Wednesday 29 July 2015

ನಾನು ಕಂಡ ಕಲಾಂ-ಜಿ ಹಾಗೂ ಸಂಘ ಪರಿವಾರದ ರಾಜಕೀಯಕ್ಕೆ  ಎರೆಯಾದ ವ್ಯಕ್ತಿತ್ವ !

ನಾನು ಕಂಡ ಕಲಾಂ-ಜಿ ಹಾಗೂ ಸಂಘ ಪರಿವಾರದ ರಾಜಕೀಯಕ್ಕೆ  ಎರೆಯಾದ ವ್ಯಕ್ತಿತ್ವ !

"ಕುಲ್ಲು ನಫ್ಸಿನ್ ಝಾಇಕತುಲ್ ಮೌತ್" ( ಪ್ರತಿಯೊಂದು ಶರೀರವೂ ಮರಣದ ರುಚಿ ಯನ್ನು ಆಸ್ವಾದಿಸಲಿದೆ) ಅನ್ನುವ ಕುರ್-ಆನ್ ವಾಕ್ಯವನ್ನು ನೆನಪಿಸುತ್ತಾ ನಮ್ಮ ದೇಶದ ಮಿಸೈಲ್ ಮೇನ್ ಎಂದೇ ಪ್ರಖ್ಯಾತ ಅಬ್ದುಲ್ ಕಲಾಂ ಅವರು ಷಿಲ್ಲಾಂಗ್ ಐ.ಐ.ಎಮ್ ನಲ್ಲಿ ಭಾಷಣ ಮಾಡುತ್ತಿದ್ದಾಗ ಹ್ರದಯಾಘಾತದಿಂದ ಮರಣಹೊಂದಿದರೆಂದು ಕೇಳಿದಾಗಲೇ ತುಂಬಾ ನೋವಾಯಿತು ನನಗೆ. ಈ ಹಿಂದಿನಿಂದಲೂ ಬಹುತೇಕ ಭಾರತೀಯರಂತೆ ನಾನೂ ಒಬ್ಬ ಅವರ ಸರಳ ನಡೆ ನುಡಿಗಳಿಂದ ಪ್ರಭಾವಿತವಾಗಿ ಅವರ ಅಭಿಮಾನಿಯಾಗಿದ್ದರಂದ ಮೊದಲಿನಿಂದಲೂ ಅವರ ಬಗ್ಗೆ ಬರುತ್ತಿದ ಪ್ರತಿಯೊಂದು  ನ್ಯೂಸ್ ಗಳನ್ನು ಬಹಳ ಕುತೂಹಲದಿಂದ ಅವಲೋಕಿಸುತ್ತಿದ್ದೆ.

ಹೌದು ಹಾಗೆ ನೋಡಿದರೆ ಅವರ ಬಗ್ಗೆ ಒಂದಕ್ಷರ ಇಲ್ಲ ಸಲ್ಲದ ಆರೋಪವಾಗಲಿ, ರಾಜಕೀಯವಾಗಿ ಯಾವುದೇ ಶತ್ರುತ್ವವಾಗಲೀ ಇರುವವರಿಲ್ಲ. ಆದರೂ ಇಂದು ನನಗೆ ಲಭಿಸಿದ ಸಂಘ ಪರಿವಾರಿಗಳ ವಾಟ್ಸಪ್ ಮೆಸೇಜ್ ಒಂದು ನನ್ನನ್ನು ಚಿಂತಾಕ್ರಾಂತನನ್ನಾಗಿ ಮಾಡಿತು.
ಅದೇನೆಂದರೆ
"दिल में गीता और जुबां पे कुरान दिखा देना!
कभी मिले तो कलाम साहब जैसा मुसलमान दिखा देना!!
दरगाह पे मत्था टेकता हिन्दू बहुत देखा है!
कभी कृष्ण की भक्ति में डूबा खान दिखा देना!!"
ಅಂದರೆ "ಮನದಲ್ಲಿ ಭಗವದ್ಗೀತೆ ಬಾಯಲ್ಲಿ ಕುರಾನ್ ತೋರಿಸಿ..!
ಎಂದಾದರೂ ಸಿಕ್ಕರೆ ಕಲಾಂ ಸಾಹಬ್ ನಂತಹ ಮುಸ್ಲಿಮನನ್ನು ತೋರಿಸಿ...!
ದರ್ಗಾದಲ್ಲಿ ಶಿರಭಾಗುವ ಹಿಂದು ಬಹಳ ನೋಡಿದ್ದೇವೆ..!
ಎಂದಾದರೂ ಕ್ರಷ್ಣನ ಭಕ್ತಿಯಲ್ಲಿ ಮುಳುಗಿದ ಖಾನ್ ನನ್ನು  ತೋರಿಸಿ..!"

ಹೌದು ಹಾಗೆ ನೋಡಿದರೆ  ಸಂಘಪರಿವಾರಕ್ಕೆ  ಕಲಾಂ ಅನ್ನುವ ಅದ್ಭುತ ವಿಜ್ಞಾನಿಯ ಸಾಧನೆಯು ಮಿಗಿಲಾಗಿರಲಿಲ್ಲ. ಆ ಅದ್ಭುತ ವ್ಯಕ್ತಿತ್ವದ ಓರ್ವ ಶಿಕ್ಷಕ..,ಓರ್ವ ಲೇಖಕ, ಯುವ ತಲೆಮಾರಿನ ಪ್ರೋತ್ಸಾಹಕ ಅನ್ನುವ ಯಾವುದೇ ವಿಚಾರಗಳು ಅವರ ಹೆಮ್ಮೆಗೆ ಕಾರಣವಾಗಿರಲಿಲ್ಲ...!
ಬದಲಾಗಿ ಅಬ್ದುಲ್ ಕಲಾಂ ಅನ್ನುವ ಪ್ರತಿಭೆಯ ವ್ಯಕ್ತಿತ್ವವು ಭಗ್ವದ್ಗೀತೆ ಓದುತ್ತಿದ್ದರು, ಅನುದಿನ ಕರ್ನಾಟಿಕ್ ಸಂಗೀತ ಕೇಳುತ್ತಿದ್ದರು ಹಾಗು ಹಿಂದೂ ಸಂಸ್ಕೃತಿಯನ್ನು   ಮೆಚ್ಚಿದ್ದರು ಹಾಗು ದೇವಾಲಯಗಳನ್ನು, ಸ್ವಾಮಿಗಳನ್ನು, 
ಭೇಟಿ ನೀಡಿ ಆಶೀರ್ವಾದವನ್ನು  ಪಡೆಯುತ್ತಿದ್ದರು ಹಾಗೂ ನಾಗ್ಪುರದ ಆರ್.ಎಸ್.ಎಸ್ ಶಾಖೆಗೆ ಭೇಟಿ ನೀಡಿ ನಮಿಸಿದ್ದರು, ಅನ್ನುವುದೇ ಸಂಘಪರಿವಾರಿಗಳ ಹೆಮ್ಮೆಯ ವಿಚಾರವಾಗಿತ್ತು.ಅದೇ ಕಾರಣದಿಂದಾಗಿತ್ತು ಸಂಘಪರಿವಾರ ಬೆಂಬಲಿತ ಬಿ.ಜೆ.ಪಿಯು 2002ನೇ ಇಸವಿಯಲ್ಲಿ ಅವರನ್ನು ರಾಷ್ಟ್ರ ಪತಿಯನ್ನಾಗಿ ನಾಮಕರಣ ಮಾಡಿತು.
ಯಾಕೆಂದರೆ ಒಬ್ಬ ಅಚ್ಚ ಮುಸ್ಲಿಮನಾಗಿ ಇಸ್ಲಾಮಿನ ತತ್ವಾದರ್ಷಗಳನ್ನು ಅಳವಡಿಸಿ ಜೀವನ ನಡೆಸಿದ ಯಾವೊಂದು ಭಾರತೀಯ ಪ್ರತಿಭೆಗೂ ಸಂಘಪರಿವಾರಿಗಳಾಗಲಿ ಇಲ್ಲಿನ ಸರಕಾರಿ ವ್ಯವಸ್ಥೆಗಳಾಗಲಿ ಯಾವುದೇ ಸ್ಥಾನಮಾನವಾಗಲಿ ಉನ್ನತ ಪದವಿಗಳನ್ನಾಗಲೀ ಇಲ್ಲಿಯವರೆಗೆ ನೀಡಿದ್ದಿಲ್ಲ. ಮುಸ್ಲಿಮರಿಗೆ ದೇಷಪ್ರೇಮವಿಲ್ಲ ಎಂದು ಮುಸ್ಲಿಮರನ್ನು ಮಿಲಿಟರಿ ಸೇವೆ, ಸರಕಾರಿ ಉದ್ಯೊಗ, ಹಾಗೂ ಶೈಕ್ಷಣಿಕವಾಗಿಯೂ, ಪ್ರಜಾಪ್ರಭುತ್ವ ವ್ಯವಸ್ಥೆಯಿಂದಲೇ ಕಿತ್ತೊಗೆಯುವ ಷಡ್ಯಂತರವಾಗಿದೆ ಸ್ವಾತಂತ್ರ್ಯಾ  ಪೂರ್ವದಿಂದಲೂ ಸಂಘಪರಿವಾರಿಗಳು ನಡೆಸುತ್ತಿರುವುದು. ಇನ್ನು ಇಂದಿನ ಭಾರತೀಯ ಮುಸಲ್ಮಾನರ ಪರಿಸ್ಥಿತಿಯಂತೂ ನೋಡಿದರೆ ಮುಸ್ಲಿಮರು ಜೈಲುಗಳಲ್ಲಿ ಕೊಳೆಯಬೆಕಾದವರಾಗಿದ್ದಾರೆ. ಮರಣದಂಡನೆಯೆಂಬುದು ಅಮಾಯಕ ಮುಸ್ಲಿಮರಿಗೆ ನೀಡಿದ ಮೀಸಲಾತಿಯಂತಿದೆ. ಪ್ರಜಾಪ್ರಭುತ್ವದ ತಲೆಯಮೇಲೆ ಭಕ ಪಕ್ಷಿಯಂತೆ ಮೆರೆದಾಡುವ ಸಂಘಪರಿವಾರವು,  ಅಬ್ದುಲ್ ಕಲಾಂ ಅನ್ನುವ ಮನುಷ್ಯತ್ವವಾದಿಯ ಕೈಗಳನ್ನು ಎಲ್ಲಯೋ ಕಟ್ಟಿ ಹಾಕಿದಂತೆ ಭಾಸವಾಗುತ್ತದೆ. ಏಕೆಂದರೆ ತಮ್ಮ ಆಡಳಿತಾವಧಿಯಲ್ಲಿ ಬಂದ 21 ಮರಣ ದಂಡನೆ ವಿಧಿಸಲ್ಪಟ್ಟ ದಯಾ ಅರ್ಜಿಯಲ್ಲಿ,  20 ನ್ನು ಕೂಡ ಮುಟ್ಟಲು ಅವರಿಂದ ಏನೋ ತಡೆಯುತ್ತಿದ್ದವು.

ಈ ದೇಶ ಕಂಡ ಅಬ್ದುಲ್ ಕಲಾಂ ಅನ್ನುವ ಅದ್ಭುತ ವ್ಯಕ್ತಿತ್ವವು ಸಂಘಪರಿವಾರಿಗಳ ಕೈಯಲ್ಲಿ ಗೊತ್ತಿದ್ದೋ ಗೊತ್ತಿಲ್ಲದೆಯೋ ಎರೆಯಾಗಿ, ಹಿಂದುತ್ವದ ಪ್ರಚಾರಕನಾಗಿ ಸಮಾಜವು,ಮಾಧ್ಯಮಗಳೂ ಚಿತ್ರಿಸಿದ್ದು  ಖೇದಕರ ವಿಷಯವಾಗಿದೆ.

ಇಲ್ಲಿ ಕೇಳಲೇಬೆಕಾದ ಸಂಗತಿಯಂದರೆ , ಅವರೊಬ್ಬ ಅಪ್ಪಟ ಮುಸ್ಲಿಮನಾಗಿ ಇಸ್ಲಾಮಿ ತತ್ವಾದರ್ಷದೊಂದಿಗೆ ಜೀವಿಸುತ್ತಿದ್ದರೆ ಸಂಘ ಪರಿವಾರ ಹಾಗೂ ಬಿ.ಜೆ.ಪಿ ಅವರಿಗೆ ರಾಷ್ಟ್ರಪತಿ ಸ್ಥಾನವನ್ನು  ಹಾಗೂ ಈಗ ಕಾಣುವಷ್ಟು ಸ್ವೀಕರಣೆ ಲಭಿಸುತಿತ್ತೇ? 
ಅಥವಾ  ಅಬ್ದಲ್ ಕಲಾಂ ಅವರ ಸ್ಥಾನದಲ್ಲಿ ಒಬ್ಬ ಜಾತ್ಯಾತೀತ ಹಿಂದು ( ಹಿಂದುತ್ವ ವಿರೋಧಿ)  ಆಗಿದ್ದಿದ್ದರೆ ಆತನಿಗೆ ಸಂಘಪರಿವಾರಗಳು ಈಗ ಕೊಡುವ ಸ್ವೀಕರಣೆಗಳು ಕೊಡುತ್ತಿದ್ದರೇ..?!

ಯಾಕೂಬ್ ಮೆಮನ್ ನಂತಹ ದೇಶದ ಪ್ರತಿಷ್ಟ ಸಿ.ಎ ಪದವಿಧರ ಒಬ್ಬ ಅಬ್ದುಲ್ ಕಲಾಂ ನಂತಹ ಹಿಂದು ಸಂಪ್ರಧಾಯಿಯಾಗದ್ಸಿದ್ದರೆ,  ನಮ್ಮ ಸಂಘಪರಿವಾರಿ ನಾಯಕರು ಸರಕಾರಗಳು, ನ್ಯಾಯ ವ್ಯವಸ್ಥೆಯು ಅವರನ್ನು ಮಾಡದ ತಪ್ಪಿಗೆ ಮರಣ ದಂಡನೆ ವಿಧಿಸುತಿತ್ತೇ?

ಸಂಘ ಪರಿವಾರ ಬೆಂಬಲಿತ ಸಾದ್ವಿ ಪ್ರಜ್ನಾ ಸಿಂಗ್ ಮಕ್ಕಾ ಮಸ್ಜಿದ್, ಅಜ್ಮೀರ್ ಮಸ್ಜಿದ್,ಮಾಲೆಂಗಾವ್ ಬ್ಲಾಸ್ಟ್, ಸಂಜೊತಾ ಎಕ್ಸ್ ಪ್ರೆಸ್  ಬ್ಲಾಸ್ಟ್ ಗಳ ಆರೋಪ ಸಾಭಿತಾದರೂ  , ಮರಣ ದಂಡನೆ ವಿಧಿಸಲಾಗಿದೆಯೇ?

ಹಿಂದು ಸಂಪ್ರದಾಯಿ ಸಲ್ಮಾನ್ ಖಾನ್ ನೊಂದಿಗೆ "ಭಜರಂಗಿ ಭಾಯಿ ಜಾನ್" ಅಂತ ಭೀಗುತ್ತಿದ್ದ ಇಲ್ಲಿನ ಷಂಡ ಪರಿವಾರಿಗಳು, ಸಲ್ಮಾನ್ ನ್ಯಾಯಕ್ಕಾಗಿ ಯಾಕೂಬ್ ಮೆಮನ್ ಅವರ ಪರ ಮಾತನಾಡಿದಾಗ
ಸಲ್ಮಾನ್ ಅನ್ನು ಪಾಕಿಸ್ತಾನಕ್ಕೆ ಕಳಿಸಿ ಅಂತಲೂ, ಸಲ್ಮಾನ್ಗೆ ನೀಡಿರುವ ಬೇಲ್ ಹಿಂಪಡೆಯಿರಿ ಅಂತಲೂ ತಮ್ಮ ಸಂಘಪರಿವಾರಿ ಬೆಂಬಲಿತ ನ್ಯಾಯವಾದಿಗಳಿಗೆ ತಾಕೀತು ಮಾಡುವಾಗ, ನಮ್ಮ ನ್ಯಾಯ ವ್ಯವಸ್ಥೆಯೂ ಎಷ್ಟೊಂದು ಹದಗೆಟ್ಟಿದೆ ಅನ್ನುವುದು ಸುಸ್ಪಷ್ಟವಲ್ಲವೇ?

ಪ್ರಜಾಪ್ರಭುತ್ವದ ಅಡಿಪಾಯಗಳಾದ ಶಾಸಕಾಂಗ,ಕಾರ್ಯಾಂಗ ಜನಸಾಮಾನ್ಯರ ನಂಬಿಕೆಗಳು ಹದಗೆಟ್ಟರೂ, ನ್ಯಾಯಾಂಗದಲ್ಲಿರುವ ಜನರ ಭರವಸೆಗಳನ್ನು ಉಳಿಸಿಕೊಳ್ಳಲು ಆಸಾಧ್ಯವಾಗುತ್ತಿದೆಯೇ?

"ಚಿಂತಿಸುವವರಿಗೆ  ದ್ರ್ ಷ್ಟಾಂತವಿದೆ" ಎಂಬ ಕುರ್-ಆನ್ ವಚನವನ್ನು ನೆನಪಿಸುತ್ತಾ,
ಕೊನೆಯದಾಗಿ ಕಲಾಂ ರವರ ನುಡಿಮುತ್ತೊಂದು
"In a democracy, the well-being, individuality and happiness of every citizen is important for the overall prosperity, peace and happiness of the nation" -A. P. J. Abdul Kalam

-ಚಿಂಥನ ಮಂಥನ
#ಹೊಂಗಿರಣ


0 comments:

Post a Comment

 
Design by Free WordPress Themes | Bloggerized by - Free Blogger Themes | @javtl