ಫೆಬ್ರವರಿ 23 ಹಾಗೂ 24 1991 ಬೆಲಿಯೇ ಎದ್ದು ಹೊಲ ಮೇದ ದಿನ, ದೇಶ ಕಾಯುವ ಯೋಧರ ಕಾಮವಾಂಛೆಗೆ ಸಿಲುಕಿ ಕಾಶ್ಮೀರದ ಸಹೋದರಿಯರ ಆರ್ತನಾದ ಮುಗಿಲು ಮುಟ್ಟಿದ ಕರಾಳ ರಾತ್ರಿ, ಆ ಸಹೋದರಿಯರ ಕಣ್ಣೀರು ದಾಳ್ ಸರೋವರದಂತೆ ಧಾರೆಯಾಗಿ ಉಕ್ಕಿ ಹರಿದ ರಾತ್ರಿ ..
ಹೌದು 24 ವರ್ಷಗಳ ಹಿಂದಿನ ಇದೇ ರಾತ್ರಿ ಭಾರತದ ಸ್ವರ್ಗ ಎಂಬ ಖ್ಯಾತಿಯ ಭಗವಂತನ ವಿಶೇಷ ಒಲುಮೆಯ ಸುಂದರ ನಾಡು ಕಾಶ್ಮೀರದ ಕುನಾನ್ ಪೋಶ್ಪುರ ಎಂಬ ಗ್ರಾಮದ ನಾಗರೀಕರು ಅಪಾಯದ ಮುನ್ಸೂಚನೆ ಇಲ್ಲದೆ ಎಂದಿನಂತೆ ಸುಖನಿದ್ರೆಗೆ ಜಾರಿದ್ದರು
ಮದ್ಯರಾತ್ರಿಯಾಗುತ್ತಿದ್ದಂತೆ ಬಂದೂಕು ಹಿಡಿದ ಭಾರತದ ಸೈನಿಕರು ಪೋಸ್ಫರ ಗ್ರಾಮ ಬಹುತೇಕ ಮನೆಗಳಿಗೆ ನುಗ್ಗಿ ಮೊದಲು ಅಲ್ಲಿದ್ದ ಪುರುಷರನ್ನೆಲ್ಲಾ ಬೂಟುಗಾಳಿನಿಂದ ಒದ್ದು ತಮ್ಮ ಸೇನಾ ವಾಹನಗಳಲ್ಲಿ ಬಂದಿಯಾಗಿಸಿದವರೇ ನಂತರ ಮುಸ್ಲಿಂ ಮನೆಯೊಳಕ್ಕೆ ನುಸುಳಿ ಮದುವೆಯಾದ ಮಹಿಳೆಯರನ್ನು ಮದುವೆಯಾಗ ಶಾಲಾ ಕಾಲೇಜು ಕಳಿಯುತ್ತಿರುವ ಯುವತಿಯರನ್ನು ಅಮಾನುಷವಾಗಿ ಸಾಮೂಹಿಕ ಅತ್ಯಾಚಾರವೆಸಗುತ್ತಾರೆ ಸಹಾಯಕ್ಕಾಗಿ ಆ ಸಹೋದರಿಯರ ಕೂಗಾಟ ಚೀರಾಟಗಳೆಲ್ಲವೂ ಗಾಳಿಯಲ್ಲೇ ಲೀನವಾದವು.
ಇ ಪೈಶಾಚಿಕ ಕೃತ್ಯ ವ್ಯವಸ್ಥಿತವಾಗಿ ಮಾಧ್ಯಮಗಳು ಮುಚ್ಚಿಹಾಕಿದವು ಬೆಣ್ಣೆ ಕದ್ದು ತಿಂದವರ ಮೂತಿಗಳನ್ನು ಪತ್ರಿಕೆಗಳು ಪತ್ರಿಕೆಯ ಸಹಾಯದಿಂದ ಒರೆಸಿ ಜಗತ್ತು ಕಾಣದ ಹಾಗೆ ವಿಶ್ವಕ್ಕೆ ತಿಳಿಯದ ಹಾಗೆ ನೋಡಿಕೊಂಡವು.
ಇಂದಿಗೂ ಕಾಶ್ಮೀರದ ಆ ಹಳ್ಳಿಯ ಹೆಂಗಸರನ್ನು ಯಾರೂ ಮದುವೆಯಾಗುತ್ತಿಲ್ಲ ಅದೇಷ್ಟೋ ಸಹೋದರಿಯರು ಸೈನಿಕರ ಇ ರಾಕ್ಷಸೀ ಕೃತ್ಯದಿಂದ ಸರ್ವಸ್ವವವನ್ನೂ ಕಳೆದುಕೊಂಡಿದ್ದಾರೆ ಇವತ್ತಿಗೂ ಕಣ್ಣೀರಲ್ಲದೆ ಮಾತುಗಳು ಬರುತ್ತಿಲ್ಲ ಅವರ ಬಾಯಿಯಿಂದ.
ಕಳೆದ ಒಂದು ದಿವಸಗಳ ಮೊದಲು ದಿ ಹಿಂದು ಎಂಬ ಪತ್ರಕರ್ತನೊಡನೆ ಭಾರತದ ಸೈನಿಕರಿಂದ ಅತ್ಯಾಚಾರವಾದ ಕಾಶ್ಮೀರದ 48 ವಯಸ್ಸಿನ ನತದೃಷ್ಟ ಸಂತ್ರಸ್ತ ಮಹಿಳೆಯೊಬ್ಬಳು ನಾನು ನನ್ನ ಇಪ್ಪತ್ತನಾಲ್ಕನೆಯ ವಯಸ್ಸಿನಲ್ಲಿಯೇ ಮರಣ ಹೊಂದಿದ್ದೇನೆ ಆದರೂ ನಿಮ್ಮ ಮುಂದೆ ಇಗ ಬಂದು ನಿಂತಿರುವುದು ನ್ಯಾಯ ಸಿಗುವುದೋ ಎಂಬ ಆಸೆಯಿಂದ ಮಾತ್ರ ಎಂದಾಗ ಅಲ್ಲಿದ್ದವರ ಕಣ್ಣುಗಳು ಮಂಜಾದವು.
ಇ ಸಹೋದರಿಯರಿಗೆ ನ್ಯಾಯ ಸಿಗಲು ಪ್ರತಿಯೊಬ್ಬನು ಶಬ್ದಿಸಬೇಕು ಅನ್ಯಾಯಿ ಅಕ್ರಮಿಯಾದ ಅಡಳಿತಗಾರನ ವಿರುದ್ಧ ಹೊರಾಡಬೇಕು.
ಇದು ಸತ್ಯ ಘಟನೆ ಇ ಲೇಖನಕ್ಕೆ ದೇಶದ್ರೋಹದ ಮುದ್ರೆಯೊತ್ತಿ ನನ್ನನ್ನು ಕಂಬಿ ಎಣಿಸುವ ಹಾಗೆ ಮಾಡುವ ಅಲೋಚನೆಗಳಿದ್ದಲ್ಲಿ ಸ್ವಾಗತ ನ್ಯಾಯಕ್ಕಾಗಿ ಅನ್ಯಾಯದ ವಿರುದ್ಧ ಅತ್ಯಾಚಾರ ವಿರುದ್ಧ ಅಕ್ರಮಿಗಳ ವಿರುದ್ಧ ಶಬ್ದಿಸಿದ್ದಕ್ಕೆ ಜನರನ್ನು ಎಚ್ಚರಿಸಿದ್ದಕ್ಕೆ ಅದೆಷ್ಟೋ ಕಾಲ ಕಂಬಿ ಎಣಿಸುವುದಕ್ಕೆ ನಾನು ಸಿದ್ದನಿದ್ದೇನೆ, ಜೊತೆಗೆ ಇ ಲೇಖನವನ್ನು ನ್ಯಾಯಕ್ಕಾಗಿ ಯಾರ ಸಹಾಯವಿಲ್ಲದೆ ಸೃಷ್ಟಿಕರ್ತನೊಂದಿಗೆ ಕಣ್ಣೀರಿಡುತ್ತಿರುವ ಕಾಶ್ಮೀರದ ಸಂತ್ರಸ್ಥ ಆ ನನ್ನ ಸಹೋದರಿಯರಿಗೆ ಅರ್ಪಿಸುತ್ತಿದ್ದೇನೆ.
...ಜಿಯಾಂಗ್ ತ್ಸೋ..