Monday 23 March 2015

ಕಣ್ಣಿದ್ದೂ ಕುರುಡಾದ ಮನುವಾಣಿ..!

ಬೇಬಿ ನಿರ್ಭಯಾಳ  
ಬದುಕಿಗೆ ಬೆಳಕನ್ನು ನೀಡಲು  
ಮೊಂಬತ್ತಿಯ ಹಿಡಿದು  
ಬೀದಿಗಿಳಿಯಿತು ಜನ ಸಮೂಹ  
 
ಉದಯವಾಣಿಯೆಂಬ  
ಕೋಮುವಾಣಿ ಗೆ  
ಕಾಣಲಿಲ್ಲ ಪುಟ್ಟ  
ಮಗುವಿನ ಕಣ್ಣೀರು  
 
ಸುಳ್ಳು ಸುದ್ಧಿ ಹರಡಿ  
ವಿಕೃತ ಸುಖ ಪಡುವ  
ಚಾಳಿ ಇನ್ನೂ ಬಿಟ್ಟಿಲ್ಲ  
ಈ ವಾಣಿ  
 
ಪತ್ರಿಕಾ ಧರ್ಮವನ್ನು  
ಮರೆತು, ಜನರನ್ನು  
ದಾರಿ ತಪ್ಪಿಸುವ  
ಈ ವಾಣಿ ನಮಗೇಕೆ?  
 
ಸುಳ್ಳು ಸುದ್ದಿ ಹರಡುವ  
ಪತ್ರಿಕೆಯನ್ನು  
ಪ್ರಶ್ನಿಸುವ ವ್ಯವಸ್ಥೆ  
ದೇಶದಲ್ಲಿ ಇಲ್ಲವೇ?  
 
ನಿರ್ಭಯಾಳ ಬದುಕಿನಲ್ಲಿ  
ಚೆಂಡಾಟವಾಡಿದ ಕ್ರೂರಿಗಳ  
ಬೆನ್ನ ಹಿಂದೆ, ಉದಯವಾಣಿ  
ಇರಬಹುದೇ? - ಒಂದು ಸಂಶಯ  
 
                    - ಷಾ ಕುದ್ರಡ್ಕ


Posted by ಪ್ರತಿದಿನ ಪ್ರತಿಕ್ಷಣ

0 comments:

Post a Comment

 
Design by Free WordPress Themes | Bloggerized by - Free Blogger Themes | @javtl