್-ಮದೀನಾ ಮಂಜನಾಡಿ, ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಕೆ.ಪಿ. ಹುಸೈನ್ ಸಅದಿ ಕೆ.ಸಿ.ರೋಡ್, ಎಂ.ಎಸ್.ಎಂ. ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ ಮೊದಲಾದವರು ಭಾಗವಹಿಸಿದ್ದರು.
ಸಯ್ಯಿದ್ ಅಬ್ದುರ್ರಹ್ಮಾನ್ ಇಂಬಿಚ್ಚಿಕೋಯ ತಂಙಳ್ ಪೊನ್ನಂಗಳ ಬಾಯಾರ್ ಇವರ ನೇತೃತ್ವದಲ್ಲಿ ದ್ಸಿಕ್ರ್ ಹಲ್ಕಾ ಕಾರ್ಯಕ್ರಮ ನಡೆಯಿತು. ಸಯ್ಯಿದ್ ಜಲಾಲುದ್ದೀನ್ ತಂಙಳ್ ಉಜಿರೆ, ಸಯ್ಯಿದ್ ಸಿ.ಟಿ.ಎಂ. ಉಮರ್ ಆಟಕೋಯ ತಂಙಳ್ ಮನ್ಶರ್, ಸಯ್ಯಿದ್ ಜಲಾಲುದ್ದೀನ್ ತಂಙಳ್ ಪೆರಾಲ, ಇಬ್ರಾಹಿಂ ಬಾವ ಹಾಜಿ ಮಂಗಳೂರು, ಕುಂಞಿ ಅಹ್ಮದ್ ಹಾಜಿ ದೇರಳಕಟ್ಟೆ, ಹುಸೈನ್ ಹಾಜಿ ಕೊಡಾಜೆ, ಅಝೀಝ್ ಹಾಜಿ ಕುತ್ತಾರ್, ಉಸ್ಮಾನ್ ಹಾಜಿ ಮಿತ್ತೂರು ಎನ್.ಎಸ್. ಕರೀಂ ಹಾಜಿ ಮಂಜನಾಡಿ, ಸಿ.ಎಂ. ಅಬೂಬಕ್ಕರ್ ಲತೀಫಿ ಎಣ್ಮೂರು ಮೊದಲಾದವರು ಉಪಸ್ಥಿತರಿದ್ದರು.
ಬಂಟ್ವಾಳ ಶಾಸಕ ಬಿ. ರಮಾನಾಥ ರೈ ಅವರ ಅಧ್ಯಕ್ಷತೆಯಲ್ಲಿ ಸೌಹಾರ್ದ ಸಮಾವೇಶ ನಡೆಯಿತು. ಶಾಸಕ ಯು.ಟಿ. ಖಾದರ್, ವಕ್ಫ್ ಮಂಡಳಿ ಚೆಯರ್ಮೆನ್ ಎನ್.ಕೆ.ಎಂ. ಶಾಫಿ ಸಅದಿ ನಂದಾವರ, ಜಿ.ಪಂ. ಸದಸ್ಯ ಎಂ.ಎಸ್. ಮುಹಮ್ಮದ್, ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಹಾಜಿ ಉಸ್ಮಾನ್, ಎ.ಎ. ಹೈದರ್ ಪರ್ತಿಪ್ಪಾಡಿ, ಯು.ಎಸ್. ಹಂಝ ಉಳ್ಳಾಲ, ಎಸ್.ಕೆ. ಖಾದರ್ ಹಾಜಿ ಮುಡಿಪು, ಕೆ.ಎಂ. ಸಿದ್ದೀಕ್ ಮೋಂಟುಗೋಳಿ, ಕೆ.ಎಂ. ಇಸ್ಮಾಯಿಲ್ ಸಅದಿ ಕಿನ್ಯ, ಎಂ.ಬಿ.ಎಂ. ಸಾದಿಕ್ ಮಾಸ್ಟರ್ ಮಲೆಬೆಟ್ಟು, ಅಬ್ದುರ್ರಹ್ಮಾನ್ ಮದನಿ ಪಡನ್ನ, ಅಬ್ದುಲ್ ರಝಾಕ್ ಕುಕ್ಕಾಜೆ, ಬಿ.ಎಂ. ಅಬ್ಬಾಸ್ ಅಲಿ ಬೋಳಂತೂರು, ರಫೀಕ್ ಹಾಜಿ ಸುರಿಬೈಲು, ನಾರಾಯಣ ಟೈಲರ್ ಬೋಳಂತೂರು, ಯಾಕೂಬ್ ದಂಡೆಮಾರ್, ಇಬ್ರಾಹಿಂ ಖಲೀಲ್ ಮೊದಲಾದವರು ಭಾಗವಹಿಸಿದ್ದರು. ದಾರುಲ್ ಅಶ್-ಅರಿಯ್ಯ ಮೆನೇಜರ್ ಸಿ.ಎಚ್. ಮುಹಮ್ಮದ್ ಅಲಿ ಸಖಾಫಿ, ಸಿ.ಎಚ್. ಯೂಸುಫ್ ಮದನಿ ಇದ್ದರು.
0 comments:
Post a Comment