ವಿಟ್ಲ: ಸರ್ಕಾರಿ ಬಸ್, ಆಟೋ ರಿಕ್ಷಾ ಹಾಗೂ ಬೈಕ್ ಪರಸ್ಪರ ಅಪಘಾತಕ್ಕೀಡಾದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ವಿಟ್ಲ ಠಾಣಾ ವ್ಯಾಪ್ತಿಯ ಮಾಣಿ ಜಂಕ್ಷನ್ನಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.
ಪಾಟ್ರುಕೋಡಿ ನಿವಾಸಿ ಜುಬೈರ್(೨೩) ಎಂಬವರು ಗಾಯಗೊಂಡ ಬೈಕ್ ಸವಾರ.
ಪುತ್ತೂರು ಕಡೆಯಿಂದ ಕೆಎಸ್ಆರ್ಟಿಸಿ ಬಸ್ ಮಂಗಳೂರು ಕಡೆ ತೆರಳುತ್ತಿದ್ದವು ಅದರ ಹಿಂಬಾದಿಯಿಂದ ಬೈಕ್ವೊಂದು ಚಲಿಸುತ್ತಿತ್ತು. ಬಸ್ಸಿನ ಮುಂಬಾಗದಲ್ಲಿ ಆಟೋ ರಿಕ್ಷಾ ಚಾಲಕ ಅದನ್ನು ಬದಿಗೆ ನಿಲ್ಲಿಸಲು ಮುಂದದಾಗ ಬಸ್ ಚಾಲಕ ಬ್ರೇಕ್ ಹಾಕಿದ್ದರಿಂದ ಬೈಕ್ ಬಸ್ಸಿನ ಹಿಂಬಾದಿಗೆ ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ. ಗಾಯಾಳುವನ್ನು ಬಂಟ್ವಾಳ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
0 comments:
Post a Comment