Thursday 25 September 2014

ಮತ ಪಂಗಡಗಳೆಲ್ಲೆಯನ್ನು ಮೀರಬೇಕಾದ ಮಾನವತಾ ಯಾತ್ರೆ


ಮನುಕುಲವನ್ನು ಗೌರವಿಸಿ ಎಂಬ ಧ್ಯೇಯ ವಾಕ್ಯದೊಂದಿಗೆ ದಕ್ಷಿಣ ಭಾರತದ ಸುಪ್ರಸಿದ್ಧ ಉಲಮರಾದಂತಹ ಶೈಖುನಾ ಕಾಂತಪುರಂ ಅಬೂಬಕ್ಕರ್ ಮುಸ್ಲಿಯಾರ್ ಉಸ್ತಾದರು ಕೈಗೊಂಡಿರುವ ಕರ್ನಾಟಕ ಯಾತ್ರೆಯು ಮುಸ್ಲಿಮ್ ಸಮುದಾಯದಲ್ಲಿ ಒಂದು ಬಿರುಸಿನ ಬದಲಾವಣೆಯ ಗಾಳಿಯನ್ನು ಬೀಸಲಿ.....

*ಸುನ್ನಿ,ಸಲಫಿ,ಎಸ್.ಕೆ.ಎಸ್.ಎಸ್.ಎಫ್,ಎಸ್.ಎಸ್.ಎಫ್,ಜಮಾತುಲ್ ಇಸ್ಲಾಂ,ತಬ್ಲೀಗ್ ಮುಂತಾದ ಹಲವು ಪಂಗಡಗಳಾಗಿ ಛಿದ್ರ ಛಿದ್ರಗೊಂಡಿರುವ ನಮ್ಮ ಸಮುದಾಯವು ಒಂದಾಗಲಿ

*ಪರಸ್ಪರ ಸಲಾಮ್ ಹೇಳಲು ತಾತ್ಸಾರ ಮನೋಭಾವನೆ ತೋರುತ್ತಿದ್ದಂತಹ ಜನರು ಒಬ್ಬರನ್ನೊಬ್ಬರು ಪರಸ್ಪರ ಆಲಂಗಿಸಿಕೊಂಡು ಸಲಾಮ್ ಹೇಳುವಂತಾಗಲಿ

*ನಾನು ಆ ಪಂಗಡದವನು ನಾನು ಈ ಪಂಗಡದವನು ಅಂತ ಹೇಳುತ್ತಿದ್ದ ಜನರು ಎಲ್ಲಾ ಪಂಗಡಬೇದ ಗಳನ್ನು ಮರೆತು ನಾವೆಲ್ಲರೂ ಮುಸ್ಲಿಮರು ಎಂದು ಹೆಮ್ಮೆಯಿಂದ ಹೇಳುವಂತಾಗಲಿ

*ಆ ಪಂಗಡದವನು ಸ್ವರ್ಗಕ್ಕೆ ಹೋಗಲಾರ ನಮ್ಮ ಪಂಗಡದವರಿಗೆ ಮಾತ್ರ ಸ್ವರ್ಗ ನಿಶ್ಚಿತ ಎಂದು ಬೀಗುತಿದ್ದ ಜನರು ಯಾರಿಗೆ ಸ್ವರ್ಗ ಯಾರಿಗೆ ನರಕ ಎಂದು ನಿಶ್ಚಯಿಸುವವನು ಅಲ್ಲಾಹನ ಹೊರತು ಬೇರೆ ಯಾರು ಅಲ್ಲ ಎಂಬ ಸತ್ಯವನ್ನು ಅರಿಯುವಂತಾಗಲಿ

*ಕುರ್ ಹಾನ್ ಮತ್ತು ಹದೀಸಿನ ಗಂಧ ಗಾಳಿ ಗೊತ್ತಿಲ್ಲದೆ ಯಾರೋ ಏನೋ ಹೇಳಿ ಕೊಟ್ಟದ್ದನ್ನೇ ಇಸ್ಲಾಂ ಎಂದು ನಂಬಿದ್ದ ಜನರು ಕುರ್ ಹಾನ್ ಮತ್ತು ಹದೀಸಿನ ನೈಜ ಅರ್ಥವನ್ನು ಕಲಿತು ಒಬ್ಬ ನಿಜವಾದ ಮುಸ್ಲಿಮನಾಗುವಂತಾಗಲಿ

*ನಮ್ಮ ಈ ಒಗ್ಗಟ್ಟನ್ನು ನೋಡಿ ಕೆಲವುಮುಸ್ಲಿಮ್ ವಿರೋಧಿ ಸಂಘಟನೆಗಳು ಅಸೂಯೆ ಪಡುವಂತಾಗಲಿ

      ಆದರೆ ಇದೆಲ್ಲವೂ ಸಾಧ್ಯನಾ?ಎಂಬ ಪ್ರಶ್ನೆ ನಮ್ಮಲ್ಲಿ ಎದುರಾಗಬಹುದು.ಖಂಡಿತವಾಗಿಯೂ ಸಹ ನಮ್ಮಲ್ಲಿ ಇಂತಹ
ಒಂದು ಬದಲಾವಣೆ ಸಾದ್ಯವಿದೆ ಏಕೆಂದರೆ ಸೋದರ ಪ್ರೇಮವ ಜಗತ್ತಿಗೆ ಸಾರಿದ ಮಹಮ್ಮದ್ ಮುಸ್ತಫ (ಸ.ಅ) ರವರ ಅನುಯಾಯಿಗಲು ನಾವು.ನಮ್ಮಿಂದ ಅಸಾಧ್ಯವೆಂಬುದು ಯಾವುದೂ ಇಲ್ಲ.

                 ಇನ್ಶಾಅಲ್ಲಾ ಇಂತಹ ಒಂದು ಬದಲಾವಣೆಯ ಪ್ರಾರಂಭವು ನಮ್ಮ ಉಸ್ತಾದರ ಕರ್ನಾಟಕ ಯಾತ್ರೆಯಿಂದ ಆರಂಭಗೊಳ್ಳಲಿ ಹಾಗು ಉಸ್ತಾದರಿಗೆ ಇನ್ನೂ ಸಹ ಇಂತಹ ಒಳ್ಳೆ ಒಳ್ಳೆಯ ದೀನೀ ಕಾರ್ಯವನ್ನು ಮಾಡಲು ಸರ್ವಶಕ್ತನಾದ ಅಲ್ಲಾಹನು ಅನುಗ್ರಹಿಸಲಿ..............ಆಮೀನ್ ಯಾ ರಬ್ಬಲ್ ಆಲಾಮೀನ್

ಅಷ್ಟ ದಿಕ್ಕುಗಳಲ್ಲಿ ಮೊಳಗಲಿ ಅಲ್ಲಾಹು ಅಕ್ಬರ್ ಎಂಬ ತಕ್ಬೀರ್

ಮಹಮ್ಮದ್ ಅನ್ವರ್ ಮಠ

Saturday 20 September 2014

ಮಾನವೀಯತೆ ಮರೆತ ಮಾತಿನ ಮಲ್ಲ ಮೋದಿ..!


ಇಂದು ಭಾರತೀಯ ಮುಸ್ಲಿಮರು ದೇಶಪ್ರೇಮಿಗಳಾಗಿ ಕಾಣಿಸಿದ ಮೋದೀಜಿಯವರಿಗೆ..

ಅಂದು ಗುಜರಾತಿನ ಮುಸ್ಲಿಮರು ಮನುಷ್ಯರಾಗಿ ಕಂಡಿದ್ದರೆ ಅದೆಷ್ಟೋ ಮುಸ್ಲಿಂ ಜೀವಗಳು ಅನ್ಯಾಯವಾಗಿ ಬಲಿಯಾಗುತ್ತಿರಲಿಲ್ಲ...!!

ಸಹಸ್ರಾರು ಗರ್ಭಿಣಿ ಮುಸ್ಲಿಂ ಯುವತಿಯರ ಭ್ರೂಣಗಳು ತ್ರಿಸೂಲಗಳಿಂದ ಹೊರಗೆಳೆದು ಅನ್ಯಾಯವಾಗಿ,ಅತೀ ಕ್ರೂರವಾಗಿ ಕೊಲ್ಲಲ್ಪಡುತ್ತಿರಲಿಲ್ಲ...!!!

ಅದೆಷ್ಟೋ ಮುಗ್ಧ ಕಂದಮ್ಮಗಳು ಹೆತ್ತವರನ್ನು ಕಳೆದುಕೊಂಡು ತಬ್ಬಲಿಗಳಾಗುತ್ತಿರಲಿಲ್ಲ...!!!

ಪ್ರಜಾಪ್ರಭುತ್ವ ಭಾರತದಲ್ಲಿ ಗುಜರಾತ್ ಅನ್ನುವ ರಾಜ್ಯ ಮನುಷ್ಯ ಹತ್ಯೆಗಳ ಮೂಲಕ ಗುರುತಿಸಿಕೊಳ್ಳುತ್ತಿರಲಿಲ್ಲ...!!!

ಮನುಷ್ಯ, ಮನಸ್ಸುಗಳ ನಡುವೆ ನಂಬಿಕೆಗಳು ಬಲಗೊಳ್ಳಲಿ..
ಧರ್ಮ,ಧರ್ಮಗಳ ನಡುವಿನ ಅಪನಂಬಿಕೆಗಳಿಗೆ ಮನುಷ್ಯ,ಮನುಷ್ಯರ ನಡುವಿನ ಸಂಬಂಧ ಕಳೆದುಕೊಳ್ಳದಿರಲಿ..




ಮನುಷ್ಯ, ಮನಸ್ಸುಗಳ ನಡುವೆ ನಂಬಿಕೆಗಳು ಬಲಗೊಳ್ಳಲಿ..
ಧರ್ಮ,ಧರ್ಮಗಳ ನಡುವಿನ ಅಪನಂಬಿಕೆಗಳಿಗೆ ಮನುಷ್ಯ,ಮನುಷ್ಯರ ನಡುವಿನ ಸಂಬಂಧ ಕಳೆದುಕೊಳ್ಳದಿರಲಿ..

ರಾಜಕೀಯ ಲಾಭಕ್ಕೋಸ್ಕರ ಅಮಾನವೀಯತೆಯ ಪ್ರದರ್ಶನಕ್ಕೆ ಇನ್ನೊಂದು ಗುಜರಾತ್ ಸೃಷ್ಟಿಯಾಗದಿರಲಿ ಎಂದು ಆಶಿಸೋಣ...

ಸ್ನೇಹಜೀವಿ ಅಡ್ಕ.

Thursday 18 September 2014

ದೇಶದ್ರೋಹಿಗಳ ಕಣ್ಣುಕುಕ್ಕುತ್ತಿರುವ ಮದ್ರಸ ಶಿಕ್ಷಣ



"ತನ್ನನ್ನು ಆರೋಪಿಸುವವನು ತನ್ನಂತೆಯೇ ಒಬ್ಬ ಮನುಷ್ಯನೆಂದೂ,ಆತನಿಗೆ ಅದಕ್ಕೆ ಅವಕಾಶವಿಲ್ಲವೆಂದೂ ಜನರು ತಿಳಿಯುವ ಕಾಲ ದೂರವಿಲ್ಲ" ಎಂಬ ಅನಂತ ಮೂರ್ತಿಯವರ ಮಾತು ಅದೆಷ್ಟು ಸತ್ಯ!!!!

ಸಿಹಿ ನೀಡಿದಾಗ ಕೂಗು ನಿಲ್ಲಿಸುವ ಮುದ್ದು ಪುಟಾಣಿಗಳಿಂದ ಕೂಡಿರುವ ಗುರುಕುಲದಲ್ಲಿ ಭಯೋತ್ಪಾದನೆ ಕಲಿಸಲಾಗುತ್ತಿದೆ ಎಂಬ ನಿಮ್ಮ ಅರ್ಥ ಶೂನ್ಯ ಮಾತು ಖಂಡನೀಯವಾಗಿದೆ.
ಮುದ್ದು ಮಕ್ಕಳ ನಿಷ್ಕಳಂಕ ಮನಸ್ಸಿಗೆ ನೀತಿ ಪಾಠ ಕಲಿಸುವ ಮದ್ರಸಕ್ಕೂ ಭಯೋತ್ಪಾದನೆಗೂ ಯಾವುದೇ ಸಂಭಂಧವಿಲ್ಲ.

ತನ್ನ ಕಾಮ ಈಡೇರಿಕೆ ಹುಡುಗಿಯೊಬ್ಬಳು ತನ್ನ ಮುಂದೆ ಬೆತ್ತಲಾದಾಗ ದೇಶದ ರಹಸ್ಯಗಳನ್ನು ಬ್ರಿಟಿಷರ ಮುಂದೆ ಬಯಲು ಮಾಡಲು ಹಿಂಜರಿಯದ ಕುಮಾರ ನಾರಾಯಣನ ಅನುಯಾಯಿಗಳಾದ ನಿಮ್ಮಿಂದ ನಮ್ಮ ಮದರಸಗಳು ದೇಶ ಪ್ರೇಮವನ್ನು ಕಲಿಯಬೇಕಾಗಿಲ್ಲ.

ದಿವಂಗತ ಅನಂತಮೂರ್ತಿಯವರು ಇಂದು ಈ ಮಾತು ಕೇಳಿರುತ್ತಿದ್ದರೆ ಅವರೇ ನಿಮಗೆ ಉತ್ತರಿಸುತ್ತಿದರು.

ಒಬ್ಬರು ಅನಂತ ಮೂರ್ತಿಗಳು ನಮ್ಮನ್ನಗಲಿದ್ದಾರೆ.
ಆದರೆ,
ಅವರಂತಹ ಸಾವಿರಾರು ಅನಂತ ಮೂರ್ತಿಗಳು ಇನ್ನೂ ಬಾಕಿಯಾಗಿದ್ದಾರೆ ಎಂಬುವುದನ್ನು ಮರೆಯದಿರಿ.

-ಸಫ್ವಾನ್ ಅಡ್ಯನಡ್ಕ.

Tuesday 16 September 2014

ಭಯೋತ್ಪಾದಕ ಮಾಧ್ಯಮ ಜಗತ್ತು..!


ಮಾಧ್ಯಮಗಳ ಕಪೋಲಕಲ್ಪಿತ ಚಿತ್ರೀಕರಣಕ್ಕೆ ಮುಸ್ಲಿಂ ಯುವಕರು ಬಲಿಯಾಗುತ್ತಿರುವುದು ಸಮುದಾಯ ಎಚ್ಚರಗೊಳ್ಳಲು ಸಮಯವಾಗಿದೆ ಎಂಬುವುದರ ಸೂಚಕವಾಗಿದೆ.


ಕೆಲವು ದಿನಗಳ ಹಿಂದೆ ಹೊಟ್ಟೆಪಾಡಿಗಾಗಿ ವಿದೇಶಕ್ಕೆ ತೆರಳಲು ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಖಾದರ್ ಎಂಬ ಅಮಾಯಕನಿಗೆ "ಭಯೋತ್ಪಾದಕ" ಎಂಬ ಪಟ್ಟ ಕಟ್ಟಲು ಮಾಧ್ಯಮಗಳು ಪಟ್ಟ ಪ್ರಯತ್ನ ಚಿಕ್ಕದಲ್ಲ.

ಸಂಘ ಪರಿವಾರದ ಅಜೆಂಡಾಗಳು ಇಂದು ಮಾಧ್ಯಮಗಳ ಮೂಲಕ ಕಾರ್ಯರೂಪಕ್ಕೆ ತರಲು ಶ್ರಮಿಸಲಾಗುತ್ತಿದೆ ಎಂಬುವುದಾಗಿದೆ ಸತ್ಯ..
ಮಾಧ್ಯಮಗಳ ಹಣೆಪಟ್ಟಿ ಕಟ್ಟಿರುವ ಸಂಘ ಪರಿವಾರದ ನ್ಯೆಜ ಮುಖಗಳನ್ನು ಇನ್ನಾದರೂ ಸಮೂಹ ಬಹಿಷ್ಕರಿಸಬೇಕಾಗಿದೆ.ಇದು ಕಾಲದ ಅನಿವಾರ್ಯತೆಯೂ ಹೌದು.

ಮಾಧ್ಯಮಗಳ ಪೊಳ್ಳು ವಾರ್ತೆ ಪ್ರಕಟವಾಗುವುದನ್ನೇ ಕಾದು ಕುಳಿತಂತಿದ್ದ ಕೆಲವೊಂದು ದೇಶ ದ್ರೋಹಿಗಳು  ಸಾಮಾಜಿಕ ತಾಣಗಳಲ್ಲಿ ಮುಸ್ಲಿಂ ಭಯೋತ್ಪಾದನೆ ಎಂಬ ಶೀರ್ಷಿಕೆ ಬಳಸಿ ಉದ್ದಕ್ಕೆ ಬರೆಯಲೆತ್ನಿಸಿದ್ದರು ಎಂಬುವುದು ಅವರ  ಮಾನವೀಯತೆಯ ವಿಶಾಲತೆಯನ್ನು ಎತ್ತಿ  ತೋರಿಸುತ್ತದೆ,ಅಲ್ಲವೇ???
ಇಂತಹ ಸೌಹಾರ್ದ ವಿರೋಧಿ ಬರಹಗಾರರಲ್ಲಿ ಒಬ್ಬ ಭಾರತೀಯ ಮುಸ್ಲಿಮನಾಗಿ ನಾನು ಒಂದು ವಿಷಯ ಹೇಳಲೇ???

ಅಜ್ಮಲ್ ಕಸಬ್ ಎಂಬ ಉಗ್ರನನ್ನು ಗಲ್ಲಿಗೇರಿಸಿದಾಗ ಧರ್ಮದ ಬಣ್ಣ ನೀಡಿ,ನಮ್ಮ ಸಹೋದರನನ್ನು ಅನ್ಯಾಯವಾಗಿ ಗಲ್ಲಿಗೇರಿಸಲಾಯಿತು ಎಂದು ಇಲ್ಲಿನ  ಮುಸ್ಲಿಮರಾದ ನಾವು  ಪ್ರತಿಭಟಿಸಲಿಲ್ಲ.
ಬದಲಾಗಿ,
ಒಬ್ಬ ಭಯೋತ್ಪಾದಕನ ನಿರ್ನಾಮವಾಯಿತು ಎಂದು ಎದೆ ತಟ್ಟಿ ಅಭಿಮಾನಿಸಿದ ಭಾರತೀಯರು ನಾವು.

ಹಿಂದೂ ಹೆಸರಿನ ಕೆಲವೊಬ್ಬರು "ಭಯೋತ್ಪಾದನೆ" ಎಂಬ ಪಾಠದ ಶಿಕ್ಷಕರಾಗಿದ್ದಾರೆ ಎಂಬುವುದು ಈ ಹಿಂದಿನ ಕೆಲವೊಂದು ಬಾಂಬ್ ಸ್ಫ್ಹೋಟಗಳು ಸಾಬೀತು ಪಡಿಸಿದೆ.

ರಾಜ್ಯ ದ್ರೋಹದ ಪಟ್ಟ ನಮಗೆ ಕಟ್ಟಬೇಡಿ.
ಯಾಕೆಂದರೆ,ರಾಜ್ಯ ಸ್ನೇಹವು ಧರ್ಮದ ಭಾಗವಾಗಿದೆ ಎಂದು ನಮ್ಮನ್ನು ಕಲಿಸಿದ ಇಸ್ಲಾಂ, ರಾಜ್ಯ ದ್ರೋಹವನ್ನು ನಮಗೆ ಕಲಿಸಿಲ್ಲ.

ಮುಗ್ಧ ಅಮಾಯಕರಿಗೆ "ಭಯೋತ್ಪಾದಕ"ಎಂಬ ಹಣೆಪಟ್ಟಿ ಕಟ್ಟಲು  ಸಂಘ ಪರಿವಾರದ ತಾಳಕ್ಕನುಸಾರವಾಗಿ ಕುಣಿಯುತ್ತಿರುವ ಕೆಲವೊಂದು ಮಾಧ್ಯಮಗಳಿಗೆ ನಮ್ಮದೊಂದು ಧಿಕ್ಕಾರವಿರಲಿ.

ಪ್ರವಾದಿ (ಸ.ಅ)ರವರ ವಚನವು ನಮ್ಮ ಹೃದಯಾಂತರಾಳದಲ್ಲಿ ಕಂಪಿಸಲಿ,
ಯಾವತ್ತೂ ರಾಜ್ಯದ್ರೋಹದ ಕನಸು ನಮಗೆ ಕಾಣದಿರಲಿ,
ಎಂದು ಆಶಿಸುತ್ತಾ,


ಸಫ್ವಾನ್ ಅಡ್ಯನಡ್ಕ.

Sunday 14 September 2014

ಇಸ್ಲಾಮುಲು ಮಾಣಿಕ್ಯತ್ತೆ ಬೆಲೆ ಯೆಡ್ತ್ ರಾಲ್ ಪೆಣ್ಣ್..


ಇಸ್ಲಾಮುಲು ಮಾಣಿಕ್ಯತ್ತೆ ಬೆಲೆ ಯೆಡ್ತ್ ರಾಲ್ ಪೆಣ್ಣ್..
ಅದ್ ಕ್ಕಾಯ್ತ್ ದುನಿಯಾವಿಡೀ ಅವುಲ್ಲೆ ಮೇಲೆ ಕಣ್ಣ್..!

ಎಡ್ತ್ ಟ್ಟ್ ನಡಕ್ಕೊನೂಲ ನಂಗಲೆ ಪೆಣ್ಣ್ ಮಕ್ಕ ಬುರ್ಖಾ
ಅಂಗನೆ ಬುದ್ದಿ ಉಲ್ಲೆಂಗಾಂಟ್ ಚೊಲ್ಡೆಂಗಲೆ ತರ್ಕ

ಕೊರಿಯೆ ಆಲ್ ಮಾರ್ ಸಮಾಜತ್ತ್ ಲ್ ಆವೊನುಗು ಬೇನಾಯಿಟ್ಟ್ ಬೊಂಬ
ಮರನ್ನ್ ಪೋಯಿಡಾರ್ ದೀನ್ ಇಸ್ಲಾಮುಡೆ ಅಂಜಿ ಕಂಬ

ಕುರ್ ಹಾನ್ ಡೆ ಅರ್ಥ ಚೊನ್ನೋಂಟು ಉಲ್ಲಾರ್ ಪತ್ತಾತೆಂಗ ಪಲ್ಲಿಡೆ ಪಡಿ
ಅರ್ಥ ಗೊಂತಿನ್ನೆಂಗಗ್ ಅದ್ರೊ ಸಮತ್ತ್ ಲ್ ಚೊನ್ನು ಕೊಡ್ಕೊಗು ಮಡಿ
ಅದ್ ಕ್ಕಾಯ್ತ್ ಇಂಡ್ ದೀನ್ ಇಸ್ಲಾಮುಡೆ ಮೇಲೆ ಎಲ್ಲಾರ್ ಗುಂ ಚದಿ

ಪೆಣ್ಣ್ ಗ್ ಬುರ್ಖಾ ಬೇನಾ ಬೇಂಡೆಂಟ್ ಚೊನ್ನುಟ್ಟ್ ಆಕೊನೂಲ ವೋಟು
ಇಂಗ ಚೊಲ್ಡೆ ಬಿಸಯ ಎಲ್ಲಾ ಬೆರುಂ ಲಾಟ್ ಬೊಟು

ನೇರಾಯ್ತ್ ಆಕೊನು ಇಂಡ್ ವೋಟು
ಪೆಣ್ಣ್ ಮಕ್ಕ ಜಾಮಂತೆ ಒರ್ತಿಯೇ ಪೋಯೆಂಗ್ ಪರ್ ತ್ತ್
ಎತ್ತರೆ ಆಲ್ ತಿರಿಂಜಿ ಬಂಡಾರ್ಂಟ್ ಸಮತ್ತ್


* ಮಹಮ್ಮದ್ ಅನ್ವರ್ ಮಠ

Saturday 6 September 2014

ಅಪ್ಪಟ ದೇಶಪ್ರೇಮಿ, ಕೋಮುವಾದಿಗಳ ದುಸ್ವಪ್ನ..! ಅಕ್ಬರುದ್ದೀನ್ ಉವೈಸಿ


ಇವತ್ತು ಹಲವು ಮಾದ್ಯಮಗಳು ಮಾಡುವ ಹೇಸಿಗೆ ಕೆಟ್ಟ ಕೆಲಸಗಳಿಂದಾಗಿ ಮಾದ್ಯಮ ಜಗತ್ತು
ತನ್ನ ವರ್ಚಸ್ಸನ್ನು ಕಳೆದು ಕೊಳ್ಳುತ್ತಾ ಬಂದಿದೆ....ಒಬ್ಬ ನಿಜವಾದ ಅಪರಾದಿಯನ್ನು ನಿರಪರಾದಿಯನ್ನಾಗಿಯೂ,ಒಬ್ಬ ನಿರಪರಾದಿಯನ್ನು ಅಪರಾದಿಯನ್ನಾಗಿಯೂ ಬಿಂಬಿಸುವಲ್ಲಿ ಈ ಮಾದ್ಯಮಗಳು ಪ್ರಮುಖ ಪಾತ್ರವನ್ನು ವಹಿಸುತ್ತದೆ...ಇದರ ಪ್ರಭಾವವು ನಮಗೆ ಇಂದು ನಮ್ಮ ಕಣ್ಣ ಮುಂದೆಯೇ ಗೋಚರಿಸುತ್ತಾ ಇದೆ,ಆರ್.ಎಸ್.ಎಸ್ ನವರಿಂದ ತುಂಬಿ ತುಳುಕುತ್ತಿರುವ ಮಾದ್ಯಮ ಜಗತ್ತಿನ ದುಷ್ಟ ಕುತಂತ್ರಗಳಿಂದಾಗಿ ಇವತ್ತು ಅದೆಷ್ಟೋ ಮುಸ್ಲಿಂ ಯುವಕರು ಶಂಕಿತ ಭಯೋತ್ಪಾದಕರು ಎಂಬ ನೆಲೆಯಲ್ಲಿ ಬಂದಿತರಾಗಿ ಯಾವುದೇ ವಿಚಾರಣೆಯನ್ನು ಸಹ ಎದುರಿಸಲಾಗದೆ ತಮ್ಮ ಜೀವನದ ಅತ್ಯಮೂಲ್ಯ ಕ್ಷಣಗಳನ್ನು ಕಳೆದುಕೊಳ್ಳುತ್ತಿದ್ದಾರೆ..
    ನಿಮಗೆ ಗೊತ್ತಿರಬಹುದು ಕೆಲವು ದಿನಗಳ ಹಿಂದೆ ಮುಸ್ಲಿಮರ ಪ್ರಭಾವಿ  ನಾಯಕ ಹೈದರಾಬಾದ್ ಸಂಸದ ಜನಾಬ್ ಅಸದುದ್ದೀನ್ ಒವೈಸಿ ಯವರನ್ನು ಕೆಲವು ಮಾಧ್ಯಮಗಳು ಸುಳ್ಳು ಸುದ್ದಿಗಳನ್ನು ಬಿತ್ತರಿಸಿ ದೇಶ ದ್ರೋಹಿ ಎಂಬ ಹಣೆಪಟ್ಟಿಯನ್ನು ಕಟ್ಟಲು ಪ್ರಯತ್ನ ಪಟ್ಟವು....ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆದರೆ ಭಾರತದ ೨೫ ಕೋಟಿ ಮುಸ್ಲಿಮರು ಪಾಕಿಸ್ತಾನದ ಸೈನ್ಯದೊಂದಿಗೆ ಸೇರಿ ಭಾರತದ ವಿರುದ್ಧ  ಯುದ್ದ ಮಾಡುತ್ತೇವೆ ಎಂಬ ಹೇಳಿಕೆಯನ್ನು ನೀಡಿದ್ದಾರೆಂಬ ಸುಳ್ಳಿನ ಕಂತೆಯನ್ನು ಬಿತ್ತರಿಸಲಾಯಿತು.ಅಸದುದ್ದೀನ್ ಒವೈಸಿ ಯವರಂತಹ ನಾಯಕರಿಗೆ ಇಂತಹ ದುರ್ಗತಿ ಬಂದರೆ ಇನ್ನು ಒಬ್ಬ ಸಾಮಾನ್ಯ ಮುಸ್ಲಿಮನ ಸ್ಥಿತಿ ಗತಿಯೇನು??
ಪ್ರಜಾಪ್ರಭುತ್ವದ ಕಾವಲು ನಾಯಿಯಂತೆ ಕೆಲಸ ಮಾಡಬೇಕಾಗಿದ್ದಂತಹ ಇಂತಹ ಮಾದ್ಯಮಗಳಿಗಿಂತ ತನ್ನ ಕಾಮ ತೃಷೆಯನ್ನು ತೀರಿಸಿಕೊಳ್ಳಲು ಹೊತ್ತಲ್ಲದ ಹೊತ್ತಿನಲ್ಲಿ ಎಲ್ಲಂದರಲ್ಲಿ ಗಂಟು ಹಾಕಿ ಕೊಳ್ಳುವ ನಮ್ಮ ಊರಿನ ಬೊಗ್ಗಿ ಮತ್ತು ಬೊಗ್ರ ನಾಯಿಗಳು ಎಷ್ಟೋ ವಾಸಿ ಅಲ್ಲವೇ?
ಪಾಕಿಸ್ತಾನದ ನ್ಯೂಸ್ ವಾಹಿನಿಯೊಂದು ಪ್ರಾಯೋಜಿಸಿದಂತಹ ಇಂಡೋ-ಪಾಕ್ ಡಿಬೆಟ್ ಕಾರ್ಯಕ್ರಮವೊಂದರಲ್ಲಿ ಅಂದಿನ ಕೇಂದ್ರ ಸಚಿವರಾಗಿದ್ದಂತಹ ಶ್ರೀ.ಮಣಿಶಂಕರ್ ಅಯ್ಯರ್ ಮತ್ತು ಬಿ.ಜೆ.ಪಿ ಸಂಸದ ಕೀರ್ತಿ ಅಝಾದ್ ರೊಂದಿಗೆ ಸೇರಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿದಂತಹ ಜನಾಬ್ ಅಸದುದ್ದೀನ್ ಒವೈಸಿ ಯವರು ಪಾಕಿಸ್ತಾನದ ಕೆಲವು ಸಚಿವರುಗಳು ಕೇಳಿದ ಪ್ರಶ್ನೆಗಳಿಗೆ ತನ್ನ ಮಾತಿನ ಚಾಟಿ ಏಟಿನ ಮೂಲಕ  ಉತ್ತರಿಸಿದ ಒಂದು ಸಣ್ಣ ವೀಡಿಯೋ ತುಣುಕನ್ನು ನಾನು ಕೆಳಗೆ ಅಪ್ ಲೋಡ್ ಮಾಡಿದ್ದೇನೆ.....ದಯವಿಟ್ಟು ಈ ವೀಡಿಯೋವನ್ನು ವೀಕ್ಷಿಸಿ ನೀವೇ ನಿರ್ಧರಿಸಿ ಇಂತಹ ವ್ಯಕ್ತಿಗಳಿಂದ ಇಂತಹ ದೇಶ ಪ್ರೇಮಿಗಳಿಂದದೇಶದ್ರೋಹದ ಮಾತುಗಳು ಹೊರಡಲು ಸಾದ್ಯವೇ ಎಂದು..


ಸಂಘ ಪರಿವಾರದವರ ಕುತಂತ್ರದಿಂದಾಗಿ ಭಾರತದ ಮುಸ್ಲಿಮರು ಪಡುತ್ತಿರುವ ಯಾತನೆಯ ಬಗ್ಗೆ ಪಾಕಿಸ್ತಾನದ ಸಚಿವರೊಬ್ಬರು ವಿವರಿಸಿದಾಗ ವಾಸ್ತವವಾಗಿ ಅದು ನಿಜವಾಗಿದ್ದರೂ ಸಹ ತನ್ನ ದೇಶವು ಇನ್ನೊಂದು ರಾಷ್ಟ್ರದೆದುರು ತಲೆ ತಗ್ಗಿಸಬಾರದೆಂಬ ಉದ್ದೇಶದಿಂದ ತನ್ನ ತೀಕ್ಷ್ಣವಾದ ಪ್ರತಿಕ್ರಿಯೆಯ ಮೂಲಕ ಆ ಸಚಿವನ ಬಾಯಿ ಮುಚ್ಚಿಸಿ ನಿಜವಾದ ದೇಶ ಪ್ರೇಮವನ್ನು ಮೆರೆದ ಅಸದುದ್ದೀನ್ ಒವೈಸಿಯವರ ದೇಶ ಪ್ರೇಮವೇ ಇವತ್ತು ಭಾರತದ ಪ್ರತಿಯೊಬ್ಬರಿಗೂ ಮಾದರಿ ಎಂಬುದನ್ನು ಮರೆಯದಿರಿ

ಇಂತೀ
ನಿಮ್ಮ ಸಹೋದರ
ಮಹಮ್ಮದ್ ಅನ್ವರ್ ಮಠ

 
Design by Free WordPress Themes | Bloggerized by - Free Blogger Themes | @javtl