Showing posts with label ಕೋಮುವಾದಿಗಳ ದಸ್ವಪ್ನ..! ಅಕ್ಬರುದ್ದೀನ್ ಉವೈಸಿ. Show all posts
Showing posts with label ಕೋಮುವಾದಿಗಳ ದಸ್ವಪ್ನ..! ಅಕ್ಬರುದ್ದೀನ್ ಉವೈಸಿ. Show all posts

Saturday, 6 September 2014

ಅಪ್ಪಟ ದೇಶಪ್ರೇಮಿ, ಕೋಮುವಾದಿಗಳ ದುಸ್ವಪ್ನ..! ಅಕ್ಬರುದ್ದೀನ್ ಉವೈಸಿ


ಇವತ್ತು ಹಲವು ಮಾದ್ಯಮಗಳು ಮಾಡುವ ಹೇಸಿಗೆ ಕೆಟ್ಟ ಕೆಲಸಗಳಿಂದಾಗಿ ಮಾದ್ಯಮ ಜಗತ್ತು
ತನ್ನ ವರ್ಚಸ್ಸನ್ನು ಕಳೆದು ಕೊಳ್ಳುತ್ತಾ ಬಂದಿದೆ....ಒಬ್ಬ ನಿಜವಾದ ಅಪರಾದಿಯನ್ನು ನಿರಪರಾದಿಯನ್ನಾಗಿಯೂ,ಒಬ್ಬ ನಿರಪರಾದಿಯನ್ನು ಅಪರಾದಿಯನ್ನಾಗಿಯೂ ಬಿಂಬಿಸುವಲ್ಲಿ ಈ ಮಾದ್ಯಮಗಳು ಪ್ರಮುಖ ಪಾತ್ರವನ್ನು ವಹಿಸುತ್ತದೆ...ಇದರ ಪ್ರಭಾವವು ನಮಗೆ ಇಂದು ನಮ್ಮ ಕಣ್ಣ ಮುಂದೆಯೇ ಗೋಚರಿಸುತ್ತಾ ಇದೆ,ಆರ್.ಎಸ್.ಎಸ್ ನವರಿಂದ ತುಂಬಿ ತುಳುಕುತ್ತಿರುವ ಮಾದ್ಯಮ ಜಗತ್ತಿನ ದುಷ್ಟ ಕುತಂತ್ರಗಳಿಂದಾಗಿ ಇವತ್ತು ಅದೆಷ್ಟೋ ಮುಸ್ಲಿಂ ಯುವಕರು ಶಂಕಿತ ಭಯೋತ್ಪಾದಕರು ಎಂಬ ನೆಲೆಯಲ್ಲಿ ಬಂದಿತರಾಗಿ ಯಾವುದೇ ವಿಚಾರಣೆಯನ್ನು ಸಹ ಎದುರಿಸಲಾಗದೆ ತಮ್ಮ ಜೀವನದ ಅತ್ಯಮೂಲ್ಯ ಕ್ಷಣಗಳನ್ನು ಕಳೆದುಕೊಳ್ಳುತ್ತಿದ್ದಾರೆ..
    ನಿಮಗೆ ಗೊತ್ತಿರಬಹುದು ಕೆಲವು ದಿನಗಳ ಹಿಂದೆ ಮುಸ್ಲಿಮರ ಪ್ರಭಾವಿ  ನಾಯಕ ಹೈದರಾಬಾದ್ ಸಂಸದ ಜನಾಬ್ ಅಸದುದ್ದೀನ್ ಒವೈಸಿ ಯವರನ್ನು ಕೆಲವು ಮಾಧ್ಯಮಗಳು ಸುಳ್ಳು ಸುದ್ದಿಗಳನ್ನು ಬಿತ್ತರಿಸಿ ದೇಶ ದ್ರೋಹಿ ಎಂಬ ಹಣೆಪಟ್ಟಿಯನ್ನು ಕಟ್ಟಲು ಪ್ರಯತ್ನ ಪಟ್ಟವು....ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆದರೆ ಭಾರತದ ೨೫ ಕೋಟಿ ಮುಸ್ಲಿಮರು ಪಾಕಿಸ್ತಾನದ ಸೈನ್ಯದೊಂದಿಗೆ ಸೇರಿ ಭಾರತದ ವಿರುದ್ಧ  ಯುದ್ದ ಮಾಡುತ್ತೇವೆ ಎಂಬ ಹೇಳಿಕೆಯನ್ನು ನೀಡಿದ್ದಾರೆಂಬ ಸುಳ್ಳಿನ ಕಂತೆಯನ್ನು ಬಿತ್ತರಿಸಲಾಯಿತು.ಅಸದುದ್ದೀನ್ ಒವೈಸಿ ಯವರಂತಹ ನಾಯಕರಿಗೆ ಇಂತಹ ದುರ್ಗತಿ ಬಂದರೆ ಇನ್ನು ಒಬ್ಬ ಸಾಮಾನ್ಯ ಮುಸ್ಲಿಮನ ಸ್ಥಿತಿ ಗತಿಯೇನು??
ಪ್ರಜಾಪ್ರಭುತ್ವದ ಕಾವಲು ನಾಯಿಯಂತೆ ಕೆಲಸ ಮಾಡಬೇಕಾಗಿದ್ದಂತಹ ಇಂತಹ ಮಾದ್ಯಮಗಳಿಗಿಂತ ತನ್ನ ಕಾಮ ತೃಷೆಯನ್ನು ತೀರಿಸಿಕೊಳ್ಳಲು ಹೊತ್ತಲ್ಲದ ಹೊತ್ತಿನಲ್ಲಿ ಎಲ್ಲಂದರಲ್ಲಿ ಗಂಟು ಹಾಕಿ ಕೊಳ್ಳುವ ನಮ್ಮ ಊರಿನ ಬೊಗ್ಗಿ ಮತ್ತು ಬೊಗ್ರ ನಾಯಿಗಳು ಎಷ್ಟೋ ವಾಸಿ ಅಲ್ಲವೇ?
ಪಾಕಿಸ್ತಾನದ ನ್ಯೂಸ್ ವಾಹಿನಿಯೊಂದು ಪ್ರಾಯೋಜಿಸಿದಂತಹ ಇಂಡೋ-ಪಾಕ್ ಡಿಬೆಟ್ ಕಾರ್ಯಕ್ರಮವೊಂದರಲ್ಲಿ ಅಂದಿನ ಕೇಂದ್ರ ಸಚಿವರಾಗಿದ್ದಂತಹ ಶ್ರೀ.ಮಣಿಶಂಕರ್ ಅಯ್ಯರ್ ಮತ್ತು ಬಿ.ಜೆ.ಪಿ ಸಂಸದ ಕೀರ್ತಿ ಅಝಾದ್ ರೊಂದಿಗೆ ಸೇರಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿದಂತಹ ಜನಾಬ್ ಅಸದುದ್ದೀನ್ ಒವೈಸಿ ಯವರು ಪಾಕಿಸ್ತಾನದ ಕೆಲವು ಸಚಿವರುಗಳು ಕೇಳಿದ ಪ್ರಶ್ನೆಗಳಿಗೆ ತನ್ನ ಮಾತಿನ ಚಾಟಿ ಏಟಿನ ಮೂಲಕ  ಉತ್ತರಿಸಿದ ಒಂದು ಸಣ್ಣ ವೀಡಿಯೋ ತುಣುಕನ್ನು ನಾನು ಕೆಳಗೆ ಅಪ್ ಲೋಡ್ ಮಾಡಿದ್ದೇನೆ.....ದಯವಿಟ್ಟು ಈ ವೀಡಿಯೋವನ್ನು ವೀಕ್ಷಿಸಿ ನೀವೇ ನಿರ್ಧರಿಸಿ ಇಂತಹ ವ್ಯಕ್ತಿಗಳಿಂದ ಇಂತಹ ದೇಶ ಪ್ರೇಮಿಗಳಿಂದದೇಶದ್ರೋಹದ ಮಾತುಗಳು ಹೊರಡಲು ಸಾದ್ಯವೇ ಎಂದು..


ಸಂಘ ಪರಿವಾರದವರ ಕುತಂತ್ರದಿಂದಾಗಿ ಭಾರತದ ಮುಸ್ಲಿಮರು ಪಡುತ್ತಿರುವ ಯಾತನೆಯ ಬಗ್ಗೆ ಪಾಕಿಸ್ತಾನದ ಸಚಿವರೊಬ್ಬರು ವಿವರಿಸಿದಾಗ ವಾಸ್ತವವಾಗಿ ಅದು ನಿಜವಾಗಿದ್ದರೂ ಸಹ ತನ್ನ ದೇಶವು ಇನ್ನೊಂದು ರಾಷ್ಟ್ರದೆದುರು ತಲೆ ತಗ್ಗಿಸಬಾರದೆಂಬ ಉದ್ದೇಶದಿಂದ ತನ್ನ ತೀಕ್ಷ್ಣವಾದ ಪ್ರತಿಕ್ರಿಯೆಯ ಮೂಲಕ ಆ ಸಚಿವನ ಬಾಯಿ ಮುಚ್ಚಿಸಿ ನಿಜವಾದ ದೇಶ ಪ್ರೇಮವನ್ನು ಮೆರೆದ ಅಸದುದ್ದೀನ್ ಒವೈಸಿಯವರ ದೇಶ ಪ್ರೇಮವೇ ಇವತ್ತು ಭಾರತದ ಪ್ರತಿಯೊಬ್ಬರಿಗೂ ಮಾದರಿ ಎಂಬುದನ್ನು ಮರೆಯದಿರಿ

ಇಂತೀ
ನಿಮ್ಮ ಸಹೋದರ
ಮಹಮ್ಮದ್ ಅನ್ವರ್ ಮಠ

 
Design by Free WordPress Themes | Bloggerized by - Free Blogger Themes | @javtl