ಅವರನ್ನ ಅರೆಸ್ಟ್ ಮಾಡ್ರಿ... ಅರೆಸ್ಟ್ ಮಾಡ್ರಿ...
ಹೀಗಾಂತ ಹೇಳಿದ್ದು ಬೇರೆ ಯಾರು ಅಲ್ಲ. ಕುಮಾರೀ/ಶ್ರಿಮತಿ ಶೋಭಾ ಕರಂದ್ಲಾಜೆಯವರು. ಕುಮಾರೀ ನಂದಿತಾ ಸಾವಿನ ಪ್ರಕರಣದ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಕಾಂಗ್ರೆಸ್ ಸರಕಾರದ ವಿರುದ್ಧ ವಾಗ್ದಾನವನ್ನು ಮಾಡಿದ್ದಾರೆ..!!
ಶ್ರೀಮತಿ/ಕುಮಾರೀ ಶೋಭಾವರೆ ನಿಮಗೆ ನಾಚಿಕೆಯಾಗಬೇಕು ನಂದಿತಾ ಸಾವಿನ ವಿಚಾರದಲ್ಲಿ ರಾಜಕೀಯ ಮಾಡುವುದಕ್ಕೆ. ಯಾಕೆಂದರೆ ನಾವು ಮರೆತಿಲ್ಲ ಕಳೆದುಹೋದ ಆ ಒಂದು ಘಟನೆಯನ್ನು. ಯಾಡಿಯುರಪ್ಪನವರ ಮಡದಿಯ ಸಾವಿನ ಹಿಂದೆ ನಿಮ್ಮ ನೇರ ಕೈವಾಡ ಇದೆ ಎಂದು ಈಗಾಗಲೇ ಕರ್ನಾಟಕದ ಜನತೆಗೆ ತಿಳಿದಿದೆ. ಇಂತಹ ತರ್ಡ್ ಕ್ಲಾಸ್ ಕೆಲಸವನ್ನು ಮಾಡಿದ ನಿಮಗೆ ಕುಮಾರೀ ನಂದಿತಾ ಸಾವಿನ ಬಗ್ಗೆ ಮಾತುಗಳನ್ನಾಡುವುದಕ್ಕೆ ಎನು ಅರ್ಹತೆಯಿದೆ ಹೇಳಿ??
ನಂದಿತಾ ಬಿಜೆಪಿ ಪಕ್ಷದವರಿಗೆ ತಂಗಿಯ ಸಮಾನ ಸರಿ ಅನ್ನೊದಾದರೆ, ನರ್ಸ್ ಜಯಲಕ್ಷ್ಮಿ ಯಾರು?
ಹಾಲಪ್ಪ ತನ್ನ ಸ್ನೇಹಿತನ ಹೆಂಡತಿಯ ಮೇಲೆ ಅತ್ಯಾಚಾರವನ್ನು ಮಾಡಲು ಯತ್ನಿಸಿದ್ದಾನೆ ಹಾಗಾದರೆ ಆ ಮಹಿಳೆ ನಿಮಗೆ ಸಹೋದರಿ ಸಮಾನವಲ್ಲವೆ?? ಸದಾನಂದ ಗೌಡನ ಮಗ ಸಿನಿಮಾ ನಟಿಯನ್ನು ಮದುವೆಯಾಗುತ್ತೇನೆ ಎಂದು ನಂಬಿಸಿ ಆಕೆಯನ್ನು ತನ್ನ ಕಾಮಕ್ಕೆ ಬಳಸುತ್ತಾನೆ ಆಗ ಮಹಿಳೆಯ ಮೇಲೆ ಕಣಿಕರ ಬರಲಿಲ್ಲವೆ? ಉಡುಪಿಯಲ್ಲಿ ರಘುಪತಿ ಭಟ್ ತನ್ನ ಹೆಂಡತಿಯನ್ನು ಕೊಲೆ ಮಾಡುತ್ತಾನೆ ಆಗ ನಿಮಗೆ ಸಂಬಂಧಗಳ ಬಗ್ಗೆ ಅರಿವು ಇರಲಿಲ್ಲವೆ??
ಅತ್ಯಾಚಾರಕ್ಕೆ ಪ್ರಚೋದನೆಯನ್ನು ನೀಡುವವರು ನಿಮ್ಮ ಅಧಿಕಾರಿಗಳೆ ಅನ್ನುವ ಮಾತು ಇಡೀ ಕರ್ನಾಟಕ ರಾಜ್ಯದಲ್ಲಿ ಜನಪ್ರಿಯತೆಯನ್ನು ಪಡೆದಿದೆ. ಸದನದಲ್ಲಿ ಬ್ಲೂ ಫಿಲಂ ನೋಡಿದವರು ನಿಮ್ಮದೆ ಅಧಿಕಾರಿಗಳು, ಭ್ರಷ್ಟಾಚಾರದ ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಂಬಿ ಎನಿಸಿದ್ದು ನಿಮ್ಮ ಅಧಿಕಾರಿಗಳು, ತಾನು ಚಲಿಸುವ ವಾಹನವನ್ನು ಒವರ್ ಟೇಕ್ ಮಾಡಿದ ಅನ್ನುವ ನೆಪ ಇಟ್ಟುಕೊಂಡು ಹಿಂಬದಿಯಲ್ಲಿ ಬರುತ್ತಿದ್ದ ಕಾರು ಚಾಲಕನನ್ನು ತಡೆದು ಹಲ್ಲೆ ನಡೆಸಿದ ಕೀರ್ತಿಯು ತಮ್ಮ ಅಧಿಕಾರಿಗಳಿಗೆ ಸಲ್ಲುತ್ತದೆ. ಇಷ್ಟೆಲ್ಲ ಕುಕ್ರತ್ಯಗಳನ್ನು ಮಾಡಿರುವ ಬಿ.ಜೆ.ಪಿ ಪಕ್ಷದ ಅಧಿಕಾರಿಗಳಿಗೆ ಅಥವಾ ಶೋಭಾಳಿಗೆ ಅತ್ಯಾಚಾರಗಳ ಬಗ್ಗೆ ಮಾತನಾಡುವ ನೈತಿಕ ಹಕ್ಕು ಇದೆಯ ಎಂದು ಜನಗಳೆ ತೀರ್ಮಾನಿಸಬೇಕಾಗಿದೆ..!!
.
.
ಸಲಾಂ ಸಮ್ಮಿ
0 comments:
Post a Comment