Thursday 19 March 2015

ಅರಣ್ಯ ರೋಧನವಾದ ಮಂಗಳೂರು ಅತ್ಯಾಚಾರ ಪ್ರಕರಣ..!

"ಮುಗ್ಧ ಹಸುಳೆಯನ್ನು ಅತ್ಯಾಚಾರಗೈದು ರೌದ್ರಾವತಾರ ತೋರಿದ ಕಾಮುಕನ ಬಂಧನಕ್ಕಾಗ್ರಹಿಸಿ, ನ್ಯಾಯಕ್ಕಾಗಿ  ಸ್ಟೇಷನ್ ಮೆಟ್ಟಿಲೇರಿದ ಯುವಕರನ್ನೇ, ಒಳ ದಬ್ಬಿ ರಾಟೆಯೆತ್ತಿದ, ಸಂಘ ಪರಿವಾರದ ಅಡಿಯಾಳುಗಳಂತೆ ವರ್ತಿಸುವ ಮಂಗಳೂರು ಪೋಲೀಸ್ ವಿಭಾಗದ ಅಧಿಕಾರಿಗಳ ವಿರುದ್ದ ಯಾವುದೇ ರೀತಿಯ ಕಾನೂನು ಕ್ರಮ ಜರುಗಿಸಲಾಗದ ಮಿನಿಸ್ಟರ್ ಎಂದು ಸುತ್ತಾಡುವ ಊರಿನವನೇ ಆದ ಗಂಡಸುತನವಿಲ್ಲದವನಿಂದ ಏನು ಮಾಡಲು ಸಾಧ್ಯ"..!?

ಹೀಗೆ ಪ್ರಶ್ನಿಸಿದ್ದು ನಾನಲ್ಲ..,

ನಿನ್ನೆ ಪ್ರಾಯಸ್ತರಿಬ್ಬರಲ್ಲಿ ಮಸೀದಿಯ ಅಧ್ಯಕ್ಷರೋರ್ವರು ಮಾತನಾಡುವುದು ನನಗೆ ಕಿವಿಗೆ ಬಿತ್ತು..! ಈ ಹಿಂದಿನಿಂದಲೂ ಕಾಂಗ್ರೆಸ್ ಪರ ಕೆಲಸ ಮಾಡಿ ಸಮಾಜದಲ್ಲಿ ಗೌರವಾನ್ವಿತರೆನಿಸಿಕೊಂಡಿದ್ದ ಅವರ ಮಾತು ಕೇಳಿ ನಾನು ಒಮ್ಮೆಲೇ ಆವಕ್ಕಾಗಿ ಹೋದೆನು..

ಅವರೊಂದಿಗೆ ಪ್ರತಿ ಚುನಾವಣೆಯ ಸಮಯದಲ್ಲೂ ನಾನು ಹಾಗೂ ಸಂಗಡಿಗರು ಅದೆಷ್ಟೋ ಬಾರಿ ಹಗಲಿರುಳೆನ್ನದೆ ಪಕ್ಷಕ್ಕಾಗಿ ಕೆಲಸ ಮಾಡಿದ್ದೇವೆ..

ಹಾಗೇ ಅವರ ಮಾತು ಮುಂದುವರೀತಿತ್ತು..
ನಮ್ಮ ಮಿನಿಸ್ಟರ್ ಮೇಲೆ ಇವರಿಗೆ ಏನೋ ಅಸಮಾಧಾನ ಇದ್ದುದರಿಂದಲೆ ಹೀಗೆಲ್ಲ ಹೇಳುತ್ತಿದ್ದಾರೆ ಅಂದುಕೊಂಡು ನಾನು ಕೂಡಾ ಸುಮ್ಮನಿದ್ದೆ..

ಆದರೆ ಅದಾಗಲೇ ಪ್ರತಿ ವಾಟ್ಸಾಪ್ ಗ್ರೂಪ್ಗಳಲ್ಲಿ ಹಸುಳೆಯ ಅತ್ಯಾಚಾರದ ಆರೋಪ, ಪ್ರತ್ಯಾರೋಪಗಳು ಹರಿದಾಡುತ್ತಿರುವುದನ್ನು ಕಂಡು, ಮಗುವಿನ ಹೆಸರಲ್ಲೂ ರಾಜಕೀಯ ಮಾಡುತ್ತಿದ್ದಾರಲ್ಲ ಎಂದು ನನ್ನ ಮನಸ್ಸಿನೊಳಗೆ ಚುಚ್ಚುತ್ತಿದ್ದವು..

ಆದರೆ ನಾನು ಕಂಡು ಕೊಂಡ ಹಾಗೆ ಒಂದಂತು ನಿಜ, ಎಲ್ಲೋ ಒಂದು ಕಡೆ ನಮ್ಮ ಮಿನಿಸ್ಟರ್ ಅವರ ಸೋಷಿಯಲ್ ಮೀಡಿಯೇಟರ್ಗಳಾಗಿ ವರ್ತಿಸುತ್ತಿರುವ ಜನರೇ ಅವರ ಭವಿಷ್ಯಕ್ಕೆ ಧಕ್ಕೆಯಾಗುತ್ತಿದ್ದಾರೆ.

ಇಂದು ಮಿನಿಸ್ಟರ್ ಅವರ ವಿರುದ್ದ ಕೇಳಿ ಬರುವ ಆರೋಪಗಳು ಬಹುತೇಕ ಅವರಿಂದಾಗಿಯೇ ಆಗಿದೆ. ಕಂಡದ್ದನ್ನು, ಉಂಡದನ್ನೂ, ಕಕ್ಕಿದ್ದನ್ನೂ ನೆಕ್ಕಿದ್ದನ್ನೂ ಅತಿಯಾಗಿ ಫೋಟಾಯಿಸಿ ಅನಾವಶ್ಯಕ ವಾರ್ತೆ ಮಾಡುವ ಚೇಳಗಳಿಂದ ಖಂಡಿತವಾಗಿಯೂ ಮಿನಿಸ್ಟರ್ ಅವರ ರಾಜಕೀಯ ಭವಿಷ್ಯಕ್ಕೆ ತೊಡಕಾಗಲಿದೆ..
ಅದೂ ಅಲ್ಲದೆ ಉಳ್ಳಾಲದಲ್ಲಿ ನಡೆದ ಅತ್ಯಾಚಾರ ಪ್ರಕರಣವನ್ನು ಸುಳ್ಳು ಎಂದು ನಿರೂಪಿಸಲು ಬಹುತೇಕ ಇಂತಹ ಚೇಳುಗಳು ಹರಸಾಹಸ ಪಟ್ಟಿರುವುದು ಎಲ್ಲಾ ವಾಟ್ಸಾಪ್ ಗ್ರೂಪ್ಗಳಲ್ಲಿ ಎದ್ದು ಕಾಣುತ್ತಿತು.. ಹಾಗೆ ನೋಡಿದರೆ ಮಿನಿಸ್ಟರ್ ಅವರನ್ನು ತನ್ನ ಕರ್ತವ್ಯದಿಂದ ನುಣುಚಿಕೊಳ್ಳುವಂತೆ ಮಾಡಲು ಇವರುಗಳೇ ಕಾರಣ. ಮಾಡಬೇಕಾದ ಕಾರ್ಯಗಳನ್ನು ಮಾಡದೆ, ಅನಾವಶ್ಯಕ ಕಾರ್ಯಗಳನ್ನ ಪ್ರಚುರಪಡಿಸುವ ಇವರುಗಳ ತಂತ್ರ ಎಷ್ಟು ಸರಿಯೋ ದೇವನೇ ಬಲ್ಲ.

ಇನ್ನು ಕೆಲ ಪರದೇಷದಲ್ಲಿ ಕೂತ ಮಿನಿಸ್ಟರ್ ಅಭಿಮಾನಿಗಳು, ಮಿನಿಸ್ಟರ್ ಸ್ವಿಚ್ ಆಫ್ ಮಾಡಿರಲಿಲ್ಲ, ಮಗುವಿಗೆ ಡೆಸ್ಕ್ ಬಿತ್ತು, ಅಂತೆ ಕಂತೆಗಳ ಮಹಾ ಮಾಹಾಪೂರವನ್ನೇ ಹರಿದು ಬಿಡುತ್ತಿದ್ದರು..

ಆದರೆ ನಿಜ ಸಂಗತಿಯ ವಿಷ್ಲೇಶಿಸಿದ ನಾನೂ ಕೆಲವು ಸತ್ಯಗಳನ್ನು ಕಂಡುಕೊಂಡೆ.

ಒಬ್ಬ ಅರೋಪಿಯನ್ನು ರಕ್ಷಿಸಲು ಅಧಿಕಾರದಲ್ಲಿದ್ದುಕೊಂಡೇ ಹೆಣಗಾಡಿದ ಪ್ರಯತ್ನದ ಅರ್ಧದಷ್ಟು ಕೂಡ, ಮಗುವಿನ ಪರ ನ್ಯಾಯಕ್ಕೆ ಪ್ರಯತ್ನಿಸಲಸಾಧ್ಯವಾದುದು ಮಿನಿಸ್ಟರ್ಗಳಾಗಿರುವ ನಮ್ಮ ಸಮುದಾಯಿಕರ ಅಧೋಗತಿಯೇ ಸರಿ..

ಇಂತಹ ಪೊಳ್ಳು ಜಾತ್ಯಾತೀತತೆ ಇದ್ದರೇನು ಇಲ್ಲದಿದ್ದರೇನು, ನನ್ನ ಅಭಿಮಾನಿ ಸಹೋದರರೆ ಚಿಂತಿಸಿ..

ಅಧಿಕಾರದಲ್ಲಿದ್ದುಕೊಂಡೇ
ಇನ್ನು, ಶಾಲೆಯ ಹೆಸರು ಹಾಳಾಗದಿರಲು ಅರಂಭದಲ್ಲೇ ಮ್ಯಾನೇಜ್ಮೆಂಟ್ ಮಾಡಿದ ಕಸರತ್ತು, ಆರೋಪಿಯನ್ನು  ರಕ್ಷಿಸಲೆತ್ನಿಸಿದ ಸಂಘ ಪರಿವಾರಿಗಳ ಕೈವಾಡ, ತೊಕ್ಕೋಟು ಹಾಸ್ಪಿಟಲ್ ಕುತಂತ್ರ, ಪೋಲೀಸ್ ಇಲಾಖೆಯ ದೌರ್ಜನ್ಯ, ಸ್ಥಳೀಯ ವಾರ್ತಾ ವಾಹಿನಿಗಳ ಇಬ್ಬಗೆ ನೀತಿ, ಸ್ಥಳೀಯ ಕೆಲ ಕಾಂಗ್ರೆಸಿಗರ ಪೊಳ್ಳು ಜಾತ್ಯಾತೀತತೆಯ ನಾಟಕತ್ವ, ನಾಮ್ಕೆ ವಾಸ್ತೆ ಸೋಷಿಯಲ್ ಮೀಡಿಯೆಟರ್ಗಳ ಸುಳ್ಳು ನಿರೂಪಣಾ ಕಂತೆಗಳ ನಡುವಿನಲ್ಲಿ ಏನೂ ತಿಳಿಯದ ಹಸುಳೆಯ ಮುಗ್ದ ಕೂಗು ತಿಳಿಯದಾದುದು ನಿಜವಾಗಿಯೂ  ಖೇದಕರ. ಖಂಡಿತವಾಗಿಯೂ ಪ್ರಕರಣ ತಿರುಚಲು ಹೆಣಗಾಡಿದವರೆ ಆ ಮಗು ನಿಮ್ಮ ಮನೆಯದ್ದೋ, ನಿಮ್ಮ ಸಹೋದರಿಯೋ, ಹೆಂಡತಿಯೋ, ತಾಯಿಯೋ, ಮಗಳೋ ಆಗಿರುತ್ತಿದ್ದಲ್ಲಿ ಏನಾಗುತಿತ್ತು.?!

ಹಾಗೆ ಇದೊಂದು ಹೆತ್ತವರಿಗೆ ಸಮಾಧಾನ ಪಡಿಸುವ ಪ್ರಕರಣವಾಗಿ ಮುಕ್ತಾಯಗೊಳಿಸದೆ, ಸಮಾಜಕ್ಕೆ ಪಾಠವಾಗಬೇಕಾದಂತಹ ತೀರ್ಪಾಗಿ, ಸಮಾಜದಲ್ಲಿ ಇಂತಹ ನೀಚತನ ಮರುಕಳಿಸದಂತೆ ಪ್ರತಿಯೊಬ್ಬರೂ ಜಾತಿ-ಮತ ಭೇದ ಮರೆತು ಪ್ರಯತ್ನಿಸಬೆಕಾಗಿದೆ. ಅಂತಹ ವಿಕೃತ ಕಾಮುಕರ ಬಗ್ಗೆ ಸಮಾಜದಲ್ಲಿ ಜಾಗ್ರತೆ ಹುಟ್ಟಿಸಿ, ಸಮಾಜದಲ್ಲಿರುವ ಅಂತಹ ತೊಡಕುಗಳನ್ನು ಹೋಗಲಾಡಿಸಲು ಯಾರನ್ನೂ ಕಾಯದೇ, ಸ್ವಯಂ ಹೋಗಲಾಡಿಸಲು ಪಣ ತೊಟ್ಟ ಉತ್ತಮ ಸಮುದಾಯವೊಂದು ಹೊರ ಹೊಮ್ಮಲಿ ಎಂದು ಆಷಿಸುತ್ತಾ...!

ಇತೀ ತಮ್ಮ ಹಿತೈಷಿ,
ಜಾವೇದ್ ಉಳ್ಳಾಲ..

0 comments:

Post a Comment

 
Design by Free WordPress Themes | Bloggerized by - Free Blogger Themes | @javtl