Wednesday 12 November 2014

ಕ್ಷಮಿಸಿ ಬಿಡು ಸಹೋದರಿ ನಂದಿತಾ ನನ್ನನ್ನು.......

ಕ್ಷಮಿಸಿ ಬಿಡು ಸಹೋದರಿ ನಂದಿತಾ ನನ್ನನ್ನು..........
ನಿನಗೆ ಆಗಿರುವ ಅನ್ಯಾಯದ ವಿರುದ್ಧ ಅಕ್ಷರಗಳ ಮೂಲಕವಾದರೂ ಧ್ವನಿ ಎತ್ತಬೇಕೆಂದು ಪೆನ್ನನ್ನು ಕೈಗೆ ತೆಗೆದುಕೊಂಡಾಗಳೆಲ್ಲಾ ಯಾರ ಬಗ್ಗೆ ಬರೆಯಬೇಕೆಂಬುದರ ಅರಿವೇ ಇಲ್ಲದೆ ಕಂಗಾಲಾಗಿದ್ದೇನೆ
*ನಿನ್ನ ಸಾವನ್ನೇ ಬಂಡವಾಳವಾಗಿಸಿಕೊಂಡು ತಮ್ಮ ರಾಜಕೀಯ ಬೇಳೆಯನ್ನು ಬೇಯಿಸಿಕೊಳ್ಳಲು ಪ್ರಯತ್ನಿಸುತ್ತಿರುವ ದುಷ್ಟ ರಾಜಕಾರಣಿಗಳ ಬಗ್ಗೆ ಬರೆಯಲೇ?
*ಇನ್ನೊಂದು ಧರ್ಮದವರ ವಿರುದ್ಧ ದಾಳಿ ನಡೆಸಲು ಹಾಗು ಸಮಾಜಘಾತಕ ಚಟುವಟಿಕೆಗಳನ್ನು ಮಾಡಲು ನಿನ್ನಂತ ಸಹೋದರಿಯರ ಸಾವನ್ನೇ ಎದುರು ನೋಡುತ್ತಿರುವ ಸ್ವಯಂ ಘೋಷಿತ ಧರ್ಮ ರಕ್ಷಕರ ಬಗ್ಗೆ ಬರೆಯಲೇ?
*ಅನ್ಯಸ್ತ್ರೀಯರನ್ನು ಕಣ್ಣೆತ್ತಿಯೂ ನೋಡಬಾರದು(ಕೆಟ್ಟ ದ್ರಷ್ಟಿಯಿಂದ)ಎಂದು ಇಸ್ಲಾಮ್ ಕಲಿಸಿದ ಪಾಠವನ್ನು ದಿಕ್ಕರಿಸಿ ನಿನ್ನನ್ನು ಪ್ರೇಮದ ಬಲೆಗೆ ಬೀಳಿಸಿ ನಿನ್ನ ಈ ಸಾವಿನಲ್ಲಿ ಪಾಲುಗಾರಿಕೆಯನ್ನು ಪಡೆದಿರುವ ಆ ನಾಮಧಾರಿ ಮುಸ್ಲಿಂ ಯುವಕರ ಬಗ್ಗೆ ಬರೆಯಲೇ?
*ಗರುಡ ಪಕ್ಷಿಯು ಸಣ್ಣ ಹಕ್ಕಿ ಮರಿಯನ್ನು ಎತ್ತಿಕೊಂಡು ಹೇಗೆ ಹೋಗಿ ಕುಕ್ಕಿ ಕುಕ್ಕಿ ತಿನ್ನುತ್ತದೆಯೋ ಅದೇ ರೀತಿ ಇನ್ನೂ ಸಹ ಸರಿಯಾಗಿ ಬೆಲೆಯದ ಆ ನಿನ್ನ ದೇಹವನ್ನು ಕುಕ್ಕಿ ಕುಕ್ಕಿ ತಿಂದ ಕತ್ತಲಲ್ಲಿ ಬೆತ್ತಲಾಗುವ ಆ ಮಾಧ್ಯಮಗಳ ಬಗ್ಗೆ ಬರೆಯಲೇ?
ನಿನ್ನ ಚಿತೆಯ ಅಗ್ನಿಯಲ್ಲಿ ಮೈ ಕಾಯಿಸಿ ಕೊಂಡವರೇ ತುಂಬಿ ಹೋಗಿದ್ದಾರೆ ಸಹೋದರಿ ಈ ಸಮಾಜದಲ್ಲಿ.ಸಮಾಜದಲ್ಲಿ ಪುಕ್ಕಟೆ ಪ್ರಚಾರಗಳನ್ನು ಗಿಟ್ಟಿಸಿಕೊಳ್ಳುವ ಸಲುವಾಗಿ ಸಹೋದರಿ ಸೌಜನ್ಯಾಳ ಪ್ರಕರಣವನ್ನು ಬಳಸಿ ತೋರಿಕೆಗಾಗಿ ಅಲ್ಲಲ್ಲಿ ಕೆಲವು ವೇದಿಕೆಗಳನ್ನು ಕಟ್ಟಿ ನಾಯಕನೆನಿಸಿಕೊಂಡ ಆಸಾಮಿಯೊಬ್ಬನಿಂದ ಪ್ರೇರಿತರಾದ ಕೆಲವರು ನಿನ್ನ ಪ್ರಕರಣದಲ್ಲೂ ಲಾಭ ಪಡೆಯಲು ನೋಡುತ್ತಿದಾರಮ್ಮ. ನೀನು ಅತ್ಯಾಚಾರಕ್ಕೆ ಒಳಪಟ್ಟಿಲ್ಲವೆಂದುಹಲವಾರು ದಾಖಲೆಗಳಿದ್ದರೂ ತಮ್ಮ ಬೇಳೆ ಬೇಯಿಸಿಕೊಳ್ಳಲು ನಿನ್ನ ಮಾನವನ್ನೇ ಹರಾಜಿಗಿಡಲು ಹೊರಟ ಆ ನಿನ್ನ ಧರ್ಮದ ಸ್ವಯಂ ಘೋಷಿತ ಧರ್ಮ ರಕ್ಷಕರ ಬಗ್ಗೆ ಮರುಕ ಪಡುತ್ತಿದ್ದೀಯಾ ಸಹೋದರಿ? ಈ ದೇಶದ ಮುಸ್ಲಿಮರ ಸರ್ವನಾಶಕ್ಕಾಗಿ ಭಾರತ ಮಾತೆಯನ್ನೆ ಬ್ರಿಟೀಷರ ಕೈಗೆ ಕೊಡಲು ಪ್ರಯತ್ನಪಟ್ಟ ತಲೆಹಿಡುಕರಮ್ಮ ಅವರು.ನನಗೆ ಅವರ ಬಗ್ಗೆ ತುಂಬಾ ಮರುಕವಿದೆ ಸಹೋದರಿ
*ಮುಝಪ್ಪರ್ ನಗರದಲ್ಲಿ ನಿನ್ನ ಹಾಗೆಯೇ ಇರುವ ಅದೆಷ್ಟೋ ನನ್ನ ಸಹೋದರಿಯರನ್ನು ಅವರ ಗಂಡಂದಿರ ಎದುರಲ್ಲೆ,ಅವರ ತಾಯಂದಿರ ಎದುರಲ್ಲೇ,ಅವರು ಹೆತ್ತ ಸ್ವಂತ ಮಕ್ಕಳ ಎದುರಲ್ಲೇ ಅವರನ್ನು ವಿವಸ್ತ್ರಗೊಳಿಸಿ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆಗೈದಂತಹ ಆ ಪಾಪಿಗಳ ಬಗ್ಗೆ ನನಗೆ ಮರುಕವಿದೆ ಸಹೋದರಿ
*ಅಸ್ಸಾಮಿನಲ್ಲಿ ನಿನ್ನಂತೆಯೆ ಇರುವ ಅದೆಷ್ಟೋ ಮಂದಿ ನನ್ನ ಸಹೋದರಿಯರನ್ನು ಅಟ್ಟಾಡಿಸಿಕೊಂಡು ಹೋಗಿ ಅವರ ಮುಗಿಲು ಮುಟ್ಟಿದ ಆಕ್ರಂದನವನ್ನೂ ಸಹ ಕೇಳದೆ ಅವರ ಮಾನವನ್ನು ಕುಕ್ಕಿ ಕುಕ್ಕಿ ತಿಂದಂತಹ ಆ ದುರಾತ್ಮರ ಬಗ್ಗೆ ನನಗೆ ಮರುಕವಿದೆ ಸಹೋದರಿ.
*ನಿನ್ನ ಹಾಗೆಯೇ ಗುಜರಾತಿನಲ್ಲಿದ್ದಂತಹ ಅದೆಷ್ಟೋ ನನ್ನ ಸಹೋದರಿಯರನ್ನು ಬೀದಿ ಬೀದಿಗಳಲ್ಲಿ ಅಡ್ಡಡ್ಡಾ ಮಲಗಿಸಿ ಅತ್ಯಾಚಾರವೆಸಗಿ ಕೊಂದಂತಹ ಆ ಪಾಪಿಗಳ ಬಗ್ಗೆ ನನಗೆ ಮರುಕವಿದೆ ಸಹೋದರಿ.
*ಗುಜರಾತಿನ ಆ ನನ್ನ ತುಂಬು ಗರ್ಭಿಣಿ ಸಹೋದರಿಯ ಹೊಟ್ಟೆಯನ್ನು ಸೀಳಿ ಅದರೊಳಗಿದ್ದ ಭ್ರೂಣವನ್ನು ತ್ರಿಶೂಲದಲ್ಲಿ ತೆಗೆದು ಬೆಂಕಿಗೆ ಹಾಕಿ ಕೊಂದ ಆ ರಾಕ್ಷಸರ ಬಗ್ಗೆ ನನಗೆ ಮರುಕವಿದೆ ಸಹೋದರಿ
*ಇಷ್ಟೆಲ್ಲಾ ನಡೆಯುತ್ತಿದ್ದರೂ ತನಗಾವುದರ ಅರಿವಿಲ್ಲದಂತೆ ಮೂಕಪ್ರೇಕ್ಷಕನಾಗಿನೋಡುತ್ತಿದ್ದ ಆ ಗಲಭೆಯ ರೂವಾರಿ ಅಂದಿನ ಗುಜರಾತಿನ ಮುಖ್ಯಮಂತ್ರಿಯ ಬಗ್ಗೆ ನನಗೆ ಮರುಕವಿದೆ ಸಹೋದರಿ
*ಗುಜರಾತ್,ಮುಝಪ್ಪರ್ ನಗರ, ಅಸ್ಸಾಂ ಹಾಗು ದೇಶದ ನಾನಾ ಕಡೆಗಳಲ್ಲಿ ತಮ್ಮ ರಾಜಕೀಯ ಲಾಭಕ್ಕಾಗಿ ಕೋಮುಗಲಬೆ ನಡೆಸಿ ಅದೆಷ್ಟೋ ಹೆಣ್ಣು ಮಕ್ಕಳನ್ನು ವಿಧವೆಯರನ್ನಾಗಿ ಮಾಡಿದ,ಅದೆಷ್ಟೋ ಮಕ್ಕಳನ್ನು ಅನಾಥರನ್ನಾಗಿ ಮಾಡಿದ,ಅದೆಷ್ಟೋ ಕುಟುಂಬಗಳನ್ನು ಬೀದಿ ಪಾಲು ಮಾಡಿದ ಆ ನರಹಂತಕರ ಬಗ್ಗೆ ನನಗೆ ಮರುಕವಿದೆ ಸಹೋದರಿ
ಇವರುಗಳು ಬದಲಾಗುವುದಿಲ್ಲ ಸಹೋದರಿ,ಒಂದು ವೇಳೆ ಇವರುಗಳು ಬದಲಾದರೂ ಇವರ ಮನಸ್ಸಿನಲ್ಲಿ ತುಂಬಿರುವ ಆ ಕೋಮು ಮನೋಭಾವನೆ ಯಾವತ್ತೂ ಬದಲಾಗುವುದಿಲ್ಲ,ಇವರುಗಳಿಂದಾಗಿ ನಮ್ಮ ಭಾರತವು ಬದಲಾಗುವುದಿಲ್ಲ ಏಕೆಂದರೆ ಇವತ್ತು ರಾಜಕಾರಣಿಗಳಿಂದ ಹಿಡಿದು,ಅಧಿಕಾರಿ ವರ್ಗಗಳಿಂದ ಹಿಡಿದು ಸಾಮಾನ್ಯ ಗುಮಾಸ್ತನವರೆಗೂ ಇಂತಹ ಪ್ಯಾಶಿಸ್ಟ್ ಮನೋಸ್ಥಿತಿಯವರೆ ತುಂಬಿ ಹೋಗಿದ್ದಾರೆ ಸಹೋದರಿ..
ಸಹೋದರಿಯರಾದ ಸೌಜನ್ಯ,ರತ್ನ ಕೊಟ್ಟಾರಿ,ಮತಾಂದ ಪತ್ರಕರ್ತ ವಿ.ಟಿ.ಪ್ರಸಾದನಿಂದ ಹತ್ಯೆಯಾದ ವಿಟ್ಲದ ದುಲೈಕಾ ಹಾಗು ಮುಂತಾದ ಸಹೋದರಿಯರಿಗೆ ಆದ ರೀತಿಯಲ್ಲಿ ನಿನಗೂ ನ್ಯಾಯ ಮರೀಚಿಕೆಯಾಗದಿರಲಿ.ನಿನ್ನ ಸಾವಿನ ನಿಜ ಬಣ್ಣ ಬಯಲಾಗಿ ನಿನ್ನ ಆತ್ಮಕ್ಕೆ ಶಾಂತಿ ಸಿಗುವಂತಾಗಲಿ ಎಂದು ಹಾರೈಸುವ

ನಿನ್ನ ಒಬ್ಬ ಮುಸ್ಲಿಮ್ ಸಹೋದರ
MJV

0 comments:

Post a Comment

 
Design by Free WordPress Themes | Bloggerized by - Free Blogger Themes | @javtl