ಕರ್ನಾಟಕದಲ್ಲಿ ತಾನು ಪ್ರತಿನಿಧಿಸುತ್ತಿರುವ ಪಕ್ಷ ಅಧಿಕಾರದಲ್ಲಿರುವಾಗ ತನ್ನದೇ ಪಕ್ಷದ ನಾಯಕರಿಂದ ಪದ್ಮಪ್ರಿಯ ಕೊಲೆಯಾದಾಗಲೂ,ಹಾಲಪ್ಪನ ಪ್ರಕರಣ ನಡೆದಾಗಲೂ,ರೇಣುಕಾಚಾರ್ಯನ ಕಿಸ್ಸಿಂಗ್ ಪ್ರಕರಣ ನಡೆದಾಗಲೂ,ಸದನದ ಪಾವಿತ್ರ್ಯತೆ ಯನ್ನು ನಾಶಪಡಿಸಿದಾಗಲೂ ಮಾತೆತ್ತದ ಈಶ್ವರಪ್ಪ.....
ಧರ್ಮಸ್ಥಳದ ಸೌಜನ್ಯ ಕೊಲೆಯಾದಾಗಲೂ,ಕುಂದಾಪುರದ ರತ್ನಳ ಸಾವು ಸಂಭವಿಸಿದಾಗಲೂ,ಸೂರಿಕುಮೇರಿನ ಸೌಮ್ಯ ಕಾಮುಕನ ಕಾಮದಾಹಕ್ಕೆ ಬಲಿಯಾದಾಗಲೂ,ಮಂಗಳೂರಿನ ಅಕ್ಷತಾ ಳ ಸಾವು ಸಂಭವಿಸಿದಾಗಲೂ,ಸೌಜನ್ಯಕ್ಕಾದರೂ ಪ್ರತಿಭಟಿಸುವ ಸಲುವಾಗಿ ಬೀದಿಗಿಳಿಯಲೇ ಇಲ್ಲ.
ಯಾಕಂದರೆ ಅವರೆಲ್ಲರ ಸಾವು ತನ್ನ ಧರ್ಮದ ಅಧರ್ಮೀಯರಿಂದಲೇ ಆಗಿತ್ತು..!!
ಅದು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ವೇದಿಕೆಯನ್ನು ಸೃಷ್ಟಿ ಮಾಡುತ್ತಿರಲಿಲ್ಲ.
ತನ್ನ ಆಚಾರವಿಲ್ಲದ ನಾಲಗೆಯ ಮೂಲಕ ಸದಾ ವಿವಾದಾಸ್ಪದ ಹೇಳಿಕೆಗಳನ್ನು ನೀಡುವ ಈಶ್ವರಪ್ಪ ರಾಜ್ಯದ ಮುಖ್ಯಮಂತ್ರಿ ಮತ್ತು ಗೃಹ ಸಚಿವರ ಮನೆಯವರನ್ನು ಅತ್ಯಾಚಾರ ಮಾಡಬೇಕಿತ್ತು ಅನ್ನುವ ಖಂಡನಾರ್ಹವಾದ ಹೇಳಿಕೆಗಳನ್ನು ನೀಡಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
ಉರಿಯುವ ಬೆಂಕಿಗೆ ಸೀಮೆ ಎಣ್ಣೆ ಸುರಿದು ಸಮಾಜದಲ್ಲಿ ಅರಾಜಕತೆ ಸೃಷ್ಟಿ ಮಾಡುವ ಸಮಯಸಾಧಕ ರಾಜಕಾರಣಿಗಳನ್ನು ಮಟ್ಟ ಹಾಕಿ,ನಂದಿತಾಳ ಸಾವಿಗೆ ಕಾರಣರಾದ ಅಪರಾಧಿಗಳು ಶಿಕ್ಷಿಸುವಂತಾಗಲಿ ಎಂದು ಆಶಿಸೋಣ...
ಸ್ನೇಹಜೀವಿ ಅಡ್ಕ
0 comments:
Post a Comment