"ತನ್ನನ್ನು ಆರೋಪಿಸುವವನು ತನ್ನಂತೆಯೇ ಒಬ್ಬ ಮನುಷ್ಯನೆಂದೂ,ಆತನಿಗೆ ಅದಕ್ಕೆ ಅವಕಾಶವಿಲ್ಲವೆಂದೂ ಜನರು ತಿಳಿಯುವ ಕಾಲ ದೂರವಿಲ್ಲ" ಎಂಬ ಅನಂತ ಮೂರ್ತಿಯವರ ಮಾತು ಅದೆಷ್ಟು ಸತ್ಯ!!!!
ಸಿಹಿ ನೀಡಿದಾಗ ಕೂಗು ನಿಲ್ಲಿಸುವ ಮುದ್ದು ಪುಟಾಣಿಗಳಿಂದ ಕೂಡಿರುವ ಗುರುಕುಲದಲ್ಲಿ ಭಯೋತ್ಪಾದನೆ ಕಲಿಸಲಾಗುತ್ತಿದೆ ಎಂಬ ನಿಮ್ಮ ಅರ್ಥ ಶೂನ್ಯ ಮಾತು ಖಂಡನೀಯವಾಗಿದೆ.
ಮುದ್ದು ಮಕ್ಕಳ ನಿಷ್ಕಳಂಕ ಮನಸ್ಸಿಗೆ ನೀತಿ ಪಾಠ ಕಲಿಸುವ ಮದ್ರಸಕ್ಕೂ ಭಯೋತ್ಪಾದನೆಗೂ ಯಾವುದೇ ಸಂಭಂಧವಿಲ್ಲ.
ತನ್ನ ಕಾಮ ಈಡೇರಿಕೆ ಹುಡುಗಿಯೊಬ್ಬಳು ತನ್ನ ಮುಂದೆ ಬೆತ್ತಲಾದಾಗ ದೇಶದ ರಹಸ್ಯಗಳನ್ನು ಬ್ರಿಟಿಷರ ಮುಂದೆ ಬಯಲು ಮಾಡಲು ಹಿಂಜರಿಯದ ಕುಮಾರ ನಾರಾಯಣನ ಅನುಯಾಯಿಗಳಾದ ನಿಮ್ಮಿಂದ ನಮ್ಮ ಮದರಸಗಳು ದೇಶ ಪ್ರೇಮವನ್ನು ಕಲಿಯಬೇಕಾಗಿಲ್ಲ.
ದಿವಂಗತ ಅನಂತಮೂರ್ತಿಯವರು ಇಂದು ಈ ಮಾತು ಕೇಳಿರುತ್ತಿದ್ದರೆ ಅವರೇ ನಿಮಗೆ ಉತ್ತರಿಸುತ್ತಿದರು.
ಒಬ್ಬರು ಅನಂತ ಮೂರ್ತಿಗಳು ನಮ್ಮನ್ನಗಲಿದ್ದಾರೆ.
ಆದರೆ,
ಅವರಂತಹ ಸಾವಿರಾರು ಅನಂತ ಮೂರ್ತಿಗಳು ಇನ್ನೂ ಬಾಕಿಯಾಗಿದ್ದಾರೆ ಎಂಬುವುದನ್ನು ಮರೆಯದಿರಿ.
-ಸಫ್ವಾನ್ ಅಡ್ಯನಡ್ಕ.
0 comments:
Post a Comment