Tuesday 16 September 2014

ಭಯೋತ್ಪಾದಕ ಮಾಧ್ಯಮ ಜಗತ್ತು..!


ಮಾಧ್ಯಮಗಳ ಕಪೋಲಕಲ್ಪಿತ ಚಿತ್ರೀಕರಣಕ್ಕೆ ಮುಸ್ಲಿಂ ಯುವಕರು ಬಲಿಯಾಗುತ್ತಿರುವುದು ಸಮುದಾಯ ಎಚ್ಚರಗೊಳ್ಳಲು ಸಮಯವಾಗಿದೆ ಎಂಬುವುದರ ಸೂಚಕವಾಗಿದೆ.


ಕೆಲವು ದಿನಗಳ ಹಿಂದೆ ಹೊಟ್ಟೆಪಾಡಿಗಾಗಿ ವಿದೇಶಕ್ಕೆ ತೆರಳಲು ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಖಾದರ್ ಎಂಬ ಅಮಾಯಕನಿಗೆ "ಭಯೋತ್ಪಾದಕ" ಎಂಬ ಪಟ್ಟ ಕಟ್ಟಲು ಮಾಧ್ಯಮಗಳು ಪಟ್ಟ ಪ್ರಯತ್ನ ಚಿಕ್ಕದಲ್ಲ.

ಸಂಘ ಪರಿವಾರದ ಅಜೆಂಡಾಗಳು ಇಂದು ಮಾಧ್ಯಮಗಳ ಮೂಲಕ ಕಾರ್ಯರೂಪಕ್ಕೆ ತರಲು ಶ್ರಮಿಸಲಾಗುತ್ತಿದೆ ಎಂಬುವುದಾಗಿದೆ ಸತ್ಯ..
ಮಾಧ್ಯಮಗಳ ಹಣೆಪಟ್ಟಿ ಕಟ್ಟಿರುವ ಸಂಘ ಪರಿವಾರದ ನ್ಯೆಜ ಮುಖಗಳನ್ನು ಇನ್ನಾದರೂ ಸಮೂಹ ಬಹಿಷ್ಕರಿಸಬೇಕಾಗಿದೆ.ಇದು ಕಾಲದ ಅನಿವಾರ್ಯತೆಯೂ ಹೌದು.

ಮಾಧ್ಯಮಗಳ ಪೊಳ್ಳು ವಾರ್ತೆ ಪ್ರಕಟವಾಗುವುದನ್ನೇ ಕಾದು ಕುಳಿತಂತಿದ್ದ ಕೆಲವೊಂದು ದೇಶ ದ್ರೋಹಿಗಳು  ಸಾಮಾಜಿಕ ತಾಣಗಳಲ್ಲಿ ಮುಸ್ಲಿಂ ಭಯೋತ್ಪಾದನೆ ಎಂಬ ಶೀರ್ಷಿಕೆ ಬಳಸಿ ಉದ್ದಕ್ಕೆ ಬರೆಯಲೆತ್ನಿಸಿದ್ದರು ಎಂಬುವುದು ಅವರ  ಮಾನವೀಯತೆಯ ವಿಶಾಲತೆಯನ್ನು ಎತ್ತಿ  ತೋರಿಸುತ್ತದೆ,ಅಲ್ಲವೇ???
ಇಂತಹ ಸೌಹಾರ್ದ ವಿರೋಧಿ ಬರಹಗಾರರಲ್ಲಿ ಒಬ್ಬ ಭಾರತೀಯ ಮುಸ್ಲಿಮನಾಗಿ ನಾನು ಒಂದು ವಿಷಯ ಹೇಳಲೇ???

ಅಜ್ಮಲ್ ಕಸಬ್ ಎಂಬ ಉಗ್ರನನ್ನು ಗಲ್ಲಿಗೇರಿಸಿದಾಗ ಧರ್ಮದ ಬಣ್ಣ ನೀಡಿ,ನಮ್ಮ ಸಹೋದರನನ್ನು ಅನ್ಯಾಯವಾಗಿ ಗಲ್ಲಿಗೇರಿಸಲಾಯಿತು ಎಂದು ಇಲ್ಲಿನ  ಮುಸ್ಲಿಮರಾದ ನಾವು  ಪ್ರತಿಭಟಿಸಲಿಲ್ಲ.
ಬದಲಾಗಿ,
ಒಬ್ಬ ಭಯೋತ್ಪಾದಕನ ನಿರ್ನಾಮವಾಯಿತು ಎಂದು ಎದೆ ತಟ್ಟಿ ಅಭಿಮಾನಿಸಿದ ಭಾರತೀಯರು ನಾವು.

ಹಿಂದೂ ಹೆಸರಿನ ಕೆಲವೊಬ್ಬರು "ಭಯೋತ್ಪಾದನೆ" ಎಂಬ ಪಾಠದ ಶಿಕ್ಷಕರಾಗಿದ್ದಾರೆ ಎಂಬುವುದು ಈ ಹಿಂದಿನ ಕೆಲವೊಂದು ಬಾಂಬ್ ಸ್ಫ್ಹೋಟಗಳು ಸಾಬೀತು ಪಡಿಸಿದೆ.

ರಾಜ್ಯ ದ್ರೋಹದ ಪಟ್ಟ ನಮಗೆ ಕಟ್ಟಬೇಡಿ.
ಯಾಕೆಂದರೆ,ರಾಜ್ಯ ಸ್ನೇಹವು ಧರ್ಮದ ಭಾಗವಾಗಿದೆ ಎಂದು ನಮ್ಮನ್ನು ಕಲಿಸಿದ ಇಸ್ಲಾಂ, ರಾಜ್ಯ ದ್ರೋಹವನ್ನು ನಮಗೆ ಕಲಿಸಿಲ್ಲ.

ಮುಗ್ಧ ಅಮಾಯಕರಿಗೆ "ಭಯೋತ್ಪಾದಕ"ಎಂಬ ಹಣೆಪಟ್ಟಿ ಕಟ್ಟಲು  ಸಂಘ ಪರಿವಾರದ ತಾಳಕ್ಕನುಸಾರವಾಗಿ ಕುಣಿಯುತ್ತಿರುವ ಕೆಲವೊಂದು ಮಾಧ್ಯಮಗಳಿಗೆ ನಮ್ಮದೊಂದು ಧಿಕ್ಕಾರವಿರಲಿ.

ಪ್ರವಾದಿ (ಸ.ಅ)ರವರ ವಚನವು ನಮ್ಮ ಹೃದಯಾಂತರಾಳದಲ್ಲಿ ಕಂಪಿಸಲಿ,
ಯಾವತ್ತೂ ರಾಜ್ಯದ್ರೋಹದ ಕನಸು ನಮಗೆ ಕಾಣದಿರಲಿ,
ಎಂದು ಆಶಿಸುತ್ತಾ,


ಸಫ್ವಾನ್ ಅಡ್ಯನಡ್ಕ.

0 comments:

Post a Comment

 
Design by Free WordPress Themes | Bloggerized by - Free Blogger Themes | @javtl