ದಕ್ಷಿಣ ಕನ್ನಡ ಜಿಲ್ಲೆಯ ತೊಕ್ಕೊಟ್ಟಿನಲ್ಲಿ ಇನ್ನೂ ಸಹ ಪ್ರಪಂಚವನ್ನೇ ಸರಿಯಾಗಿ ನೋಡದ ಅಪ್ರಾಪ್ತ ಪ್ರಾಯದ ಬಾಲೆಯೊಂದನ್ನು ವಿಕ್ರತ ಕಾಮಿ ಮಧುಕರ ಎಂಬಾತ ತನ್ನ ಕಾಮ ತೀಟೆಯನ್ನು ತೀರಿಸಲು ಉಪಯೋಗಿಸಿದ್ದನು.ಈ ಪ್ರಕರಣವು ಇಲ್ಲಿನ ಹೇಸಿಗೆಗೆಟ್ಟ ಸರಕಾರ ಮತ್ತು ನೀತಿಗೆಟ್ಟ ಮಾಧ್ಯಮಕ್ಕೆ ದೊಡ್ಡ ಸುದ್ಧಿಯಾಗದಿದ್ದರೂ ಅದೆಷ್ಟೋ ಪೋಷಕರ ನಿದ್ದೆಗೆಡಿಸಿತು.ಇದರ ವಿರುದ್ಧ ಧ್ವನಿ ಎತ್ತದಿದ್ದರೆ ಇಂದು ಆ ಮಗುವಿಗೆ ಆದ ಅನ್ಯಾಯ ನಾಳೆ ನಮ್ಮ ಮನೆಯ ಮಕ್ಕಳಿಗೂ ಆಗಬಹುದು ಎಂದು ಮನಗೊಂಡು ಮಂಗಳೂರಿನ ಸಮಾನ ಮನಸ್ಕರೆಲ್ಲಾ ಜೊತೆಗೂಡಿ "ಜಸ್ಟಿಸ್ ಪಾರ್ ಬೇಬಿ ನಿರ್ಭಯ" ಎಂಬ ನಾಮದೊಂದಿಗೆ ಮೊನ್ನೆ ಶನಿವಾರ ಸಾವಿರಾರು ಜನರ ಭಾಗವಹಿಸುವಿಕೆಯಲ್ಲಿ ಶಾಂತಿಯುತ್ತ ಮೊಂಭತ್ತಿ ಪ್ರತಿಭಟನೆಯನ್ನು ನಡೆಸಿ ರಾಷ್ಟ್ರಾದಾದ್ಯಂತ ಗಮನ ಸೆಳೆದರು.
ಆದರೆ ಕೋಮುವಾಣಿ ಎಂಬ ಬಿರುದನ್ನು ಪಡೆದಿರುವ ಉದಯವಾಣಿ ಪತ್ರಿಕೆಗೆ ಮಾತ್ರ ಈ ವಿಷಯ ಗೊತ್ತೇ ಇಲ್ಲಾ ಅಂತ ಕಾಣುತ್ತೆ.ಮೊನ್ನೆ ನಡೆದ ಮೊಂಬತ್ತಿ ಪ್ರತಿಭಟನೆಯ ಭಾವ ಚಿತ್ರವನ್ನು ಪ್ರಕಟಿಸಿ ಅದನ್ನು ಡಿ.ಕೆ. ರವಿಯವರ ಪ್ರಕರಣಕ್ಕೆ ತಿರುಚಲು ಪ್ರಯತ್ನಿಸುತ್ತಿದೆ,ಇದಕ್ಕೆ ಪ್ರಮುಖ ಕಾರಣ ಅನ್ಯಾಯಕ್ಕೊಳಗಾದ ಆ ಮಗು ಮುಸ್ಲಿಮ್ ಸಮುದಾಯಕ್ಕೊಳಪಟ್ಟಿತ್ತು.
ಇಂಥಹ ಸಂಧರ್ಭದಲ್ಲೂ ಸಹ ತನ್ನ ಕೋಮು ವಿಕ್ರತಿಯನ್ನು ತೋರಿಸುವ ಇಂಥಹ ನೀತಿಗೆಟ್ಟ ಪತ್ರಿಕೆಗಳನ್ನು ನಾಡಿನ ಪ್ರತಿಯೊಬ್ಬರೂ ಸಹ ಬಹಿಷ್ಕರಿಸಬೇಕಾಗಿದೆ.ಅನೇಕ ಬಾರಿ ಸುಳ್ಳು ಸುದ್ಧಿಯನ್ನು ಪ್ರಕಟಿಸಿ ಕರಾವಳಿಯ ಜನರ ಕೋಮು ಬಾವನೆಗಳನ್ನು ಕೆರಳಿಸಿ ಅದೆಷ್ಟೋ ಕೋಮುಗಲಭೆಯನ್ನು ಉಂಟುಮಾಡಿದಂತಹ ಕುಖ್ಯಾತಿಯನ್ನು ಪಡೆದಿದೆ ಈ ಉಗ್ರವಾಣಿ ಪತ್ರಿಕೆ.
ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೇನೆಂದರೆ ಡಿ.ಕೆ.ರವಿಯವರ ಪ್ರಕರಣಕ್ಕೆ ಸಂಬಂದಿಸಿದಂತೆ ಮಂಗಳೂರಿನಲ್ಲಿ ಎಲ್ಲಿಯೂ ಸಹ ಮೊಂಬತ್ತಿ ಪ್ರತಿಭಟನೆ ನಡೆದೆ ಇಲ್ಲ.ಎಲ್ಲಿಯಾದರೂ ದಾರಿ ಹೋಕ ನಾಯಿಗಳು ವಿಸರ್ಜಿಸಿದರೂ ಪೋಟೊ ತೆಗೆದು ಅದನ್ನೇ ಪ್ಲ್ಯಾಶ್ ನ್ಯೂಶ್ ಅಂತ ಪ್ರಕಟಿಸುವ ಕೋಮು ವಾಣಿ ಉದಯವಾಣಿಯಂತಹ ಹಲವು ಕೋಮುವಾದಿ ಪತ್ರಿಕೆಗಳು ಇವತ್ತು ತನ್ನ ಪತ್ರಿಕಾ ಧರ್ಮವನ್ನು ಮರೆತಂತಿದೆ.
ಸಮಾಜದಲ್ಲಿ ನಡೆಯುತ್ತಿರುವ ಅನಾಚಾರಗಳ ಸತ್ಯಾಸತ್ಯತೆಯನ್ನು ಪ್ರಕಟಿಸಲು ಎಡವಿ ಸದಾ ಸುಳ್ಳು ಸುದ್ದಿಯನ್ನು ಪ್ರಕಟಿಸುತ್ತಿರುವ ದುಷ್ಟ ಶಕ್ತಿಗಳೊಂದಿಗೆ ಕೈ ಜೋಡಿಸಿರುವ ಇಂಥಹ ಹೊಲಸು ಪತ್ರಿಕೆಗಳ ವಿರುದ್ಧ ಸಾರ್ವಜನಿಕರು ಆದಷ್ಟು ಬೇಗ ಎಚ್ಚೆತ್ತುಕೊಳ್ಳಲಿ
ಮಹಮ್ಮದ್ ಅನ್ವರ್
Justice#for#Baby#Nirbhaya
Posted by ಪ್ರತಿದಿನ ಪ್ರತಿಕ್ಷಣ
0 comments:
Post a Comment